ಮತಾಂತರಗೊಂಡ ದಲಿತರಿಗೆ ಮೀಸಲಾತಿ ಬೇಡ: ಬಿಜೆಪಿ

ರಾಷ್ಟ್ರಪತಿಯವರಿಗೆ ಬರೆದ ಮನವಿ ಪತ್ರವನ್ನು ನಿನ್ನೆ ಜಿಲ್ಲಾಧಿಕಾರಿ ಎಂ.ಟಿ. ರಾಜು ಅವರಿಗೆ ನೀಡಲಾಗಿದೆ. ಮತಾಂತರಗೊಂಡವರಿಗೆ ಮೀಸಲಾತಿ ನೀಡುವುದರಿಂದ ಮತಾಂತರವಾಗದ ದಲಿತರಿಗೆ ನೀಡುವ ಮೀಸಲಾತಿ ಕಡಿತವಾಗುತ್ತದೆ ಎಂದು ಅದರಲ್ಲಿ ಹೇಳಲಾಗಿದೆ.
ಮಾನ್ಯ ರಾಷ್ಟ್ರಪತಿಯವರು ರಂಗನಾಥ್ ಮಿಶ್ರಾ ಪ್ರಸ್ತಾಪಕ್ಕೆ ಅಂಕಿತ ಹಾಕಬಾರದೆಂದು ಮನವಿ ಮಾಡಲಾಗಿದೆ. ಇದರಿಂದ ಮತಾಂತರವಾಗದ ದಲಿತರಿಗೆ ಅನ್ಯಾಯವಾಗಲಿದೆ ಎಂದು ಬಿಜೆಪಿ ವಾದಿಸಿದೆ.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಟಪಾಡಿ ಶಂಕರ್ ಪೂಜಾರಿ, ಬಿಜೆಪಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಶಿವರಾಜ್ ಮಲ್ಲಾರ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರ ಮಲ್ಲಾರ್ ಒಟ್ಟಾಗಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ.











Click it and Unblock the Notifications