ಈಜಲು ಬಂದ ಹುಡುಗರ ಕೈಗೆ ಸಿಕ್ಕ ಗೌತಮ ಬುದ್ಧ

Buddha
ಬೆಂಗಳೂರು, ಮೇ 9: ಆ ಹುಡುಗರು ಭಾನುವಾರದ ರಜೆಯ ಮೋಜನ್ನು ಬೇಗೂರು ಕೆರೆಯಲ್ಲಿ ಈಜುತ್ತ ಕಳೆಯುತ್ತಿದ್ದರು. ಅದರಲ್ಲಿ ಒಬ್ಬ ಹುಡುಗ ಈಜುತ್ತಿದ್ದಾಗ ಕೈಗೆ ಏನೋ ಎಡತಾಡಕಿದಂತಾಯಿತು. ಕೈಗೆತ್ತಿ ನೋಡಿದಾಗ ಕೈಯಲ್ಲಿ ಬುದ್ಧನ ವಿಗ್ರಹವಿತ್ತು. ಆಸೆಯೇ ದುಃಖಕ್ಕೆ ಮೂಲ ಎಂದರಿತಂತೆ ಆ ಹುಡುಗರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಭಾನುವಾರ ಬಾಗೂರು ಕೆರೆಯಲ್ಲಿ ಈಜಾಡುತ್ತಿದ್ದ ಕೆಲವು ಹುಡುಗರಿಗೆ ಬಾಗೂರು ಕೆರೆಯಲ್ಲಿ ಪಂಚಲೋಹದ ಪುತ್ತಳಿಯೊಂದು ದೊರಕಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೋಲಿಸರು ತಿಳಿಸಿದ್ದಾರೆ.

"ಇದರ ಕೆಲವು ಲಕ್ಷಣಗಳು ಬುದ್ಧನ ವಿಗ್ರಹದಂತಿದೆ. 45 ಕೆ.ಜಿ. ತೂಕ ಮತ್ತು 6 ಅಡಿ ಎತ್ತರದ ಈ ಪಂಚಲೋಹ ವಿಗ್ರಹವು ಹಲವು ಶತಮಾನಗಳಷ್ಟು ಹಳೆಯದಾಗಿರಬಹುದು" ಎಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ.

"ಮುಖದ ಹೋಲಿಕೆಗಳು ಸಾಂಪ್ರದಾಯಿಕ ಬುದ್ಧನ ವಿಗ್ರಹದಂತಿದೆ. ಆದರೆ ಉಳಿದ ಭಾಗಗಳು ಬುದ್ಧನ ಪುತ್ತಳಿಗಿಂತ ವಿಭಿನ್ನವಾಗಿದೆ. ಈ ಪುತ್ತಳಿಯನ್ನು ಎಲ್ಲಿಂದ ಕದ್ದಿರಬಹುದೆಂದು ತನಿಖೆ ಮಾಡಲಾಗುವುದು" ಎಂದು ಅವರು ಹೇಳಿದ್ದಾರೆ. ಪುರಾತತ್ವ ವಿಭಾಗದ ಅಧಿಕಾರಿಗಳಲ್ಲಿ ಈ ವಿಗ್ರಹದ ಅಧ್ಯಯನಮಾಡಿ ತಿಳಿಸುವಂತೆ ಪೋಲಿಸರು ವಿನಂತಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+