ಹಠಯೋಗಿ ಬಾಬಾಗೆ ಬೆಂಗಳೂರು ಬೆಂಬಲ

Freedom Park, Bangalore
ಬೆಂಗಳೂರು ಜೂ 4: ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಇಡೀ ದೇಶವೇ ಹೋರಾಟಕ್ಕೆ ಇಳಿದರೆ ಭಾರತ ಸೂಪರ್ ಪವರ್ ಆಗುವುದರಲ್ಲಿ ಸಂಶಯವಿಲ್ಲ. ವಿದೇಶದಲ್ಲಿರುವ ಕಪ್ಪು ಹಣ ಹಿಂದಕ್ಕೆ ತರಲು ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಪಕ್ಷಾತೀತವಾದದ್ದು ಎಂದು ಬಾಬಾ ರಾಮ್ ದೇವ್ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಘೋಷಿಸುತ್ತಿದ್ದಾರೆ ಅದರ ಪ್ರತಿಧ್ವನಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಗುತ್ತಿತ್ತು.

ಯೋಗ ಗುರು ಬಾಬಾ ರಾಮ್ ಹಮ್ಮಿಕೊಂಡಿರುವ ಭಷ್ಟ್ರಾಚಾರ ನಿರ್ಮೂಲನೆ ಸತ್ಯಾಗ್ರಹಕ್ಕೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಪತಂಜಲಿ ಯೋಗ ಪೀಠ ಘಟಕವು ರಾಜ್ಯದ ವಿವಿಧೆಡೆ ಸತ್ಯಾಗ್ರಹ, ಜಾಥಾಗಳನ್ನು ಹಮ್ಮಿಕೊಂಡಿದೆ. ಇಂದು ಬೆಳಗ್ಗಿನಿಂದಲೇ ಫ್ರೀಡಂ ಪಾರ್ಕ್ ನತ್ತ ಅನೇಕ ಜನರು ಆಗಮಿಸುತ್ತಿದ್ದಾರೆ. ಶಿವಮೊಗ್ಗ ಸುಬ್ಬಣ್ಣ ಸೇರಿದಂತೆ ಅನೇಕ ಗಾಯಕರು ದೇಶ ಭಕ್ತಿ ಗೀತೆಗಳನ್ನು ಹಾಡಿ, ಯುವಕರನ್ನು ಹುರಿ ದುಂಬಿಸುತ್ತಿದ್ದಾರೆ ಎಂದು ಪತಂಜಲಿ ಯೋಗ ಪೀಠದ ದಯಾನಂದ ಸ್ವಾಮಿ ಹೇಳಿದರು.

ಇಂದು ಇಲ್ಲಿ ಉಪವಾಸ ಕೂರಲಿರುವ ವ್ಯಕ್ತಿಗಳನ್ನು ಮೊದಲಿಗೆ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿ, ದೈಹಿಕವಾಗಿ ಸಮರ್ಥರಿದ್ದರೆ ಎಂದು ವೈದ್ಯರು ಹೇಳಿದ ಮೇಲೆ ಅವರಿಗೆ ವೇದಿಕೆ ಒದಗಿಸಲಾಗುತ್ತಿದೆ. ಯಾರ ಮೇಲೂ ಒತ್ತಡ ಹೇರಿ ಉಪವಾಸ ಸತ್ಯಾಗ್ರಹ ಆಯೋಜಿಸಿಲ್ಲ. ಯಾವುದೇ ರಾಜಕೀಯ ಪಕ್ಷ, ಕೋಮು ಸಂಘಟನೆಯ ಬೆಂಬಲವನ್ನು ಯೋಗ ಪೀಠ ಬಯಸಿಲ್ಲ ಎಂದು ಸ್ವಾಮಿ ತಿಳಿಸಿದರು.

ರಾಜ್ಯದ ಪತಂಜಲಿ ಯೋಗ ಸಂಸ್ಥೆ ಹಾಗೂ ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಸ್ವಾಮೀಜಿಗಳು ಭಾಗವಹಿಸಿದ್ದರು. ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ, ವಿಧಾನಪರಿಷತ್ ಸದಸ್ಯ ಕೃಷ್ಣಭಟ್ ಸೇರಿದಂತೆ ನೂರಾರು ಗಣ್ಯರು, ಸಾರ್ವಜನಿಕರು ರಾಮ್ ದೇವ್ ಪರ ಘೋಷಣೆಗಳನ್ನು ಕೂಗುತ್ತಾ, ಕಪ್ಪುಹಣ ವಾಪಾಸ್ ತರಲು ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+