ಅವರು ರಾಂಚಿ ಮಾಟಗಾತಿಯನ್ನು ಕತ್ತರಿಸಿ ತಿಂದರು!
ರಾಂಚಿ
ಜೂ 7: ಕೇವಲ ಕಥೆಗಳಲ್ಲಿ, ಪುರಾಣಗಳಲ್ಲಿ ಹಾಗೂ ಕೆಲವೊಮ್ಮೆ ಯಾವುದೋ ದೂರದೂರಿನಲ್ಲಿ ಕೇಳುತ್ತಿದ್ದ ಕಥೆ ಈಗ ಧೋನಿ ಊರು ರಾಂಚಿಯಲ್ಲಿ ನಡೆದಿದೆ. ಆಕೆ ಮಾಟಗಾತಿಯಾಗಿದ್ದೆ ತಪ್ಪಾಗಿದೆ. ಮಾಟ ಮಾಂತ್ರ ಯಂತ್ರ ಮಂತ್ರದ ಸಹವಾಸಕ್ಕೆ ಬಿದ್ದಿದ್ದ ಮಹಿಳೆಯೊಬ್ಬಳನ್ನು ಕೊಂದು, ಸುಟ್ಟು ತಿಂದು ತೇಗಿದ ಘಟನೆ ಜಾರ್ಖಂಡ್ ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ. id="toptextpromo">45
ವರ್ಷದ ವಿಧವೆ ಐತ್ವಾರಿ ದೇವಿಯನ್ನು ಗುಮ್ಲಾ ಜಿಲ್ಲೆಯ ನವ್ಗಾಯ್ ಗ್ರಾಮದಲ್ಲಿ ಕೊಲ್ಲಲಾಗಿದೆ. ರಾಂಚಿಯಿಂದ ಸುಮಾರು 14೦ ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಹೀಗೊಂದು ಘಟನೆ ನಡೆದಿದೆ ಎಂದು ಐತ್ವಾದೇವಿಯ ಮಗ 16 ವರ್ಷದ ಅವಧ್ ನಾಯಕ್ ಸೋಮವಾರ ಸಂಜೆ ನಮ್ಮ ಗಮನಕ್ಕೆ ಬಂದಿದೆ. ಆಕೆಯನ್ನು ಕೊಂದವರು ಪ್ರಕರಣವನ್ನು ಮುಚ್ಚಿಹಾಕಲು ಆಕೆಯ ಶವವನ್ನು ನಾಶ ಮಾಡಲು ಮುಂದಾಗಿದ್ದಾರೆ. ಆದರೆ, ಅವರು ಅನುಸರಿಸಿದ ಮಾರ್ಗ ಮಾತ್ರ ಐತ್ವಾದೇವಿಯ ಮಾಟ ಮಂತ್ರಕ್ಕೂ ಭೀಕರವಾಗಿತ್ತು. id='are-slot-1' class='oiad oi-axt oiadv'> id='top-searched-articles'>ಸೋಮವಾರ
ಆಕೆಯನ್ನು ಕೊಂದ ದುರುಳರು ಆಕೆಯ ದೇಹವನ್ನು ಮಾಂಸ ಕತ್ತರಿಸುವಂತೆ ಕತ್ತರಿಸಿ, ಚೆನ್ನಾಗಿ ಸುಟ್ಟು ಎಲ್ಲರೂ ರಾತ್ರಿ ಊಟದಲ್ಲಿ ಬಡಿಸಿಕೊಂಡು ನುಂಗಿದ್ದಾರೆ. ಆದರೆ, ಇದಕ್ಕೆ ಯಾವುದೇ ವಿಶೇಷ ಕಾರಣವಿದೆಯೇ ತಿಳಿದು ಬಂದಿಲ್ಲ. ಸಾಮಾನ್ಯವಾಗಿ ಮಾಟ ಮುಂತಾದ ವಾಮ ವಿದ್ಯೆ ಅನುಸರಿಸುವವರು ಮಾತ್ರ ಈ ರೀತಿ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.











Click it and Unblock the Notifications