ಮರ, ಕೊಂಬೆ ಒಣಗಿ ಬೀಳುವಂತಿದ್ದರೆ ತಪ್ಪದೇ ಕರೆ ಮಾಡಿ

Mysore city corporation helpline
ಮೈಸೂರು, ಜೂ. 15: ಮೈಸೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಬೆಳೆದಿರುವ ಮರಗಳ ಪೈಕಿ ಕೆಲವು ಮರಗಳು, ಕೊಂಬೆಗಳು ಒಣಗಿವೆ. ಈಗ ಬೇಸಿಗೆ ಕಾಲ ಮುಗಿದು ಮಳೆಗಾಲ ಪ್ರಾರಂಭವಾಗಿದ್ದು ದೊಡ್ಡ ದೊಡ್ಡ ಮರಗಳು, ಕೊಂಬೆಗಳು ಗಾಳಿ ಮಳೆ ರಭಸಕ್ಕೆ ಮುರಿದು ಬೀಳುವುದನ್ನು ತಪ್ಪಿಸಲು ನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಸುರಕ್ಷಿತ ಕ್ರಮಗಳನ್ನು ಸಿದ್ಧಪಡಿಸಿಕೊಂಡಿದೆ.

ಈ ಮೂಲಕ ಸಾರ್ವಜನಿಕರು ಅಥವಾ ಅವರ ಆಸ್ತಿಪಾಸ್ತಿ ಮೇಲೆ ಬಿದ್ದು ಭಾರಿ ಅನಾಹುತವಾಗುವ ಸಂಭವವನ್ನು ಕಮ್ಮಿ ಮಾಡಲು ಜನತೆ ಸಹಕಾರ ಕೋರಲಾಗಿದೆ. ಅಂಥ ಮರಗಳನ್ನು ತೆರವುಗೊಳಿಸಲು ಹಾಗೂ ಮುಂಜಾಗ್ರತೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸಾರ್ವಜನಿಕರು ಅಂಥ ಮರ ಕೊಂಬೆಗಳು ಗಮನಕ್ಕೆ ಬಂದರೆ ಕೂಡಲೇ ಅರಣ್ಯ ಇಲಾಖೆ ಮೈಸೂರು ವಲಯ ಕಚೇರಿಗೆ ತಿಳಿಸಲು ಕೋರಿದೆ.

ಸಾರ್ವಜನಿಕರು ಅರಣ್ಯ ಇಲಾಖೆಯ ಮೈಸೂರು ವಲಯ ಅರಣ್ಯಾಧಿಕಾರಿ ವಿ ಗೋವಿಂದಯ್ಯ :ಮೊಬೈಲ್ ಸಂಖ್ಯೆ 91414 16170 ಅಥವಾ ವನಪಾಲಕ ಕೆ.ಸಿ. ನಾಗಭೂಷಣಾರಾಧ್ಯ :77602 21008 ಅಥವಾ ಎಲ್. ಮಲ್ಲಶೆಟ್ಟಿ: 94490 85344 ಇವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಮೈಸೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್ ಗೋಪಿನಾಥ್ ಮನವಿ ಮಾಡಿದ್ದಾರೆ.
**
ಕುಂದುಕೊರತೆ ಫೋನ್ ಇನ್: ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿ ತಿಂಗಳಿನಂತೆ ಈ ತಿಂಗಳೂ 3ನೇ ಗುರುವಾರ ದಿನಾಂಕ 16ರಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆವರೆಗೆ ಫೋನ್ ಇನ್ ಕಾರ್ಯಕ್ರಮ ಹಾಗೂ ನಂತರ ಸಾರ್ವಜನಿಕ ಕುಂದುಕೊರತೆ ಕುರಿತ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+