ಅಪ್ರಾಪ್ತರ ಮದುವೆ ತಡೆದ ಪೊಲೀಸರಿಂದ ಬುದ್ಧಿಮಾತು

ವರ ಆಂಜಿನೇಯಲು (16), ವಧು ಸುಜಾತ (14). ಈ ಇಬ್ಬರೂ ಆಂಧ್ರ ಮೂಲದವರು. ಬಳ್ಳಾರಿ ನಗರದ ಹವಂಭಾವಿ ವ್ಯಾಪ್ತಿಯ ಗಾಯಿತ್ರಿ ನಗರ ನಿವಾಸಿಗಳು. ಇವರ ತಂದೆ - ತಾಯಿ ಇಬ್ಬರೂ ಒಪ್ಪಿ ಇವರ ವಿವಾಹಕ್ಕೆ ಮುಂದಾಗಿದ್ದರು.
ಈ ಕುರಿತು ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಮತ್ತು ಪೊಲೀಸರು ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಇವರ ವಿವಾಹವನ್ನು ತಡೆದು, ಈ ಇಬ್ಬರ ಪೋಷಕರಿಂದ ಲಿಖಿತ ಹೇಳಿಕೆಯ ಪ್ರಮಾಣ ಪತ್ರ ಪಡೆದು ಬಿಡುಗಡೆ ಮಾಡಿದರು.
ಅಷ್ಟೇ ಅಲ್ಲ, ಈ ವಿವಾಹಕ್ಕೆ ಆಗಮಿಸಿದ್ದ ಪುರೋಹಿತರಿಗೆ ಕೂಡ ಅಧಿಕಾರಿಗಳು ಮತ್ತು ಪೊಲೀಸರು ಬುದ್ಧಿಮಾತನ್ನು ಹೇಳಿ ಕಳುಹಿಸಿದ್ಧಾರೆ. ಅಧಿಕಾರಿಗಳು - ಪೊಲೀಸರು ವಿವಾಹ ತಡೆದ ಕೆಲ ಹೊತ್ತಿನ ನಂತರ ಮದುವೆ ಮನೆಯಲ್ಲಿ ಬಹುತೇಕರು ಜಾಗ ಮಾಡಿದ್ದರು.











Click it and Unblock the Notifications