ಅಣ್ಣಿಗೇರಿ ತಲೆ ಬುರುಡೆಗಳಿಗೂ ಈಗ ಪರೀಕ್ಷೆ ಕಾಲ

471ರಲ್ಲಿ ಕೇವಲ 2 ಬುರುಡೆಗಳನ್ನು ಮಾತ್ರ ಭುವನೇಶ್ವರಕ್ಕೆ ಕಳಿಸಿಕೊಡಲಾಗಿತ್ತು. ಭೌತಶಾಸ್ತ್ರ ಇಲಾಖೆಯ ಮುಖ್ಯಸ್ಥ ಪ್ರೊ. ಡಿಪಿ ಮಹಾಪಾತ್ರ ಅವರು ಅವುಗಳ ಪರೀಕ್ಷೆ ನಡೆಸಿ ಅವುಗಳ ಕಾಲವನ್ನು ತಿಳಿಸಿದ್ದಾರೆ. ಬುರುಡೆಗಳ ವಯಸ್ಸನ್ನು ಇನ್ನಷ್ಟು ನಿಖರಗೊಳಿಸಲು ಹೆಚ್ಚಿನ ಪರೀಕ್ಷೆಗೆ ಒಡ್ಡಲು ಭೂಗರ್ಭಶಾಸ್ತ್ರ ಮತ್ತು ವಸ್ತುಸಂಗ್ರಹಾಲಯ ಇಲಾಖೆ ನಿರ್ಧರಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಅಣ್ಣಿಗೇರಿಯ ಹೊರವಲಯದಲ್ಲಿರುವ ಚರಂಡಿಯ ಕೆಳಗಿನ ಭೂಗರ್ಭದಲ್ಲಿ ಈ ಬುರುಡೆಗಳು ಪತ್ತೆಯಾಗಿದ್ದವು. ನಂತರ ಈ ವರ್ಷ ಫೆಬ್ರವರಿಯಲ್ಲಿ ನಡೆಸಿದ ಹೆಚ್ಚಿನ ಉತ್ಖನನದಲ್ಲಿ ಇನ್ನಷ್ಟು ಬುರುಡೆಗಳು ಪತ್ತೆಯಾಗಿ ದಂಗುಬಡಿಸಿದ್ದವು. ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಲಾಗಿರುವ ಮನುಷ್ಯರ ಬುಡುಡೆಗಳು ಇವೆರಬಹುದೆಂದು ಶಂಕಿಸಲಾಗಿದ್ದು, ಇನ್ನೇನೇನು ರಹಸ್ಯಗಳನ್ನು ಅಡಗಿಸಿವೆಯೋ ಯಾರು ಬಲ್ಲರು?












Click it and Unblock the Notifications