ಬಿದರಿ ಎತ್ತಂಗಡಿ; ಮಿರ್ಜಿ ನೂತನ ಪೊಲೀಸ್ ಆಯುಕ್ತ

Jyothi Prakash Mirji
ಬೆಂಗಳೂರು, ಮೇ 2: ಬಿ.ಜಿ. ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿ ರಾಜ್ಯ ಸರಕಾರ ಸೋಮವಾರ (ಮೇ2) ಆದೇಶ ಹೊರಡಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ಶಂಕರ ಬಿದರಿ (59) ಅವರು ರೈಲ್ವೆ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ. 2008ರ ಜುಲೈನಲ್ಲಿ ಅಂದಿನ ನಗರ ಪೊಲೀಸ್ ಆಯುಕ್ತ ನೀಲಂ ಅಚ್ಯುತರಾವ್ ಅವರ ಸ್ಥಾನಕ್ಕೆ ಶಂಕರ್ ಮಹದೇವ್ ಬದರಿ ಅವರು ನೇಮಕಗೊಂಡಿದ್ದರು.

ಕಳೆದ ವಾರವೂ ಸರಕಾರ ಪೊಲೀಸ್ ವಲಯದಲ್ಲಿ ಒಂದಷ್ಟು ವರ್ಗಾವಣೆಗಳನ್ನು ಮಾಡಿದೆ. ಅವು ಹೀಗಿವೆ: ಡಾ. ಎಸ್. ಟಿ. ರಮೇಶ್, ಐಪಿಎಸ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಡಿಜಿಪಿಯಾಗುವುದರ ಜತೆಗೆ ಡಿಜಿ -ಐಜಿಪಿಯಾಗಿ ಸೇವೆ ಮುಂದುವರಿಸಲಿದ್ದಾರೆ.

ಇನ್ನು, ಲೋಕಾಯುಕ್ತದಲ್ಲಿದ್ದ ರೂಪ್ ಕುಮಾರ್ ದತ್ತಾ ಅವರನ್ನು ಕಾನೂನು ಸುವ್ಯಸವ್ಥೆ ಎಡಿಜಿಪಿಯಾಗಿ ಅತ್ಯಂತ ಅನಿರೀಕ್ಷಿತ ರೀತಿಯಲ್ಲಿ ಎತ್ತಂಗಡಿ ಮಾಡಲಾಗಿದೆ.

ಕಾನೂನು ಸುವ್ಯವಸ್ಥೆ ಎಡಿಜಿಪಿಯಾಗಿದ್ದ ಎ.ಆರ್. ಇನ್ ಫ್ಯಾಂಟ್ ಅವರನ್ನು ಡಿಜಿಪಿಯಾಗಿ ಮೇಲ್ದರ್ಜೆಗೆ ಉನ್ನತೀಕರಿಸಲಾಗಿದೆ. ಸದ್ಯಕ್ಕೆ ಅವರು ಪೊಲೀಸ್ ತರಬೇತಿ ಡಿಜಿಪಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಹರ್ಷವರ್ಧನ ರಾಜು ಅವರು ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆಗೊಂಡಿದ್ದಾರೆ.

ಭಾಸ್ಕರ್ ರಾವ್ ಅವರು ಭಯೋತ್ಪದಾನೆ ವಿರುದ್ದ ಕಾರ್ಯಾಚರಣೆ ಘಟಕದ ಐಜಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಕೆಎಸ್ಆರ್ ಚರಣ್ ರೆಡ್ಡಿ ಅವರು ಆಂತರಿಕ ಭದ್ರತೆ ವಿಭಾಗದ ಐಜಿಪಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+