ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬಾ ಚೇತರಿಕೆಗೆ ಬೆಂಗಳೂರು 'ಬೃಂದಾವನ'ದಲ್ಲಿ ಪ್ರಾರ್ಥನೆ

By Srinath
|
Google Oneindia Kannada News

Pray for Baba health
ಬೆಂಗಳೂರು, ಏ. 7: ಪುಟ್ಟಪರ್ತಿ ಸಾಯಿಬಾಬಾ ಅವರ ಆರೋಗ್ಯದಲ್ಲಿ ಚೇತರಿಕೆಯಾಗಲಿ ಎಂದು ಆಶಿಸಿ ಕಾಡುಗೋಡಿಯಲ್ಲಿರುವ 'ಬೃಂದಾವನ'ದಲ್ಲಿ ಇದೇ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ 'ಅಖಂಡ ಭಜನೆ' ಆಯೋಜಿಸಲಾಗಿದೆ ಎಂದು ಶ್ರೀ ಸತ್ಯಸಾಯಿ ಸಂಸ್ಥೆಯ ಅಧ್ಯಕ್ಷ ಕುಮ್ ರಾವ್ ತಿಳಿಸಿದ್ದಾರೆ. ಸಾಯಿಬಾಬಾ ಭಕ್ತರು ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದ್ದಾರೆ.

11 ದಿನಗಳಿಂದ ಪುಟ್ಟಪರ್ತಿಯಲ್ಲಿ ಅಸ್ವಸ್ಥರಾಗಿ ಹಾಸಿಗೆ ಹಿಡಿದಿರುವ ವಿಭೂತಿ ಪುರುಷ ಬಾಬಾ ಅವರ ಆರೋಗ್ಯದಲ್ಲಿ ಬುಧವಾರ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡುಬಂದಿದೆ. ಮಧು ಮೇಹ, ರಕ್ತದೊತ್ತಡ, ಹೃದಯ ಹಾಗೂ ಶ್ವಾಸಕೋಶ ತೊಂದರೆ, ಮೂತ್ರ ಪಿಂಡ ಸಮಸ್ಯೆ ... ಹೀಗೆ ಬಾಬಾ ಅವರ ಅರೋಗ್ಯವನ್ನು ನಾನಾ ಅಂಶಗಳು ಕಾಡುತ್ತಿವೆ. ಈಗಲೂ ಪೇಸ್ ಮೇಕರ್ ಸೇರಿದಂತೆ ಕೃತಕ ಉಸಿರಾಟ ಯಂತ್ರವನ್ನು ಬಾಬಾ ಅವರಿಗೆ ಅಳವಡಿಸಲಾಗಿದೆ.

ಈ ಮಧ್ಯೆ, ಬಾಬಾ ಚೇತರಿಸಿಕೊಳ್ಳಲು ದಿನಗಳೇ ಆಗಬಹುದು, ತಿಂಗಳುಗಳೇ ಹಿಡಿಯಬಹುದು. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗದು ಎಂದು ಬಾಬಾ ಆರೋಗ್ಯದ ಉಸ್ತುವಾರಿ ವಹಿಸಿರುವ ಡಾ. ಸಫಾಯಾ ಹೇಳಿದ್ದಾರೆ.

ವೈಟ್ ಫೀಲ್ಡ್ ನಲ್ಲಿ 1984ರ ಏ. 26ರಂದು ಸಾಯಿಬಾಬಾ ಅವರ ಹಸ್ತದಿಂದಲೇ ಉದ್ಘಾಟನೆಗೊಂಡ 'ಬೃಂದಾವನ', ಬಾಬಾ ಅವರು ಬೆಂಗಳೂರಿಗೆ ಬಂದಾಗ ಅವರ ಆಶ್ರಯಕ್ಕಾಗಿ ವಿಶೇಷವಾಗಿ ನಿರ್ಮಿಸಲಾದ ತಾಣ ಇದಾಗಿದೆ. ಎರಡು ವರ್ಷಗಳ ಹಿಂದೆ ಬಾಬಾ ಇಲ್ಲಿಗೆ ಆಗಮಿಸಿದ್ದರು. ನಂತರದ ದಿನಗಳಲ್ಲಿ ಬಾಬಾ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಆಶ್ರಮದ ಮೂಲಗಳು ತಿಳಿಸಿವೆ.

English summary
Praying for speedy recovery of Sai Baba, an Akhanda Bhajan has been organised at Brindavan, Kadugodi, Bangalore on Sunday (April 10) between 9 am to 6 pm. The President of the Sri Satya Sai Organisation, Kum Rao has requested the devotees to participate in the prayer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X