ಸಾಯಿ ಬಾಬಾ ರೂಂನಲ್ಲಿ 456 ಕೆಜಿ ಚಿನ್ನ, 200 ಕೋಟಿರು ನಗದು?

ದೇವಮಾನವ ಸತ್ಯಸಾಯಿಬಾಬ ಅವರ ನಿವಾಸ 'ಯಜುರ್ ಮಂದಿರ"ದ ಕೋಣೆಯನ್ನು ಸತ್ಯಜಿತ್ ಮೂಲಕ ಟ್ರಸ್ಟ್ ಗುರುವಾರ ತೆರೆಯಿಸಿದೆ. ಈ ಕೋಣೆಗೆ ಪ್ರವೇಶಿಸಲು ಬಯೋಮೆಟ್ರಿಕ್ ವ್ಯವಸ್ಥೆ ಇರುವ ಕಾರಣ ಈ ಸೀಕ್ರೇಟ್ ಕೋಡ್ಗಳನ್ನು ಸತ್ಯಜಿತ್ ಅವರು ಮಾತ್ರವೇ ತಿಳಿದ ಹಿನ್ನಲೆಯಲ್ಲಿ ಸತ್ಯಜಿತ್ ಅವರನ್ನು ಟ್ರಸ್ಟ್ ಪ್ರಶಾಂತಿ ನಿಯಲಕ್ಕೆ ಕರೆಯಿಸಿಕೊಂಡಿತ್ತು.
ಟ್ರಸ್ಟ್ನ ಹೆಸರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅನಂತಪುರ ಜಿಲ್ಲೆಯ ವಿವಿಧ ಶಾಖೆಗಳ ಲಾಕರ್ಗಳಲ್ಲಿ ಅನೇಕ ದಾಖಲೆಗಳನ್ನು ಇರಿಸಲಾಗಿತ್ತು. ಮತ್ತು ಕೆಲ ಅತಿ ಮುಖ್ಯ ಕೀಗಳನ್ನು ಕೂಡ ಇರಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಟ್ರಸ್ಟ್ನ ಎಲ್ಲಾ ಸದಸ್ಯರ ಮನವಿ ಮೇರೆಗೆ ಎಸ್ಬಿಐನ ಹಿರಿಯ ಅಧಿಕಾರಿ ಶಿವಕುಮಾರ್ ಅವರು ಕೂಡ 'ಯಜುರ್ ಮಂದಿರ" ಕೋಣೆ ತೆರೆದಾಗ ಎದುರಲ್ಲೇ ಇದ್ದರು.
ಅಲ್ಲದೇ, ಕೋಣೆಯಲ್ಲಿನ ಹಣವನ್ನು ಎಣಿಸಲಿಕ್ಕಾಗಿ ಬ್ಯಾಂಕ್ನ ಹಿರಿಯ ಅಧಿಕಾರಿಗಳು ಕೋಣೆ ಪ್ರವೇಶಿಸಿದ್ದು ಎರಡು ದಿನದಿಂದ ನೋಟುಗಳ ಎಣಿಕೆ, ಕೋಟ್ಯಾಂತರ ರುಪಾಯಿ ಮೌಲ್ಯದ ಬಂಗಾರ, ವಜ್ರಗಳ ಕುರಿತು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
ಭಗವತಿ, ಇಂದೂಲಾಲ್ ಶಾ, ರತ್ನಾಕರ್, ನಾಗಾನಂದಶೆಟ್ಟಿ ಸೇರಿ ಇನ್ನಿತರ ಟ್ರಸ್ಟಿಗಳ ಸಮ್ಮುಖದಲ್ಲೇ ದಾಖಲೆಗಳ ಮೂಲಕ ಈ ಕಾರ್ಯ ನಡೆದಿದೆ. ಟ್ರಸ್ಟ್ನ ಸದಸ್ಯರು ಮತ್ತು ಸೇವಾ ಸದಸ್ಯರೇ ಈ ಎಲ್ಲಾ ಚಟುವಟಿಕೆಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.
ಇದೆಲ್ಲದರ ಮಧ್ಯೆ ದೇಶದ ಗಣ್ಯ ಉದ್ಯಮಿ ರತನ್ ಟಾಟಾ ಪುಟ್ಟಪರ್ತಿಗೆ ವಿಶೇಷ ವಿಮಾನದಲ್ಲಿ ಶುಕ್ರವಾರ ಭೇಟಿ ನೀಡಿ ಟ್ರಸ್ಟ್ ಹಮ್ಮಿಕೊಂಡಿದ್ದ 'ವಿದ್ಯಾವಾಹಿನಿ" ಶಿಕ್ಷಣ ಸೇವಾ ಯೋಜನೆಗೆ ಚಾಲನೆ ನೀಡಿದ್ದಾರೆ.
ಈ ಮಾಹಿತಿ ಅಧಿಕೃತ: 450 ಕೆಜಿ ಬಂಗಾರ, ನೂರಾರು ಕೋಟಿ ರುಪಾಯಿ ಮೌಲ್ಯದ ವಜ್ರಗಳು, ಅತಿ ಮುಖ್ಯವಾದ ಕಾಗದ ಪತ್ರಗಳು ಸಿಕ್ಕಿವೆ. ಟ್ರಸ್ಟ್ನ ಕೆಲ ಸದಸ್ಯರು ವಂಚಿಸಲಿಕ್ಕಾಗಿ ಈ ಕಾರ್ಯವನ್ನು ಅತ್ಯಂತ ರಹಸ್ಯವಾಗಿ ನಡೆಸುತ್ತಿದ್ದಾರೆ. ಸೇವೆಗಾಗಿ ಭಕ್ತರು ಬಾಬಾಗೆ ನೀಡಿದ್ದ ಹಣ ಲಪಟಾಯಿಸುವ ತಂತ್ರಗಳು ಟ್ರಸ್ಟ್ನ ಬಹುತೇಕರಲ್ಲಿದೆ.
ಟ್ರಸ್ಟ್ನ ವಾರಸುದಾರತ್ವದ ವಿಲ್ ಕೂಡ ಈ ಸಂದರ್ಭದಲ್ಲಿ ಬಯಲಾಗಿದೆ ಎನ್ನುವುದು ಪುಟ್ಟಪರ್ತಿ ಜನರ ಸಾಮಾನ್ಯ ಅಭಿಪ್ರಾಯ. ಆದರೆ, ಒಟ್ಟಾರೆ ಲೆಕ್ಕ ಹಾಕುವ, ದಾಖಲಿಸುವ ಕೆಲಸ ನಡೆದಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications