ಪತ್ನಿ ಮೇಲೆ ಕೋಪ ಅತ್ತೆ ಮೇಲೆ ತೀರಿಸಿಕೊಂದ!

ಅವನ ಹೆಸರು ವಿಜಯ್ ಕುಮಾರ್(27). ಆಡುಗೋಡಿ ಸದ್ಯಕ್ಕೆ ಕ್ಯಾಬ್ ಡ್ರೈವರ್ ಆಗಿದ್ದ. ಅನ್ಯಜಾತಿಯ ಹುಡುಗಿ ವಿಜಯಲಕ್ಷ್ಮಿ25 ಯನ್ನು ಮದುವೆಯಾಗಿದ್ದ. ಆದರೆ, ಇದು ವಿಜಯಲಕ್ಷ್ಮಿ ತಾಯಿಗೆ ಇಷ್ಟವಿರಲಿಲ್ಲ. 2009 ರಲ್ಲಿ ಮದುವೆಯಾದ ಈ ವಿಜಯ ಜೋಡಿ ನಡುವೆ ಮನಸ್ತಾಪ, ಹೊಡೆದಾಟ, ಬಡಿದಾಟ ಕಾಮನ್ ಆಗಿಬಿಟ್ಟಿತ್ತು. ಹೋಗ್ಲಿ ಮಗು ಹುಟ್ಟಿದ ಮೇಲಾದರೂ ಸಂಸಾರ ಸರಿ ಹೋಗುತ್ತೆ ಅಂದ್ರೆ, ಪರಿಸ್ಥಿತಿ ಇನ್ನೂ ಬಿಗಡಾಯಿಸಿತು. ವಿಜಯಲಕ್ಷ್ಮಿ ಮಗು ಕರೆದುಕೊಂಡು ತವರು ಮನೆಯಲ್ಲಿ ನೆಲೆಸಿದಳು.
ತನ್ನ ಸಂಸಾರದ ಈ ದುಃಸ್ಥಿತಿಗೆ ಅತ್ತೆಯೇ ಕಾರಣ ಎಂದು ವಿಜಯ್ ಕುಮಾರ್ ಗೆ ಅನ್ನಿಸತೊಡಗಿತ್ತು. ಗುರುವಾರ ಮಧ್ಯಾಹ್ನ ಅತ್ತೆ ಮನೆಗೆ ಬಂದು ಹೆಂಡತಿಯನ್ನು ಕರೆದುಕೊಂಡು ಹೋಗಲು ನಿರ್ಧರಿಸುತ್ತಾನೆ. ಆದರೆ, ವಿಜಯನ ಮಾತು ಕೇಳದ ಲಕ್ಷ್ಮಿ ತವರುಮನೆಯಲ್ಲೇ ಉಳಿಯುತ್ತಾಳೆ. ಕೋಪಗೊಂಡ ವಿಜಯ ತನ್ನ ಹಳೆ ರೌಡಿಸಂ ರೋಷವನ್ನು ತೋರಿಸಿತ್ತಾ ಕತ್ತಿ ಹಿಡಿದು ಆರ್ಭಟಿಸಿದ್ದಾನೆ. ಬೆಚ್ಚಿದ ಲಕ್ಷ್ಮಿ ಹಿಂದೆ ಸರಿದಿದ್ದಾಳೆ. ಮಗಳ ರಕ್ಷಣೆಗೆ ನಿಂತ ತಾಯಿ ತಲೆ ಕೊಟ್ಟು ಪ್ರಾಣ ತೆತ್ತಿದ್ದಾಳೆ.
ಆಡುಗೋಡಿ ಹಾಗೂ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ವಿಜಯ್ ಕೊರಳಿಗೆ ಅತ್ತೆ ಕೊಂದ ಕೇಸ್ ಕೂಡಾ ಸುತ್ತಿಕೊಂಡಿದ್ದು, ವಿಜಯ್ ಗಾಗಿ ಮಡಿವಾಳ ಠಾಣಾ ಪೊಲೀಸರು ಹುಡುಕಾಟ ನಡೆಸಿದ್ದಾರೆ.












Click it and Unblock the Notifications