ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾನ್ಸೂನ್ ನಂತರ ಹೆಲಿ ಟೂರಿಸಂ ಶುರು: ಜನಾರ್ದನ ರೆಡ್ಡಿ
ಈಗ ಟೆಂಡರ್ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. ಹೆಲೆಕಾಪ್ಟರ್ ಬಳಸಿ ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳ ವೀಕ್ಷಣೆಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿಧಾನಸೌಧ ಮುಂಭಾಗದಲ್ಲಿ ಮನೆಯಂಗಳಕ್ಕೆ ಕ್ರೀಡೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಜನಾರ್ದನ ರೆಡ್ಡಿ ಹೇಳಿದರು.
ಅಕ್ರಮ ಗಣಿಗಾರಿಕೆ ನಡೆಸಿಲ್ಲ: ಸಿಇಸಿ ಸಮಿತಿ ವರದಿಯಂತೆ ಈಗ ಬಳ್ಳಾರಿಯಲ್ಲಿ 99 ಗಣಿಗಳ ಸರ್ವೆ ಕಾರ್ಯ ನಡೆದಿದೆ. ಈ ಸರ್ವೆ ಕಾರ್ಯ ಮುಗಿದ ಮೇಲೆ ಸತ್ಯಾಂಶ ಹೊರಬೀಳಲಿದೆ. ಲೋಕಾಯುಕ್ತ ವರದಿಯಲ್ಲೂ ತಾವು ಸಾಚಾ ಎಂಬು ಸಾಬೀತಾಗಲಿದೆ ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ನಡೆದಿರುವ ಸಮೀಕ್ಷೆ ವರದಿ ಬಂದ ನಂತರ ನಮ್ಮ ಬಗ್ಗೆ ಆರೋಪ ಮಾಡುವವರ ಬಾಯಿ ಮುಚ್ಚಲಿದೆ ಎಂದು ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
Comments
ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಕ್ರೀಡೆ ಕರ್ನಾಟಕ ಸರ್ಕಾರ janardhana reddy illegal mining karnataka government sports
English summary
I have not involved in any illegal mining, I will come clean after Supreme court CEC survey report. Heli Tourism will be started in state after monsoon. Government taken necessary steps to encourage sports said Minister Janardhan Reddy.
Story first published: Wednesday, June 15, 2011, 18:21 [IST]