ಸಾಯಿಬಾಬಾ ಅನಾರೋಗ್ಯ: ಗ್ರಾಮದೇವತೆಯ ಶಾಪ?

ಒಂದು ವಾರದ ಹಿಂದೆ ಏನಾಯಿತೆಂದರೆ ... ಅದಕ್ಕೂ ಮುನ್ನ, ವಿಭೂತಿ ಪುರುಷ ಸತ್ಯ ಸಾಯಿ ಬಾಬಾ ಎಂದೇ ಹೆಸರುವಾಸಿಯಾದ ಬಾಲಕ ಸತ್ಯಾನಾರಾಯಣನಿಗೂ ಪುಟ್ಟಪರ್ತಿಗೂ ನಿಕಟ ಸಂಬಂಧವಿದೆ. ಪುಟ್ಟಪರ್ತಿ ಎಂಬ ಕುಗ್ರಾಮವನ್ನು ಪ್ರಗತಿಯತ್ತ ಕೊಂಡೊಯ್ದು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿಕೊಟ್ಟ ಪುಣ್ಯಾತ್ಮ ಆತ. ಅದರಂತೆ ಇಲ್ಲಿನ ಜನ ದೇವ ಮಾನವ ಸಾಯಿಬಾಬಾ ಜತೆಜತೆಗೆ ಗ್ರಾಮದ ಅಧಿದೇವತೆಯನ್ನೂ ಆರಾಧಿಸತೊಡಗಿದರು.
ಇಂತಿಪ್ಪ ಜನ ತಿಳಿದೋ, ತಿಳಿಯದೆಯೋ ಪುಟ್ಟಪರ್ತಿ ಗ್ರಾಮ ದೇವಿ ಸತ್ಯಮ್ಮದೇವಿಯ ವಿಗ್ರಹವನ್ನು ಊರಿನ ಸಮೀಪವಿರುವ ಬುಕ್ಕಾಪಟ್ಟಣ ಕೆರೆಯಲ್ಲಿ ಇತ್ತೀಚೆಗೆ ವಿಸರ್ಜನೆ ಮಾಡಿಬಿಟ್ಟರು. ಸರಿ ಅದೇ ವೇಳೆಗೆ ಆಸ್ಪತ್ರೆ ಸೇರಿದ್ದ ಪವಾಡ ಪುರುಷ ಸಾಯಿಬಾಬಾ ಅವರ ಆರೋಗ್ಯ ತೀರಾ ಹದಗೆಟ್ಟಿದೆ. ಕಂಗಾಲಾದ ಗ್ರಾಮದ ಹಿರಿಯರು ಸಭೆ ಸೇರಿ ವಿಚಾರ ಮಾಡಿದಾಗ ಗ್ರಾಮ ದೇವತೆಯನ್ನು ಕೆರೆಯಲ್ಲಿ ವಿಸರ್ಜನೆ ಮಾಡಿರುವುದೇ ಅನಾಹುತಕ್ಕೆ ಕಾರಣ ಎಂಬುದನ್ನು ಪತ್ತೆಹಚ್ಚಿದ್ದಾರೆ. ಸರಿ ತಡಮಾಡದೆ, ಸೋಮವಾರ ಸಂಜೆಯೇ ಹತ್ತಾರು ಮಂದಿ ಕೆರೆಗೆ ಧುಮುಕಿ ಗ್ರಾಮದೇವತೆಯ ವಿಗ್ರಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಕೊನೆಗೆ ಮಂಗಳವಾರ ಬೆಳಗ್ಗೆ ವಿಗ್ರಹವನ್ನು ಪತ್ತೆಹಚ್ಚಲಾಗಿದ್ದು, ನೀರಿನಿಂದ ಹೊರತೆಗೆಯಲಾಗಿದೆ. ಸುಮಾರು ಎರಡು ಅಡಿ ಎತ್ತರದ ವಿಗ್ರಹವನ್ನು ಊರಿನಲ್ಲಿರುವ ದೊಡ್ಡ ಮರದ ಕೆಳಗೆ ಇಡಲಾಗಿದೆ. ವಿಗ್ರಹಕ್ಕೆ ಪೂಜೆ ಪುನಸ್ಕಾರಗಳು ಭರದಿಂದ ಸಾಗಿವೆ. ಇದೇ ವೇಳೆ, ಸಾಯಿಬಾಬಾ ಆರೋಗ್ಯ ವಿಚಾರಿಸಿ, ಪುಟ್ಟಪರ್ತಿಗೆ ಆಗಮಿಸಿದ್ದ ಭಕ್ತಾದಿಗಳೂ ದೊಡ್ಡ ಮರದ ಕೆಳೆಗೆ ಸೇರಿ, ದೇವತೆಯನ್ನು ಪೂಜಿಸತೊಡಗಿದ್ದಾರೆ. ಈ ಮಧ್ಯೆ ಗ್ರಾಮದ ಹಿರಿಯರು ವಿಶೇಷ ಪೂಜೆ ನೆರವೇರಿಸಿ, ವಿಗ್ರಹವನ್ನು ಪ್ರತಿಷ್ಠಾಪಿಸುವುದಕ್ಕೆನಿರ್ಧರಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications