ಹುಣಸೂರು ವಿದ್ಯಾರ್ಥಿಗಳ ಅಪಹರಣ, ಕೊಲೆ: ಆರ್.ಕೆ. ದತ್ತಾ ವಿಚಾರಣೆಗೆ

ಗೃಹ ಸಚಿವ ಆರ್. ಅಶೋಕ್ ಈ ಕುರಿತು ಆದೇಶ ಹೊರಡಿಸಿದ್ದು, ದತ್ತಾ ನೇತೃತ್ವದ ತಂಡ ತಕ್ಷಣದಿಂದಲೇ ತನಿಖೆ ಕೈಗೆತ್ತಿಕೊಂಡಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ, ವಿದ್ಯಾರ್ಥಿಗಳ ಹತ್ಯೆ ಖಂಡಿಸಿ, ಹುಣುಸೂರು ಪಟ್ಟಣದಲ್ಲಿ ಇಂದು (ಜೂನ್ 13) ಬಂದ್ ಆಚರಿಸಲಾಗುತ್ತಿದೆ.
ಮೈಸೂರು ಮಹಾಜನ ಕಾಲೇಜಿನ ಬಿಬಿಎಂ ವಿದ್ಯಾರ್ಥಿಗಳಾದ ವಿಘ್ನೇಶ್ ಮತ್ತು ಸುಧೀಂದ್ರ ಅವರನ್ನು ಒಂದು ವಾರದ ಹಿಂದೆ ಅಪಹರಿಸಿದ್ದ ದುಷ್ಕರ್ಮಿಗಳು 6 ಕೋಟಿ ರುಪಾಯಿ ಬೇಡಿಕೆಯಿಟ್ಟಿದ್ದರು. ಹಣ ದೊರೆಯದೆ ನಿರಾಶೆಗೊಂಡ ದುಷ್ಮರ್ಮಿಗಳು ಈ ಹತ್ಯೆಗಳನ್ನು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಭಾನುವಾರ ಬೆಳಗ್ಗೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ರಸ್ತೆ ಬದಿ ವಿಘ್ನೇಶ್ ಮತ್ತು ಸುಧೀಂದ್ರ ಅವರ ಶವಗಳು ದೊರೆತಿದ್ದವು.












Click it and Unblock the Notifications