ಸಾಯಿಬಾಬಾ ನಿಕಟವರ್ತಿ ಮತ್ತು ವೈದ್ಯರಿಗೆ ಪ್ರಾಣ ಬೆದರಿಕೆ

ಒಂದು ಮೂಲದ ಪ್ರಕಾರ, ಸಾಯಿಬಾಬಾ ಅವರ ಸಕಲ ಬೇಕುಬೇಡಗಳನ್ನು ಪೂರೈಸುತ್ತಿದ್ದ ಸತ್ಯಜಿತ್ ಮತ್ತು ಬಾಬಾ ಅವರ ವೈಯಕ್ತಿಕ ವೈದ್ಯರಾಗಿದ್ದ ಡಾ. ಐಯ್ಯರ್ ಅವರ ಪ್ರಾಣಕ್ಕೆ ಅಪಾಯ ಕಾದಿದೆ. ಅನೇಕ ಕಡೆಗಳಿಂದ ಅವರಿಗೆ ಬೆದರಿಕೆಯ ಕರೆಗಳು ಬರುತ್ತಿವೆ. ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಬಹಿರಂಗವಾಗಿ ಕಾಣಿಸಬಾರದು ಎಂದು ರಾಜ್ಯ ಸರಕಾರ ಅವರಿಗೆ ತಾಕೀತು ಮಾಡಿದೆ.
ಶ್ರೀ ಸತ್ಯ ಸಾಯಿ ಟ್ರಸ್ಟ್ ಗೆ ಸತ್ಯಜಿತ್ ಅವರ ಹೆಸರು ಕೇಳಿ ಬರುತ್ತಿರುವುದೇ ಅವರಿಗೆ ಬೆದರಿಕೆ ಕರೆ ಬರಲು ಕಾರಣ ಎನ್ನಲಾಗಿದೆ. ಸತ್ಯಜಿತ್ ಅವರಿಗೆ ಟ್ರಸ್ಟ್ ನ ಬಹುತೇಕ ಎಲ್ಲ ಸದಸ್ಯರ ಬೆಂಬಲವಿದೆ. ಇನ್ನು, ಐಯ್ಯರ್ ಅವರಿಗೆ ಬಾಬಾ ಸಾಯುವುದಕ್ಕೂ ಮೊದಲಿನಿಂದಲೇ ಬೆದರಿಕೆಯ ಕರೆಗಳು ಬರುತ್ತಿದ್ದವು. ಬಾಬಾ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಅವರು ಇಟ್ಟಿಲ್ಲ ಎಂಬುದೇ ಅವರ ಮೇಲಿನ ಪ್ರಮುಖ ಆರೋಪ.
ಜೊತೆಗೆ ಸಾಯಿಬಾಬಾ ಅವರ ನಿಕಟವರ್ತಿಗಳಾಗಿದ್ದ ಕೆಲವರನ್ನು ಮುಗಿಸಿಹಾಕುವ ಸಂಚು ಕೂಡ ನಡೆದಿದೆ ಎಂದು ಬೇಹುಗಾರಿಕಾ ವರದಿ ತಿಳಿಸಿದೆ. ಈ ಕಾರಣ ಪುಟ್ಟಪರ್ತಿಯಲ್ಲಿ ಟ್ರಸ್ಟ್ ಸದಸ್ಯರಿಗೆಲ್ಲ ಭಾರೀ ಭದ್ರತೆಯನ್ನು ನೀಡಲಾಗಿದೆ. ಪ್ರಶಾಂತಿ ನಿಲಯಂನಲ್ಲಿ ಸದ್ಯಕ್ಕಂತೂ ಶಾಂತಿ ನೆಲೆಸಿಲ್ಲ. ಈ ನಡುವೆ, ಸಾಯಿಬಾಬಾ ಅವರ ಅಂತ್ಯ ಸಂಸ್ಕಾರಕ್ಕಾಗಿ ಏರ್ಪಾಡುಗಳು ಭರದಿಂದ ಸಾಗಿವೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications