ಮರ, ಕೊಂಬೆ ಒಣಗಿ ಬೀಳುವಂತಿದ್ದರೆ ತಪ್ಪದೇ ಕರೆ ಮಾಡಿ

ಈ ಮೂಲಕ ಸಾರ್ವಜನಿಕರು ಅಥವಾ ಅವರ ಆಸ್ತಿಪಾಸ್ತಿ ಮೇಲೆ ಬಿದ್ದು ಭಾರಿ ಅನಾಹುತವಾಗುವ ಸಂಭವವನ್ನು ಕಮ್ಮಿ ಮಾಡಲು ಜನತೆ ಸಹಕಾರ ಕೋರಲಾಗಿದೆ. ಅಂಥ ಮರಗಳನ್ನು ತೆರವುಗೊಳಿಸಲು ಹಾಗೂ ಮುಂಜಾಗ್ರತೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸಾರ್ವಜನಿಕರು ಅಂಥ ಮರ ಕೊಂಬೆಗಳು ಗಮನಕ್ಕೆ ಬಂದರೆ ಕೂಡಲೇ ಅರಣ್ಯ ಇಲಾಖೆ ಮೈಸೂರು ವಲಯ ಕಚೇರಿಗೆ ತಿಳಿಸಲು ಕೋರಿದೆ.
ಸಾರ್ವಜನಿಕರು ಅರಣ್ಯ ಇಲಾಖೆಯ ಮೈಸೂರು ವಲಯ ಅರಣ್ಯಾಧಿಕಾರಿ ವಿ ಗೋವಿಂದಯ್ಯ :ಮೊಬೈಲ್ ಸಂಖ್ಯೆ 91414 16170 ಅಥವಾ ವನಪಾಲಕ ಕೆ.ಸಿ. ನಾಗಭೂಷಣಾರಾಧ್ಯ :77602 21008 ಅಥವಾ ಎಲ್. ಮಲ್ಲಶೆಟ್ಟಿ: 94490 85344 ಇವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಮೈಸೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್ ಗೋಪಿನಾಥ್ ಮನವಿ ಮಾಡಿದ್ದಾರೆ.
**
ಕುಂದುಕೊರತೆ ಫೋನ್ ಇನ್: ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿ ತಿಂಗಳಿನಂತೆ ಈ ತಿಂಗಳೂ 3ನೇ ಗುರುವಾರ ದಿನಾಂಕ 16ರಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆವರೆಗೆ ಫೋನ್ ಇನ್ ಕಾರ್ಯಕ್ರಮ ಹಾಗೂ ನಂತರ ಸಾರ್ವಜನಿಕ ಕುಂದುಕೊರತೆ ಕುರಿತ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಯಲಿದೆ.











Click it and Unblock the Notifications