ಸಾಯಿಬಾಬಾ ಸಾವು, ನಾನಾ ವ್ಯಾಖ್ಯಾನಗಳಿಗೆ ಹುಟ್ಟು

ಮೊದಲನೆಯದಾಗಿ, ಇಂದು ಕ್ರೈಸ್ತ ಬಾಂಧವರು ಆಚರಿಸುವ ಈಸ್ಟರ್ ಹಬ್ಬ. ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಮತ್ತೆ ಕಾಣಿಸಿಕೊಂಡ ದಿನ. ಅಂದರೆ, ಪುನರುತ್ಥಾನವಾದ ದಿನ. ಸಾಯಿಬಾಬಾ ಕೂಡ ಮತ್ತೆ ಅವತರಿಸುವುದಾಗಿ ಹೇಳಿದ್ದಾರೆ. ಭವಿಷ್ಯದಲ್ಲಿ ಮಂಡ್ಯದ ಸಾಯಿ ಭಕ್ತರ ಮನೆಯೊಂದರಲ್ಲಿ ಪ್ರೇಮ ಸಾಯಿಯಾಗಿ ಮರುಹುಟ್ಟು ಪಡೆಯುವುದಾಗಿ ಹೇಳಿದ್ದರು. ಬಾಬಾ ಮರುಜನ್ಮ ಪಡೆದೇ ಪಡೆಯುತ್ತಾರೆ ಎಂದು ಭಕ್ತರು ಅಪಾರವಾಗಿ ನಂಬಿದ್ದಾರೆ. ಸಾಯಿಬಾಬಾ ಮರುಜನ್ಮ ಪಡೆಯುವರೆ ಕಾಲವೇ ನಿರ್ಧರಿಸಲಿದೆ.
ಎರಡನೆಯದಾಗಿ, ದಕ್ಷಿಣ ಭಾರತ ದೊಡ್ಡ ಧಾರ್ಮಿಕ ಗುರುವೊಬ್ಬರು ಸದ್ಯದಲ್ಲಿಯೇ ಅಸ್ತಂಗತರಾಗಲಿದ್ದಾರೆ ಎಂದು ತಾಳೆಗರಿಗಳ ಮೂಲಕ ಭವಿಷ್ಯ ನುಡಿಯುವಲ್ಲಿ ಸಿದ್ಧಹಸ್ತರಾಗಿರುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಯಚೂರಿನಲ್ಲಿ ಇತ್ತೀಚೆಗೆ ಹೇಳಿದ್ದರು. ಅವರ ಭವಿಷ್ಯದಲ್ಲಿದ್ದ ವ್ಯಕ್ತಿ ಸಾಯಿಬಾಬಾ ಅವರಾ? ಹಾಸನ ಜಿಲ್ಲೆಯ ಹಾರೋಹಳ್ಳಿಯ ಕೋಡಿಮಠದ ಸ್ವಾಮೀಜಿಗಳೇ ಸ್ಪಷ್ಟೀಕರಣ ನೀಡಬೇಕು.
ಮೂರನೆಯದಾಗಿ, ಕೋಟಿ ಕೋಟಿ ಬಡವರ ಬಂಧುವಾಗಿ, ಶಿಕ್ಷಣ ಸಂಸ್ಥೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ, ಹಳ್ಳಿಹಳ್ಳಿಗಳಿಗೆ ನೀರು ಹರಿಯುವಂತೆ ಮಾಡಿ ಅಸಾಧಾರಣ ಸೇವೆ ಮಾಡಿ, ಪಡಾಡಗಳಿಂದಾಗಿಯೂ ಸಾಕಷ್ಟು ಹೆಸರು ಮಾಡಿದ್ದ ಬಾಬಾ ಖಂಡಿತವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಂಬಿದ್ದ ಭಕ್ತರಿಗೆ ದ್ರೋಹವಾಗಿರುವುದು. ಪವಾಡದ ನಿರೀಕ್ಷೆಯಲ್ಲಿದ್ದ ಜನರಿಗೆ ಬಾಬಾ ಸಾವನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಪುಟ್ಟಪರ್ತಿಯಲ್ಲಿ ಶೋಕದ ಸುನಾಮಿಯೇ ಅಪ್ಪಳಿಸಿದೆ. 'ವಿಧಿ' ಎನ್ನುವುದು ಎಲ್ಲವನ್ನೂ ಮೀರಿದ್ದೆ? ಈ ಕುರಿತು ಶ್ರೀಮಾನ್ಯರು ಮತ್ತು ಬುದ್ಧಿಜೀವಿಗಳು ಏನು ಹೇಳುತ್ತಾರೆ? [ಗ್ಯಾಲರಿ ನೋಡಿರಿ]
ಕರ್ನಾಟಕದಲ್ಲಿ ರಜಾ ಇಲ್ಲ : ಭಗವಾನ್ ಸತ್ಯ ಸಾಯಿಬಾಬಾ ಅವರ ನಿಧನದ ಪ್ರಯುಕ್ತ ಕರ್ನಾಟಕದಲ್ಲಿಯೂ ಎರಡು ದಿನ ಶೋಕಾಚರಣೆ ಮಾಡಲಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ರಜಾ ಇರುವುದಿಲ್ಲ ಎಂದು ಯಡಿಯೂರಪ್ಪ ಸರಕಾರ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿಯೂ ಸಾಯಿಬಾಬಾ ಅವರ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಬಾಬಾ ಅವರ ಗೌರವಾರ್ಥವಾಗಿ ರಜಾ ನೀಡಲಾಗುವುದೆ ಎಂಬ ಪ್ರಶ್ನೆ ಉದ್ಭವವಾಗಿತ್ತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications