Get Updates
Get notified of breaking news, exclusive insights, and must-see stories!

ಹಂಸ್ ಮೇಲೆ ರಾಯಚೂರಿನಲ್ಲಿ ಕೆಂಡ ಕಾರಿದ ಬಿಎಸ್ ವೈ

BS Yeddyurappa
ರಾಯಚೂರು, ಮೇ. 21 : ಪ್ರಜಾಪ್ರಭುತ್ವ ಉಳಿಸಿ, ರಾಜ್ಯಪಾಲರನ್ನು ಮನೆಗೆ ಕಳಿಸಿ ಆಂದೋಲನವನ್ನು ಆರಂಭಿಸಿರುವ ಭಾರತೀಯ ಜನತಾ ಪಕ್ಷ, ಹಂಸರಾಜ್ ಭಾರದ್ವಾಜ್ ಅವರ ವಿರುದ್ಧ ತನ್ನ ಪ್ರತಿಭಟನೆಯನ್ನು ರಾಜ್ಯಾದ್ಯಂತ ತೀವ್ರಗೊಳಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ತಂಡ ಇಂದು ರಾಯಚೂರಿನಲ್ಲಿ ಚಳವಳಿಯನ್ನು ಪ್ರಾರಂಭಿಸಿತು.

ಸಂವಿಧಾನದ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾರ ಹಾಕುವ ಮೂಲಕ ತಮ್ಮ ರಾಜ್ಯಪಾಲರ ವಿರುದ್ಧದ ಹೋರಾಟಕ್ಕೆ ಯಡಿಯೂರಪ್ಪ ಚಾಲನೆ ನೀಡಿದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿದ್ದರೂ, ಜನರಿಂದ ಬಹುಮತ ಪಡೆದು ಆಯ್ಕೆಯಾಗಿರುವ ಸರಕಾರವನ್ನು ಬೀಳಿಸಲು ರಾಜ್ಯಪಾಲರು ಹೊರಟಿದ್ದಾರೆ. ಅವರ ಉದ್ದೇಶ ಆರು ತಿಂಗಳು ವಿಧಾನಸಭೆಯಲ್ಲಿ ಕುಳಿತು ರಾಜ್ಯಭಾರ ಮಾಡುವುದಾಗಿದೆ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ಅವರ ಜೊತೆಗಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು ಶ್ರೀ ಉರುಕುಂದ ಈರಣ್ಣ ಸ್ವಾಮಿ ಲಾರಿಯ ಮೇಲೆ ಹತ್ತಿ, ರಾಷ್ಟ್ರಪತಿ ಆಳ್ವಿಕೆಯ ಶಿಫಾರಸನ್ನು ವಿರೋಧಿಸಬೇಕೆಂದು ಜನರಲ್ಲಿ ಮನವಿ ಮಾಡಿದರು. ಬಿಜೆಪಿಯ ಹೋರಾಟವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಒಟ್ಟು ಎರಡು ತಂಡಗಳನ್ನು ಕಟ್ಟಿದ್ದು, ಒಂದೊಂದು ತಂಡಕ್ಕೆ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ನೇತೃತ್ವ ವಹಿಸಿದ್ದಾರೆ. ಯಡಿಯೂರಪ್ಪ ರಾಯಚೂರು (ಮೇ 21), ಮಂಗಳೂರು (ಮೇ 22), ತುಮಕೂರು (ಮೇ 23), ಕೋಲಾರ (ಮೇ 24) ಮತ್ತು ಬಾಗಲಕೋಟ (ಮೇ 25) ಸಂಚರಿಸಲಿದ್ದಾರೆ. ಈಶ್ವರಪ್ಪ ಮೈಸೂರು (ಮೇ 21), ಚಿತ್ರದುರ್ಗ ಮತ್ತು ಬಳ್ಳಾರಿ (ಮೇ 22), ಕೊಪ್ಪಳ (ಮೇ 23), ಗುಲಬರ್ಗಾ (ಮೇ 24) ಮತ್ತು ಬೀದರ್ (ಮೇ 25)ಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+