2ಜಿ ಹಗರಣದ ಹೀರೋಯಿನ್ ಕನ್ನಿಮೋಳಿಗೆ ತಿಹಾರ್ ಮುದ್ದೆ

Kanimozhi
ನವದೆಹಲಿ, ಮೇ 20 : ತರಂಗಗುಚ್ಛ ಹಗರಣದಲ್ಲಿ ದೆಹಲಿಯ ವಿಶೇಷ ನ್ಯಾಯಾಲಯವು ರಾಜ್ಯಸಭೆ ಸದಸ್ಯೆ ಕನ್ನಿಮೋಳಿ ಮತ್ತು ಕಲೈಗ್ನರ್ ಟಿವಿ ಚಾನಲ್ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಗೆ ಶುಕ್ರವಾರ ಜಾಮೀನು ನಿರಾಕರಿಸಿದೆ.

ನ್ಯಾಯಾಲಯದಲ್ಲಿ ಹಾಜರಿದ್ದ ಸಿಬಿಐ ಪೊಲೀಸರು ಇಬ್ಬರನ್ನೂ ತಕ್ಷಣ ಬಂಧಿಸಿದ್ದಾರೆ. ಇದೀಗ ತಿಹಾರ್ ಜೈಲಿನ ಕೊಠಡಿ 6 ಕನ್ನಿಮೋಳಿ ಆಗಮನಕ್ಕಾಗಿ ಕಾಯುತ್ತಿದೆ. ಅದಕ್ಕೂ ಮೊದಲು ಮುಂದಿನ ವಿಚಾರಣೆಗಾಗಿ ಶನಿವಾರ ಬೆಳಗ್ಗೆ 10 ಗಂಟೆಗೆ 43 ವರ್ಷದ ಕನ್ನಿಮೋಳಿ ಮತ್ತು ಶರದ್ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು ಎಂದು ಕೋರ್ಟ್ ಸೂಚಿಸಿತು. [ಬಹುಮುಖ ಪ್ರತಿಭೆಯ ಕನ್ನಿಮೋಳಿ ವ್ಯಕ್ತಿಚಿತ್ರ]

ಕಿತ್ತಳೆ ಬಣ್ಣದ ಸಲ್ವಾರ್-ಖುರ್ತಾ ಧರಿಸಿದ್ದ ಕನ್ನಿಮೋಳಿ, ಪತಿ ಅರವಿಂದನ್ ಜತೆಗೂಡಿ ನ್ಯಾಯಾಲಯಕ್ಕೆ ಬೆಳಗ್ಗೆಯೇ ಆಗಮಿಸಿದ್ದರು. ಸಿಬಿಐ ಪಟಿಯಾಲಾ ಕೋರ್ಟ್ ನ್ಯಾಯಮೂರ್ತಿ ಒ.ಪಿ. ಸಾಯಿನಿ ಅವರು ಮಧ್ಯಾಹ್ನ 2.30ಕ್ಕೆ ಈ ಆದೇಶ ನೀಡಿದ್ದಾರೆ. ತೀರ್ಪು ನಿರೀಕ್ಷಿತ ಎಂದು ಕನ್ನಿಮೋಳಿ ಪ್ರತಿಕ್ರಿಯಿಸಿದ್ದಾರೆ.

2ಜಿ ತರಂಗಗುಚ್ಛ ಹಗರಣದಲ್ಲಿ ಎ ರಾಜಾ ಜತೆ ಭಾಗಿಯಾಗಿದ್ದಾರೆಂಬ ಆರೋಪ ಕನ್ನಿಮೋಳಿ ಅವರ ಮೇಲಿದೆ. 2ಜಿ ಹಗರಣದಲ್ಲಿ 1.7 ಲಕ್ಷ ಕೋಟಿ ರು. ಭ್ರಷ್ಟಾಚಾರ ನಡೆಸಿರುವ ಡಿಎಂಕೆ ಪಕ್ಷದ ಎ ರಾಜಾ ಅವರಿಂದ ಕನ್ನಿಮೋಳಿಗೆ 214 ಕೋಟಿ ರು. ಸಂದಾಯವಾಗಿದೆ ಎನ್ನಲಾಗಿದೆ. ಆ ಹಣ ಡಿಎಂಕೆ ಒಡೆತನದಲ್ಲಿರುವ ಕಲೈಗ್ನರ್ ಟಿವಿ ಚಾನಲ್ಲಿಗೆ ಸಂದಾಯವಾಗಿದೆ. ಆ ಚಾನೆಲ್ ನಲ್ಲಿ ಕನ್ನಿಮೋಳಿ ಶೇ.20ರಷ್ಟು ಶೇರು ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+