ಬೆಂಗಳೂರಿನಲ್ಲಿ 'ಮಿತಿಮೀರಿದ' ಮಂಗಳಮುಖಿಯರ ಕಾಟ

ಇವರು ರಸ್ತೆಗಳಲ್ಲಿ, ಸಿಗ್ನಲ್ಗಳಲ್ಲಿ ಅಶ್ಲೀಲ ಭಾವಭಂಗಿ ಪ್ರದರ್ಶಿಸಿ, ಹಣ ಕಸಿಯುತ್ತ, ನಾಗರಿಕರಿಗೆ ಮುಜುಗರ, ತೊಂದರೆ ನೀಡುತ್ತಿದ್ದಾರೆ. ಪ್ರತಿ ಸಿಗ್ನಲ್ನಲ್ಲಿ 4-5 ಮಂಗಳಮುಖಿಯರು ಇರುತ್ತಾರೆ. ಇದೊಂದು ಲಾಭದಾಯಕ ದಂಧೆ ಎಂದು ಮನಗಂಡು ಕೆಲ ಪುರುಷರು ಮಂಗಳಮುಖಿಯರ ವೇಷ ಧರಿಸಿ ಭಿಕ್ಷಾಟನೆಗೆ ಇಳಿದಿದ್ದಾರೆ.
ಇವರು ಕೇಳಿದಾಗ ಹಣ ಕೊಡದಿದ್ದಲ್ಲಿ ಬೈಗುಳ ಬೇರೆ. ಕೆಲವರು ರಾತ್ರಿ ವೇಳೆ ನಾಗರಿಕರನ್ನು ಬೆದರಿಸಿ ಹಣ, ಒಡವೆ ಕಿತ್ತುಕೊಂಡಿರುವ ಘಟನೆಗಳು ವರದಿಯಾಗಿವೆ. ಬಹುತೇಕ ಮಂಗಳಮುಖಿಯರು ವೇಶ್ಯಾವಾಟಿಕೆಯಲ್ಲಿಯೂ ತೊಡಗಿಕೊಂಡಿರುತ್ತಾರೆ. ಇವರ ಹಾವಳಿ ತಪ್ಪಿಸಲು ಹಿಂದಿನ ಪೊಲೀಸ್ ಆಯುಕ್ತ ಶಂಕರ್ ಬಿದರಿ ಕೆಲ ಮಟ್ಟಿನ ಪ್ರಯತ್ನ ಮಾಡಿದ್ದರು. ಅದು, ಪರಿಣಾಮಕಾರಿಯಾದಂತೆ ಕಾಣುವುದಿಲ್ಲ.
ಈ ಮಧ್ಯೆ ಕೇಂದ್ರ ಸರ್ಕಾರ 2011ರ ಜನಗಣತಿಯಲ್ಲಿ ದ್ವಿಲಿಂಗಿಗಳನ್ನು ಗುರುತಿಸಿ ಅವರಿಗಾಗಿ ಕಲ್ಯಾಣ ಯೋಜನೆ ರೂಪಿಸುವುದಕ್ಕೆ ಸಿದ್ಧತೆ ನಡೆಸಿದೆ. ಅವರಲ್ಲಿ ಜಾಗೃತಿ ಬೆಳೆಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಯತ್ನಿಸಬೇಕು. ಅನೈತಿಕ ಚಟುವಟಿಕೆ, ಭಿಕ್ಷಾಟನೆ, ಸುಲಿಗೆಯಲ್ಲಿ ತೊಡಗಿಕೊಂಡ ಮಂಗಳಮುಖಿಯರಿಗೆ ಕಾನೂನಿನ ರುಚಿಯನ್ನೂ ತೋರಿಸಬೇಕು.
ಮಂಗಳಮುಖಿಯರಿಂದ ಜೆಪಿ ನಗರದಲ್ಲಿ ಹಲ್ಲೆ : ಕಾಸು ಕೊಡದ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಮೂವರು ಮಂಗಳಮುಖಿಯರು ಹಲ್ಲೆ ನಡೆಸಿ ಪೊಲೀಸರ ಅತಿಥಿಗಳಾದ ತಾಜಾ ಘಟನೆಯೂ ಇಲ್ಲಿದೆ.
ಜೆಪಿ ನಗರ 7ನೇ ಹಂತದ ಶ್ರೀರಾಮ ಬಡಾವಣೆಯಲ್ಲಿ ಮೊಬೈಲ್ ಅಂಗಡಿಯಿಟ್ಟುಕೊಂಡಿರುವ ಮುತ್ತುಕುಮಾರ್ ಹಲ್ಲೆಗೊಳಗಾದವರು. ಈ ಸಂಬಂಧ ಶರ್ಮಿಳಾ, ಅಮೃತಾ, ಪಿಂಟೊ ಕಿರಣ ಎಂಬ ಮೂವರನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications