ಜೆಡೆ ಹತ್ಯೆ: ದಾವೂದ್ ಶಿಷ್ಯ ಛೋಟಾ ಶಕೀಲ್ ಬಂಟರ ಬಂಧನ

ಈ ಕೊಲೆಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಶೂಟರ್ ಗಳನ್ನು ಹಿಡಿಯಲು ಪೊಲೀಸರು ಜಾಲ ಬೀಳಿಸಿದ್ದಾರೆ. ಬಂಧಿತ ಇಕ್ಬಾಲ್ ಈ ಹಿಂದೆ ಮೂರು ಕಳ್ಳತನ ಹಾಗೂ ಒಂದು ಕೊಲೆ ಕೇಸ್ ನಲ್ಲಿ ಆರೋಪಿ ಆಗಿದ್ದಾನೆ. ಉಳಿದ ಆರೋಪಿಗಳಲ್ಲಿ ಗಂಧದ ಮರ ಸ್ಮಗಲಿಂಗ್ ಮಾಡುವ ದುಬೈನಲ್ಲಿರುವ ಜಾಫರ್ ಖಾಸಿಂ ಹಾಗೂ ಮತ್ತೊಬ್ಬನನ್ನು ಆದಷ್ಟು ಬೇಗ ಬಂಧಿಸುವುದಾಗಿ ಮುಂಬೈ ಪೊಲೀಸ್ ಆಯುಕ್ತ ಆರುಪ್ ಪಟ್ನಾಯಕ್ ಹೇಳಿದ್ದಾರೆ.
ದಾವೂದ್ ಆಪ್ತ ಖಾಸಿಂ ಹಾಗೂ ಅವನ ಸಹಚರರು ನಡೆಸುತ್ತಿದ್ದ ಅಕ್ರಮ ದಂಧೆಯ ಬಗ್ಗೆ ಜೆಡೆ ಲೇಖನ ಬರೆಯತೊಡಗಿದ್ದರು. ಜೆಡೆ ಯೊಂದಿಗೆ ಡೀಲ್ ಕುದರಿಸ ಹೊರಟ ಖಾಸಿಂ, ಇನ್ ಫಾರ್ಮರ್ ಮೂಲಕ 10 ಲಕ್ಷ ರೂ ಆಫರ್ ನೀಡಿದ. ಆದರೆ, ಇದಕ್ಕೆ ಒಪ್ಪದ ಜೆಡೆ ಲೇಖನ ಬರೆದು ಪ್ರಕಟಿಸುವುದಾಗಿ ಹೇಳಿದ್ದು, ಖಾಸಿಮ್ ನನ್ನು ಕೆರಳಿಸಿದೆ. ಛೋಟಾ ಶಕೀಲ್ ಸಹಾಯ ಪಡೆದು ಜೆಡೆ ಅಧ್ಯಾಯ ಜೂ 11 ರಂದು ಮುಕ್ತಾಯ ಹಾಡಿದ್ದಾರೆ.












Click it and Unblock the Notifications