ಉಪನ್ಯಾಸಕಿ ಆತ್ಮಹತ್ಯೆ: ಕೊನೆಗೂ ಉಪನ್ಯಾಸಕನ ಸೆರೆ

ಮಂಗಳೂರಿನ 2 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪಣಂಬೂರು ಡಿ.ಸಿ.ಪಿ. ಪುಟ್ಟಮಾದಯ್ಯ, ಇನ್ಸ್ಪೆಕ್ಟರ್ ವೆಲೆಂಟೈನ್ ಡಿ ಸಿಲ್ವಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಪ್ರೊ. ರಶೀದ್ ಪ್ರಸ್ತುತ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ (ಎರವಲು ಸೇವೆ) ಉಪನ್ಯಾಸಕರಾಗಿದ್ದಾರೆ.
ಪ್ರಕರಣದ ವಿವರ: ಪಿ.ಎಚ್ಡಿ. ಅಧ್ಯಯನ ನಡೆಸುತ್ತಿದ್ದ ಸುಜಾತಾಗೆ ರಶೀದ್ ಗೈಡ್ ಆಗಿದ್ದರು. ರಶೀದ್ ತನಗೆ ಅಶ್ಲೀಲ ಇ-ಮೇಲ್ ಕಳಿಸುವುದರ ಜತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಸುಜಾತಾ, ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಜಾತಾ ಅವರು 2008 ಮಾರ್ಚ್ 29 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂದರ್ಭದಲ್ಲಿ ಆಕೆ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ ರಶೀದ್ ಸಹಿತ 5 ಮಂದಿ ಆರೋಪಿಗಳನ್ನು ಹೆಸರಿಸಿದ್ದರು. ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮತ್ತು ಆಕೆಯ ಗಂಡ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಕೊಣಾಜೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.











Click it and Unblock the Notifications