ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯರ ಪ್ರಮಾದ: ಕಂದನಿಗಾಗಿ ಅಪ್ಪನ ಉಪವಾಸ

By Srinath
|
Google Oneindia Kannada News

John Ronaldo (img- Mid-Day)
ಬೆಂಗಳೂರು, ಏಪ್ರಿಲ್ 14: ಎರಡು ವರ್ಷದ ಹಾಲುಗಲ್ಲದ ಜಾನ್ ರೊನಾಲ್ಡೊ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕಳೆದೊಂದು ವರ್ಷದಿಂದ ನರಕಯಾತನೆ ಅನುಭವಿಸುತ್ತದ್ದಾನೆ. ಅವನು ಮಾಡಿದ ತಪ್ಪು ಕಾಫಿ ಕುಡಿಯುವಾಗ ಅದನ್ನು ಮೈಮೇಲೆ ಚೆಲ್ಲಿಕೊಂಡಿದ್ದು. ಆದರೆ ಆಸ್ಪತ್ರೆಯ ಸಿಬ್ಬಂದಿ ಅದಕ್ಕಿಂತ ಗಂಭೀರವಾದ ಪ್ರಮಾದವನ್ನೇ ಮಾಡಿದ್ದಾರೆ. ಅದರಿಂದಾಗಿ ಮಗು ಜೀವಂತ ಶವವಾಗಿ ಬದುಕಿದೆ. ಮಗುವನ್ನು ಉಳಿಸಿಕೊಡಿ ಎಂದು ಅಂಗಾಲಾಚುತ್ತಿರುವ ಕಿರಣ್ ಚಂದರ್ ಇದೇ ಶನಿವಾರದಿಂದ ಆಸ್ಪತ್ರೆಯ ಎದುರು ಉಪವಾಸ ಕುಳಿತುಕೊಳ್ಳಲು ನಿರ್ಧರಿಸಿದ್ದಾರೆ.

ಒಂದು ವರ್ಷದ ಹಿಂದೆ ಏನಾಯಿತೆಂದರೆ ... 'ಮಾರ್ಚ್ 15ರಂದು ನನ್ನ ಮಗ ಜಾನ್ ರೊನಾಲ್ಡೊ ಕಾಫಿ ಕುಡಿಯುತ್ತಿದ್ದಾಗ ಮೈಮೇಲೆ ಕಾಫಿ ಚೆಲ್ಲಿಕೊಂಡ. ಶೇ. 10ರಷ್ಟು ಸುಟ್ಟ ಗಾಯಗಳಾದವು. ತಕ್ಷಣ ಮಗುವನ್ನು ಕೋರಮಂಗಲದಲ್ಲಿರುವ ಸೆಂಟ್ ಜಾನ್ಸ್ ಆಸ್ಪತ್ರೆಗೆ ಸೇರಿಸಿದೆ. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡುವಾಗ ಎಡವಟ್ಟು ಮಾಡಿದರು. ಅದರಿಂದ ಉಸಿರಾಟ ತೊಂದರೆ ಕಾಣಿಸಿಕೊಂಡಿತು. ಜತೆಗೆ ಮೆದುಳಿನಲ್ಲಿ ರಕ್ತಸ್ರಾವವೂ ಆಯಿತು. ಅಂದಿನಿಂದ ನನ್ನ ಮಗ ಜೀವಚ್ಚವವಾಗಿದ್ದಾನೆ' ಎಂದು ಮಗುವಿನ ತದೆ ಕಿರಣ್ ಚಂದರ್ ಗೋಳಾಡುತ್ತಾರೆ.

ಗಂಟಲಿನ ಮೂಲಕ ಪೈಪು ಅಳವಡಿಸಿ, ಅವನಿಗೆ ಉಸಿರಾಟಕ್ಕೆ ಅನುವುಮಾಡಿಕೊಡಲಾಗಿದೆ. ಇದಕ್ಕೆ ಆಸ್ಪತ್ರೆಯ ವೈದ್ಯರು ಎಸಗಿದ ಪ್ರಮಾದವೇ ಕಾರಣ ಎನ್ನುತ್ತಾರೆ ಕಿರಣ್. ಸೆಂಟ್ ಜಾನ್ಸ್ ಆಸ್ಪತ್ರೆಯ ಶಿಶು ಚಿಕಿತ್ಸೆ ವಾರ್ಡ್ ನಲ್ಲಿ ಜಾನ್ ಒಂದು ವರ್ಷದಿಂದ ಇದ್ದಾನೆ. ಆದರೆ ಮಗುವನ್ನು ಬೇರೆ ಆಸ್ಪತ್ರೆಗೆ ಸೇರಿಸಿ ಎಂದು ವೈದ್ಯರು ಇತ್ತೀಚೆಗೆ ಕಿರಣ್ ಗೆ ದುಂಬಾಲು ಬಿದ್ದಿದ್ದಾರೆ. ಸರಿಯಾದ ಡಿಸ್ ಚಾರ್ಜ್ ಸಮರಿ ಸಹ ನೀಡುತ್ತಿಲ್ಲ. ಒಂದು ವರ್ಷದಿಂದ ಎಲ್ಲ ವೈದ್ಯಕೀಯ ವೆಚ್ಚಗಳನ್ನೂ ನಾನೇ ಭರಿಸಿರುವೆ. ಮುಂದಿನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಆಸ್ಪತ್ರೆಯೇ ಭರಿಸಿ, ಸಮರ್ಪಕ ಚಿಕಿತ್ಸೆ ಮುಂದುವರಿಸಬೇಕು. ಅದುವರೆಗೆ ಉಪವಾಸ ಮಾಡುವುದಾಗಿ ಕಿರಣ್ ಆಸ್ಪತ್ರೆಗೆ ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಮಂಡಳಿ ನೆರವನ್ನು ಪಡೆಯಲು ಆಲೋಚಿಸಿರುವ ಕಿರಣ್ ಶನಿವಾರದಿಂದ ಉಪವಾಸ ಆರಂಭಿಸುವುದಾಗಿ ಹೇಳಿದ್ದಾರೆ. ಅವರಿಗೆ ಗ್ಲೋಬಲ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ ಎಂಬ ಸ್ವಯಂಸೇವಾ ಸಂಸ್ಥೆ ನೆರವಿಗೆ ಬಂದಿದೆ. ಈ ಮಧ್ಯೆ, ಆಸ್ಪತ್ರೆಯ ಶಿಶು ವಿಭಾಗದ ಡಾ. ಫೆಲ್ಟನ್ ಡಿಸೋಜಾ ಅಥವಾ ಆಸ್ಪತ್ರೆಯ ಮುಖ್ಯಾಧಿಕಾರಿ ಪ್ರಕರಣದ ಬಗ್ಗೆ ತುಟಿಬಿಚ್ಚುತ್ತಿಲ್ಲ.

English summary
Demanding that hospital bear medical expenses incurred after the doctors from the St Johns Hospital in Koramangala allegedly administered wrong medication to his son John Ronaldo, Kiran Chander has decided to go on an indefinite hunger strike in front of the hospital from Saturday (April 16).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X