ಮಳೆ ಹಾವಳಿ : ನಾಯಂಡಹಳ್ಳಿ ಕೆರೆಯಲ್ಲಿ ಮುಳುಗಿದ ಬಾಲಕ

ಕೆರೆಯ ದಡದಲ್ಲಿ ಇಂದು ಬೆಳಿಗ್ಗೆ ಮಣಿಕಂಠ ಆಟವಾಡುತ್ತಿದ್ದಾಗ ಕೆರೆಯಲ್ಲಿ ತೇಲಿಬಂದ ಚೆಂಡನ್ನು ತೆಗೆದುಕೊಳ್ಳಲು ಹೋಗಿ ಕಾಲುಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಕಲ್ಲಿನ ಮೇಲೆ ಕುಳಿತು ಚೆಂಡಿಗಾಗಿ ಕೈಚಾಚಿದಾಗ ಆಯತಪ್ಪಿ ನೀರಿಗೆ ಜಾರಿದ್ದಾನೆ. ಹತ್ತಿರದಲ್ಲಿಯೇ ಇದ್ದ ಶ್ರೀನಿವಾಸ ಎಂಬ ಗೆಳೆಯ ಮಣಿಕಂಠ ನೀರಿನಿಂದ ಎದ್ದು ಬರುತ್ತಾನೆಂದು ಕೆಲ ಹೊತ್ತು ಕಾದಿದ್ದಾನೆ. ಆದರೆ ಆತ ಬರದಿದ್ದಾಗ ಗಾಬರಿಯಾಗಿ ಮಣಿಕಂಠನ ಮನೆಯವರಿಗೆ ತಿಳಿಸಿದ್ದಾನೆ.
ಕೂಡಲೆ ಅಗ್ನಿಶಾಮಕ ದಳದವರು ಮತ್ತು ಈಜುಪಟುಗಳು ಸ್ಥಳಕ್ಕೆ ಧಾವಿಸಿದ್ದು ಬಾಲಕನ ಹುಡುಕಾಟದಲ್ಲಿ ತೊಡಗಿದ್ದಾರೆ. ನೀರಿನಲ್ಲಿ ಬಾಲಕ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದೆ. ಕೆರೆಯಲ್ಲಿರುವ ಮಣ್ಣು ಮತ್ತು ತ್ಯಾಜ್ಯವಸ್ತುಗಳ ಹೂಳಿನಲ್ಲಿ ಸಿಲುಕಿಕೊಂಡು ಬಾಲಕ ಮೃತನಾಗಿರಬಹುದೆಂದು ಅಗ್ನಿಶಾಮಕ ದಳದವರು ಶಂಕಿಸಿದ್ದಾರೆ.
ನಾಯಂಡಹಳ್ಳಿ ಕೆರೆ ಕೊಚ್ಚೆಯಿಂದ ತುಂಬಿಕೊಂಡಿದೆ. ಸುತ್ತಲಿನ ವಾಸಿಗಳೆಲ್ಲ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ವಸ್ತುಗಳನ್ನೆಲ್ಲ ಕೆರೆಯಲ್ಲಿಯೇ ಹಾಕುತ್ತಾರೆ. ಕೆರೆ ಮಾತ್ರವಲ್ಲ ಆ ಪ್ರದೇಶದಲ್ಲಿರುವ ಚರಂಡಿಗಳು ಕೂಡ ಕೊಚ್ಚೆಯಿಂದ ತುಂಬಿಕೊಂಡಿದ್ದರಿಂದ ಮಳೆನೀರು ಮನೆ, ದೇವಸ್ಥಾನಗಳಿಗೆಲ್ಲ ನುಗ್ಗುತ್ತಿದೆ. ಗಾಳಿ ಆಂಜನೇಯ ಕೂಡ ಇದಕ್ಕೆ ಸಾಕ್ಷಿಯಾಗಿದ್ದಾನೆ.
ಮಹಾನಗರ ಪಾಲಿಕೆಯವರು ಕೂಡಲೆ ಕೆರೆಯನ್ನು ಸ್ವಚ್ಛಗೊಳಿಸದಿದ್ದರೆ ಅಥವಾ ನೆರೆಹೊರೆಯವರು ಕೆರೆಗೆ ತ್ಯಾಜ್ಯಗಳನ್ನೆಲ್ಲ ಹಾಕುವುದನ್ನು ನಿಲ್ಲಿಸದಿದ್ದರೆ ಇನ್ನಷ್ಟು ಅವಘಡಗಳು ಸಂಭವಿಸುವುದರಲ್ಲಿ ಸಂಶಯವಿಲ್ಲ. ಇಂಥ ಘಟನೆ ಸಂಭವಿಸಿದಾಗ ಆಪತ್ತು ನಿರ್ವಹಣೆಯ ಬಗ್ಗೆ ಕೂಡ ಜನರಿಗೆ ತಿಳಿವಳಿಕೆಯಿಲ್ಲ. ತಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಜನತೆಗೆ ತಿಳಿ ಹೇಳುವ ಬಗೆಯಾದರೂ ಹೇಗೆ?
ಹುನಗುಂದದಲ್ಲಿ ಇಬ್ಬರು ಮುಂಡರಗಿಯಲ್ಲೊಬ್ಬ : ಗೋವಾಕ್ಕೆ ಬೇಸಿಗೆ ಪ್ರವಾಸಕ್ಕೆಂದು ಹೊರಟಿದ್ದ ಯುವಕರ ತಂಡದಲ್ಲಿನ ಇಬ್ಬರು ಹುಬ್ಬಳ್ಳಿಯಿಂದ 150 ಕಿ.ಮೀ. ದೂರದಲ್ಲಿರುವ ಹುನಗುಂದದಲ್ಲಿ ಮಲಪ್ರಭಾ ನದಿಯಲ್ಲಿ ಈಜಲು ಹೋಗಿ ಮುಳುಗಿ ಸತ್ತಿದ್ದಾರೆ. ಮೃತರನ್ನು ಆಂಧ್ರ ಪ್ರದೇಶದ ಡಿಇ ಅರವಿಂದ್ ಮತ್ತು ಶ್ರೀಕಾಂತ್ ಯಾದವ್ ಎಂದು ಗುರುತಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ, ಗದಗ ಜಿಲ್ಲೆಯ ಮುಂಡರಗಿಯಲ್ಲಿ ಬಾವಿಯಲ್ಲಿ ಈಜಲು ಹೋಗಿದ್ದ ಬಸವರಾಜ ಹನದಿ ಎಂಬಾತ ಮುಳುಗಿ ಸಾವನ್ನಪ್ಪಿದ್ದಾನೆ.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price












Click it and Unblock the Notifications