ಮಗನ ಶಿಕ್ಷಣಕ್ಕೆ ಹಣ ಹೊಂದಿಸಲಾಗದೆ ಅಪ್ಪ ನೇಣಿಗೆ ಶರಣು

ಮಗನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲಾಗದೆ, ಅಸಹಾಯಕ ಸ್ಥಿತಿಗೆ ತಲುಪಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟು ರಂಗನಾಥ್ ಇಹಲೋಕದ ವ್ಯವಹಾರ ಮುಗಿಸಿದ್ದಾರೆ.
ಮೂಲತಃ ಬೆಂಗಳೂರಿನವರಾದ ರಂಗನಾಥ್ ಮೇ 16ರಂದು ಹೋಟೆಲ್ ರೂಮನ್ನು ಬಾಡಿಗೆಗೆ ಪಡೆದಿದ್ದರು. ಮೇ 23ರಂದು ಹೋಟೆಲ್ ಸಿಬ್ಬಂದಿಗೆ ಈ ಕೊಠಡಿಯಿಂದ ಗಬ್ಬುನಾಥ ಬಡಿಯತೊಡಗಿತು. ವೆಂಟಿಲೇಟರ್ ಮೂಲಕ ಒಳಗೆ ಇಣಿಕಿದಾಗ ರಂಗನಾಥ್ ಶವ ಕಂಡುಬಂದಿದೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.












Click it and Unblock the Notifications