ಸಾಯಿಬಾಬಾ ಸಾವು, ನಾನಾ ವ್ಯಾಖ್ಯಾನಗಳಿಗೆ ಹುಟ್ಟು

ಮೊದಲನೆಯದಾಗಿ, ಇಂದು ಕ್ರೈಸ್ತ ಬಾಂಧವರು ಆಚರಿಸುವ ಈಸ್ಟರ್ ಹಬ್ಬ. ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಮತ್ತೆ ಕಾಣಿಸಿಕೊಂಡ ದಿನ. ಅಂದರೆ, ಪುನರುತ್ಥಾನವಾದ ದಿನ. ಸಾಯಿಬಾಬಾ ಕೂಡ ಮತ್ತೆ ಅವತರಿಸುವುದಾಗಿ ಹೇಳಿದ್ದಾರೆ. ಭವಿಷ್ಯದಲ್ಲಿ ಮಂಡ್ಯದ ಸಾಯಿ ಭಕ್ತರ ಮನೆಯೊಂದರಲ್ಲಿ ಪ್ರೇಮ ಸಾಯಿಯಾಗಿ ಮರುಹುಟ್ಟು ಪಡೆಯುವುದಾಗಿ ಹೇಳಿದ್ದರು. ಬಾಬಾ ಮರುಜನ್ಮ ಪಡೆದೇ ಪಡೆಯುತ್ತಾರೆ ಎಂದು ಭಕ್ತರು ಅಪಾರವಾಗಿ ನಂಬಿದ್ದಾರೆ. ಸಾಯಿಬಾಬಾ ಮರುಜನ್ಮ ಪಡೆಯುವರೆ ಕಾಲವೇ ನಿರ್ಧರಿಸಲಿದೆ.
ಎರಡನೆಯದಾಗಿ, ದಕ್ಷಿಣ ಭಾರತ ದೊಡ್ಡ ಧಾರ್ಮಿಕ ಗುರುವೊಬ್ಬರು ಸದ್ಯದಲ್ಲಿಯೇ ಅಸ್ತಂಗತರಾಗಲಿದ್ದಾರೆ ಎಂದು ತಾಳೆಗರಿಗಳ ಮೂಲಕ ಭವಿಷ್ಯ ನುಡಿಯುವಲ್ಲಿ ಸಿದ್ಧಹಸ್ತರಾಗಿರುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಯಚೂರಿನಲ್ಲಿ ಇತ್ತೀಚೆಗೆ ಹೇಳಿದ್ದರು. ಅವರ ಭವಿಷ್ಯದಲ್ಲಿದ್ದ ವ್ಯಕ್ತಿ ಸಾಯಿಬಾಬಾ ಅವರಾ? ಹಾಸನ ಜಿಲ್ಲೆಯ ಹಾರೋಹಳ್ಳಿಯ ಕೋಡಿಮಠದ ಸ್ವಾಮೀಜಿಗಳೇ ಸ್ಪಷ್ಟೀಕರಣ ನೀಡಬೇಕು.
ಮೂರನೆಯದಾಗಿ, ಕೋಟಿ ಕೋಟಿ ಬಡವರ ಬಂಧುವಾಗಿ, ಶಿಕ್ಷಣ ಸಂಸ್ಥೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ, ಹಳ್ಳಿಹಳ್ಳಿಗಳಿಗೆ ನೀರು ಹರಿಯುವಂತೆ ಮಾಡಿ ಅಸಾಧಾರಣ ಸೇವೆ ಮಾಡಿ, ಪಡಾಡಗಳಿಂದಾಗಿಯೂ ಸಾಕಷ್ಟು ಹೆಸರು ಮಾಡಿದ್ದ ಬಾಬಾ ಖಂಡಿತವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಂಬಿದ್ದ ಭಕ್ತರಿಗೆ ದ್ರೋಹವಾಗಿರುವುದು. ಪವಾಡದ ನಿರೀಕ್ಷೆಯಲ್ಲಿದ್ದ ಜನರಿಗೆ ಬಾಬಾ ಸಾವನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಪುಟ್ಟಪರ್ತಿಯಲ್ಲಿ ಶೋಕದ ಸುನಾಮಿಯೇ ಅಪ್ಪಳಿಸಿದೆ. 'ವಿಧಿ' ಎನ್ನುವುದು ಎಲ್ಲವನ್ನೂ ಮೀರಿದ್ದೆ? ಈ ಕುರಿತು ಶ್ರೀಮಾನ್ಯರು ಮತ್ತು ಬುದ್ಧಿಜೀವಿಗಳು ಏನು ಹೇಳುತ್ತಾರೆ? [ಗ್ಯಾಲರಿ ನೋಡಿರಿ]
ಕರ್ನಾಟಕದಲ್ಲಿ ರಜಾ ಇಲ್ಲ : ಭಗವಾನ್ ಸತ್ಯ ಸಾಯಿಬಾಬಾ ಅವರ ನಿಧನದ ಪ್ರಯುಕ್ತ ಕರ್ನಾಟಕದಲ್ಲಿಯೂ ಎರಡು ದಿನ ಶೋಕಾಚರಣೆ ಮಾಡಲಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ರಜಾ ಇರುವುದಿಲ್ಲ ಎಂದು ಯಡಿಯೂರಪ್ಪ ಸರಕಾರ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿಯೂ ಸಾಯಿಬಾಬಾ ಅವರ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಬಾಬಾ ಅವರ ಗೌರವಾರ್ಥವಾಗಿ ರಜಾ ನೀಡಲಾಗುವುದೆ ಎಂಬ ಪ್ರಶ್ನೆ ಉದ್ಭವವಾಗಿತ್ತು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications