ಛೇ! ವಿಂಡೀಸ್ ತಂಡದಲ್ಲಿ ಗೇಲ್ ಗೆ ಸ್ಥಾನವಿಲ್ಲ!

ಪಾಕಿಸ್ತಾನ ವಿರುದ್ಧದ ಸರಣಿಗೆ ತನ್ನನ್ನು ಆಯ್ಕೆ ಮಾಡದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಆಯ್ಕೆ ಸಮಿತಿ ಮೇಲೆ ಗೇಲ್ ಕಿಡಿಕಾರಿದ್ದರು.ನಂತರ ಅದೇ ಸಿಟ್ಟಲ್ಲಿ ಗೇಲ್ ಭಾರತಕ್ಕೆ ಬಂದು ಐಪಿಎಲ್ ನಾಲ್ಕನೆ ಆವೃತ್ತಿಯಲ್ಲಿ ಎದುರಾಳಿ ಬೌಲರ್ ಗಳನ್ನು ಹಿಗ್ಗಾ ಮುಗ್ಗಾ ಥಳಿಸಿದ್ದರು. ಟ್ವೆಂಟಿ 20 ಕ್ರಿಕೆಟ್ ಸರಣಿಯಲ್ಲಿ 6 ಬಾರಿ ಪಂದ್ಯ ಶ್ರೇಷ್ಠ ಎನಿಸಿ ದಾಖಲೆ ಮೆರೆದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 12 ಪಂದ್ಯಗಳಲ್ಲಿ 608 ರನ್ ದಾಖಲಿಸಿ ತಂಡಕ್ಕೆ ಹೊಸ ಹುರುಪು ನೀಡಿ ಫೈನಲ್ ವರೆಗೂ ತಲುಪುವಂತೆ ಮಾಡಿದರು.
ಆದರೆ, ಇದನ್ನು ಪರಿಗಣಿಸದ ವೆಸ್ಟ್ ಇಂಡೀಸ್ ಆಯ್ಕೆ ಸಮಿತಿ, ಗೇಲ್ ವರ್ತನೆಗೆ ಸ್ಪಷ್ಟನೆ ಕೋರಿದೆ. ನಂತರ ಆಯ್ಕೆ ಬಗ್ಗೆ ನಿರ್ಧರಿಸುವುದಾಗಿ ಹೇಳಿದೆ. ಭಾರತದ ವಿರುದ್ಧದ ಟ್ವೆಂಟಿ 20 ಪಂದ್ಯ ಜೂನ್ 4ರಂದು ನಡೆಯಲಿದ್ದು, ಮೊದಲ ಏಕದಿನ ಪಂದ್ಯಗಳು ಜೂ.6 ಮತ್ತು 8ರಂದು ಪೋರ್ಟ್ ಆಫ್ ಸ್ಪೇನ್ನಲ್ಲಿ ನಿಗದಿಯಾಗಿದೆ. ಐಪಿಎಲ್ ನಲ್ಲಿ ಆಡಿದ ಕಿರೋನ್ ಪೊಲಾರ್ಡ್ ಮತ್ತು ಡ್ವಾಯ್ನೆ ಬ್ರಾವೊ ಏಕದಿನ ತಂಡದಲ್ಲಿ ಮಾತ್ರ ಆಯ್ಕೆಯಾಗಿದ್ದಾರೆ.
ವೆಸ್ಟ್ಇಂಡೀಸ್ ಟ್ವೆಂಟಿ 20 ತಂಡ: ಡರೆನ್ ಸಮ್ಮಿ(ನಾಯಕ), ಕ್ರಿಸ್ಟೋಫರ್ ಬಾರ್ನ್ವೆಲ್, ದೇವೇಂದ್ರ ಬಿಶೊ, ಡರೆನ್ ಬ್ರಾವೊ, ಆಂಡ್ರೆ ಫ್ಲೆಚೆರ್, ಡಂಝಾ ಹ್ಯಾಟ್, ಅಶ್ಲೆ ನರ್ಶ್, ರವಿ ರಾಂಪಾಲ್, ಆ್ಯಂಡ್ರೆ ರಸ್ಸೆಲ್, ಮಾರ್ಲೊನ್ ಸ್ಯಾಮುವೆಲ್ಸ್, ಕ್ರಿಶ್ಮಾರ್ ಸಾಂಟೊಕಿಯಾ, ಲೆಂಡ್ಲೆ ಸಿಮೊನ್ಸ್.
ಏಕದಿನ ತಂಡ: ಡರೆನ್ ಸಮ್ಮಿ (ನಾಯಕ), ಡ್ವೆಯ್ನೆ ಬ್ರಾವೊ(ಉಪನಾಯಕ), ಕಿರೊನ್ ಪೊಲಾರ್ಡ್,ಕಾರ್ಲ್ಟನ್ ಬೌ, ಅಂಟನಿ ಮಾರ್ಟಿನ್, ದೇವೆಂದ್ರ ಬಿಶೊ, ಡರೆನ್ ಬ್ರಾವೊ, ಕಿರ್ಕ್ ಎಡ್ವರ್ಡ್,ರವಿ ರಾಂಪಾಲ್, ಆಆಂಡ್ರ್ಯೂರಸ್ಸೆಲ್, ಮಾರ್ಲೊನ್ ಸಾಮುವೆಲ್ಸ್, ರಾಮನರೇಶ್ ಸರವಣ್,ಲಿಂಡ್ಲೆ ಸಿಮೊನ್ಸ್.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications