ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಪಾಲರನ್ನು ವಾಪಸ್ ಕರೆಸುವ ಪ್ರಶ್ನೆಯೇ ಇಲ್ಲ : ಪಿಸಿ
ಕೇಂದ್ರ ರಾಷ್ಟ್ರಪತಿ ಆಳ್ವಿಕೆ ಹೇರುವುದನ್ನು ತಳ್ಳಿಹಾಕಿದ್ದರೂ, ರಾಜ್ಯಪಾಲರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಬಿಜೆಪಿ ಒತ್ತಾಯಿಸುತ್ತಿರುವುದಕ್ಕೆ ಪ್ರತಿಯಾಗಿ, ಭಾರದ್ವಾಜ್ ಅವರನ್ನು ವಾಪಸ್ ಕರೆಸಿಕೊಳ್ಳುವ ಪ್ರಮೇಯವನ್ನು ತಳ್ಳಿಹಾಕಿದರು.
ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಬಲವಾದ ಕಾರಣಗಳು ಕಂಡುಬಂದಿಲ್ಲವಾದ್ದರಿಂದ ರಾಜ್ಯಪಾಲರ ವರದಿಯನ್ನು ಸ್ವೀಕರಿಸಲಾಗಿಲ್ಲ ಎಂದು ಚಿದಂಬರಂ ಅವರು ಒತ್ತಿ ಹೇಳಿದರು.
ರಾಜ್ಯದಲ್ಲಿ ರಾಜ್ಯಭಾರ ನಿರ್ವಹಣೆ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೆಲವು ಸಲಹೆ ಸೂಚನೆಗಳನ್ನು ಮಂಗಳವಾರ ರವಾನಿಸುವುದಾಗಿಯೂ ಅವರು ಸ್ಪಷ್ಟಪಡಿಸಿದರು.
ಸರಕಾರವನ್ನು ಸರಿಯಾಗಿ ಕೆಲಸ ಮಾಡಬೇಕು, ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಯಡಿಯೂರಪ್ಪ ಅಂಡ್ ಕಂಪನಿಗೆ ಎಚ್ಚರಿಕೆಯನ್ನು ಕೂಡ ಇದೇ ಸಂದರ್ಭದಲ್ಲಿ ನೀಡಿದರು.
Comments
ರಾಷ್ಟ್ರಪತಿ ಆಳ್ವಿಕೆ ಹಂಸರಾಜ್ ಭಾರದ್ವಾಜ್ ಪಿ ಚಿದಂಬರಂ ಯಡಿಯೂರಪ್ಪ presidents rule hansraj bhardwaj p chidambaram yediyurappa
English summary
Home minister P Chidambaram has reiterated that there is no question of recalling Karnataka governor HR Bhardwaj, as demanded by BJP. He said on Monday that new guidelines will be sent to BS Yeddyurappa to improve governance in Karnataka.
Story first published: Monday, May 23, 2011, 17:20 [IST]