ರಿಲಯನ್ಸ್ ಸುವರ್ಣಷಟ್ಪಥ: ಬೆಂಗಳೂರು-ಚೆನ್ನೈ ರಸ್ತೆ

ಇದು ರಾಷ್ಟ್ರೀಯ ಸುವರ್ಣ ಚತುಷ್ಪಥ(Golden Quadrilateral) ಹೆದ್ದಾರಿಯ ಭಾಗವಾಗಿದೆ. ಈ ಗುತ್ತಿಗೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಸ್ಪರ್ಧಾತ್ಮಕ ಗುತ್ತಿಗೆ ಮೂಲಕ ನೀಡಿದ್ದು, ಇದರಲ್ಲಿ ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆಯನ್ನು ಒಳಗೊಂಡಿದೆ. ಇದರಲ್ಲಿ ಕಂಪೆನಿ 26 ವರ್ಷಗಳವರೆಗೆ ಟೋಲ್ ಸಂಗ್ರಹಿಸಲಿದೆ. ವಿಸ್ತರಣೆ ಪೂರ್ಣಗೊಂಡ ನಂತರ ವಾಹನ ದಟ್ಟಣೆ ಕಡಿಮೆಯಾಗುವದಲ್ಲದೆ ಹೆದ್ದಾರಿ ಟ್ರಾಫಿಕ್ ಸಾಮರ್ಥ್ಯ 27,000 ವಾಹನಗಳಿಗೇರಲಿದೆ. ಈ ಅಂತಾರ್ರಾಷ್ಟ್ರೀಯ ಗುಣಮಟ್ಟದ ಹೆದ್ದಾರಿಯಲ್ಲಿ ಸಿಸಿ ಟಿವಿಗಳ ಅಳವಡಿಕೆ, ವೈದ್ಯಕೀಯ ಸೇವೆ, ಮತ್ತು ತುರ್ತು ಸೌಲಭ್ಯಗಳನ್ನೂ ರಿಲಯನ್ಸ್ ಒದಗಿಸಲಿದೆ.
ಲಾರಿ ಸಂಚಾರ ಇಲ್ಲ: ಬೆಂಗಳೂರು ಚೆನ್ನೈ ಹೆದ್ದಾರಿ ಸೇರಿದಂತೆ ಶಿರಾ, ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಗಳಲ್ಲಿ ಜೂ. 15 ರಿಂದ ಲಾರಿ ಮತ್ತು ಖಾಸಗಿ ಬಸ್ ಗಳು ಸಂಚರಿಸುವುದಿಲ್ಲ. ಟೋಲ್ ದರ ಹೆಚ್ಚಳ ಹಿಂಪಡೆಯುವವರೆಗೂ ಸಂಚಾರ ಬಂದ್ ಆಗಲಿದ್ದು, ಪ್ರತಿಭಟನೆ ಮುಂದುವರೆಯಲಿದೆ ಎಂದು ಲಾರಿ ಮಾಲೀಕರ ಸಂಘದ ಪದಾಧಿಕಾರಿ ಜಿಆರ್ ಷಣ್ಮುಖಪ್ಪ ತಿಳಿಸಿದ್ದಾರೆ.












Click it and Unblock the Notifications