ನಾನೂ ರಾಜೀನಾಮೆ ಕೊಡೊಲ್ಲ; ನೀವೂ ಕೊಡಬೇಡಿ

'ನನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳಿಸಿಕೊಟ್ಟಿರುವೆ. ತೀರ್ಮಾನ ದೆಹಲಿ ಮಟ್ಟದಲ್ಲೇ ಆಗಲಿ ಎನ್ನುತ್ತಾರೋ ಅಥವಾ ಆಯ್ತು, ಅಧಿವೇಶನ ನಡೆಯಲಿ' ಎಂದು ಯಡಿಯೂರಪ್ಪ ಅವರ ಕೋರಿಕೆಗೆ ಮನ್ನಣೆ ನೀಡುತ್ತಾರೋ ಎಂಬುದು ಸದ್ಯದ ಕುತೂಹಲ.
ಗಮನಾರ್ಹವೆಂದರೆ, ಕೇವಲ ಹ್ಯಾಂಡ್ ಷೇಕ್ ಗೆ ಇವರ ಭೇಟಿ ಸೀಮಿತವಾಗಿರಲಿಲ್ಲ. ಸುಮಾರು ಕಾಲ ಇಬ್ಬರೂ ಪಿಸುಮಾತಿನಲ್ಲಿ ಮಾತನಾಡಿಕೊಂಡು, ನಗೆ ಚಟಾಕಿ ಹಾರಿಸಿಕೊಂಡು ಸಂತೋಷದಿಂದ ಇದ್ದರು. ಇದನ್ನು ಸಾಧ್ಯವಾಗಿಸಿದ್ದು ಕರ್ನಾಟಕ ಲೋಕಸೇವಾ ಆಯೋಗದ ಸಮಾರಂಭ. ಇದನ್ನು ಕಂಡು ಕರ್ನಾಟಕದ ಜನತೆ ಧನ್ಯತಾಭಾವ ಅನುಭವಿಸಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಲ್ಲವೇ?
ಭಾರದ್ವಾಜ್ ಅವರು ಮತ್ತೊಂದು ಅಂಶವನ್ನು ಸ್ಪಷ್ಟಪಡಿಸಿದರು. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ. ನಾನು ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸುವೆ. ಬಿಜೆಪಿ ಏನಾದರೂ ಹೇಳಿಕೊಳ್ಳಲಿ ಆದರೆ ನಾನು ನನ್ನ ವರದಿಗೆ ಬದ್ಧ ಎಂದು ಅವರು ಹೇಳಿದರು.
ಇದೇ ವೇಳೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋದ ರಾಜ್ಯಪಾಲ ಭಾರದ್ವಾಜ್, ಯಡಿಯೂರಪ್ಪ ಅವರನ್ನು ವಾಚಾಮಗೋಚರ ಹೊಗಳಿದರು. ಇದು ಯಾವುದರ ಸೂಚಿಯೋ ಸಂಜೆಯ ವೇಳೆಗೆ ಗೊತ್ತಾಗಲಿದೆ. ಯಡಿಯೂರಪ್ಪ ಅಂದರೆ ಏನು, ಅವರ ತಾಕತ್ತು ಎಂತಹುದು ಎಂಬುದುನ್ನು ಸ್ವತಃ ಭಾರದ್ವಾಜ್ ಅವರ ಮಾತುಗಳಲ್ಲೇ ಕೇಳಿ ತಿಳಿದುಕೊಳ್ಳಿ:
'ಇವರಿದ್ದಾರಲ್ಲ ನಾಡಿನ ಮುಖ್ಯಮಂತ್ರಿ, ಇವರು ಕಠಿಣ ಶ್ರಮಜೀವಿ. ಈತ ದಿನಕ್ಕೆ 10-15 ಗಂಟೆ ದುಡಿಯುತ್ತಾರೆ. ಇಂತಹ ಯಡಿಯೂರಪ್ಪ ಮತ್ತು ನಾನು ಉತ್ತಮ ಗೆಳೆಯರು. ರಾಜಕೀಯ ಇದ್ದದ್ದೇ. ನಾನು ನನ್ನ ಸಿದ್ಧಾಂತಗಳಿಗೆ ಹೋರಾಡುವೆ. ಅವರು ಅವರ ಸಿದ್ಧಾಂತಗಳಿಗಾಗಿ ಬಡಿದಾಡುತ್ತಾರೆ... '
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications