ಮಗನ ಶಿಕ್ಷಣಕ್ಕೆ ಹಣ ಹೊಂದಿಸಲಾಗದೆ ಅಪ್ಪ ನೇಣಿಗೆ ಶರಣು

Suicide
ಮಂಗಳೂರು, ಮೇ 24: ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮೀಷನರ್ ಎಸ್. ವಿ. ರಂಗನಾಥ್ ರಾವ್ (59) ಅವರು ಇಲ್ಲಿನ ಹೋಟೆಲೊಂದರಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.

ಮಗನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲಾಗದೆ, ಅಸಹಾಯಕ ಸ್ಥಿತಿಗೆ ತಲುಪಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟು ರಂಗನಾಥ್ ಇಹಲೋಕದ ವ್ಯವಹಾರ ಮುಗಿಸಿದ್ದಾರೆ.

ಮೂಲತಃ ಬೆಂಗಳೂರಿನವರಾದ ರಂಗನಾಥ್ ಮೇ 16ರಂದು ಹೋಟೆಲ್ ರೂಮನ್ನು ಬಾಡಿಗೆಗೆ ಪಡೆದಿದ್ದರು. ಮೇ 23ರಂದು ಹೋಟೆಲ್ ಸಿಬ್ಬಂದಿಗೆ ಈ ಕೊಠಡಿಯಿಂದ ಗಬ್ಬುನಾಥ ಬಡಿಯತೊಡಗಿತು. ವೆಂಟಿಲೇಟರ್ ಮೂಲಕ ಒಳಗೆ ಇಣಿಕಿದಾಗ ರಂಗನಾಥ್ ಶವ ಕಂಡುಬಂದಿದೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+