ಮಂಗಳಗಂಗೋತ್ರಿಯಲ್ಲಿ ಜಯಮಾಲ ಮತ್ತು ಕಾಪಿಕಾಡ್

ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಮಂಗಳ ಗಂಗೋತ್ರಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದಿದೆ. ಇಲ್ಲಿ ಕಲಿಯುವ ನೀವು ಮತ್ತು ಇಂತಹ ಯುನಿವರ್ಸಿಟಿ ಪಡೆದ ಮಂಗಳೂರಿಗರು ನಿಜಕ್ಕೂ ಧನ್ಯರು ಎಂದು ಜಯಮಾಲ ಹೇಳಿದ್ದಾರೆ. "ಇಲ್ಲಿಂದ ಶಿಕ್ಷಣ ಮುಗಿಸಿ ಹೊರಹೋಗುವ ವಿದ್ಯಾರ್ಥಿಗಳಿಗೆ ಹಣಗಳಿಸೋ ಆಸೆಯೇ ಪ್ರಮುಖವಾಗಬಾರದು. ದೇಶ ಮತ್ತು ಸಮಾಜ ಸೇವೆ ಮಾಡುವ ಮನಸ್ಸು ನಿಮ್ಮದಾಗಲಿ" ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಂಗಳಗಂಗೋತ್ರಿಯ ಉಪ ಕುಲಪತಿ ಟಿ ಎಸ್ ಶಿವಶಂಕರ ಮೂರ್ತಿ ತುಳು ನಟ ಮತ್ತು ನಿರ್ದೇಶಕ ದೇವಿದಾಸ್ ಕಾಪಿಕಾಡ್ ಅವರನ್ನು ಸನ್ಮಾನಿಸಿದರು. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕಾಪಿಕಾಡ್ ತುಳುವಿನಲ್ಲಿ ಮಾತನಾಡಿದರು. ಜೊತೆಗೆ ಕನ್ನಡ ಸಿನಿಮಾ ಗೀತೆಯೊಂದನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ಮಂಗಳಗಂಗೋತ್ರಿಯ ರಿಜಿಸ್ಟರ್ ಆಗಿರುವ ಕೆ ಚಿನ್ನಪ್ಪ ಗೌಡ ಮಾತನಾಡಿದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಎ. ಎಂ. ಎ ಖಾದರ್ ಸ್ವಾಗತಿಸಿದರು.












Click it and Unblock the Notifications