ವಿಶ್ವಕಪ್ ಸರಣಿ ಶ್ರೇಷ್ಠ ಯುವಿಯ ವಿಶೇಷ ವ್ಯಕ್ತಿ ಯಾರು?
ಮುಂಬೈ, ಏ.3: ವಿಶ್ವಕಪ್ 2011ರಲ್ಲಿ ಅದ್ಭುತ ಆಲ್ ರೌಂಡರ್ ಆಟದ ಮೂಲಕ ಭಾರತದ ಗೆಲುವಿನ ಅಭಿಯಾನಕ್ಕೆ ಯುವರಾಜ್ ಬೆನ್ನೆಲುಬಾಗಿದ್ದರು. ಯುವರಾಜ್ ತಮ್ಮ ಆಟದ ಹಿಂದಿನ ಶಕ್ತಿ ಯಾರು ಎಂಬ ವಿಷಯವನ್ನು ಕೊನೆಗೂ ಬಹಿರಂಗಗೊಳಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಡಿಲಲ್ಲಿ ವಿಶ್ವಕಪ್ ಹಾಕುವುದು ನನ್ನ ಗುರಿಯಾಗಿತ್ತು. ಅದರಂತೆ, ನಾನು ನನ್ನ ಗುರಿಯನ್ನು ತಲುಪಿದ್ದೇನೆ ಎಂದು ಯುವಿ ಹೇಳಿದ್ದಾರೆ.
ವಿಶ್ವಕಪ್ ನಲ್ಲಿ ನಾಲ್ಕು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದ ಯುವಿ, ನನ್ನ ಆಟದ ಹಿಂದಿನ ಪ್ರೇರಕ ಶಕ್ತಿಯೊಬ್ಬರಿದ್ದಾರೆ ಅವರಿಗೆ ಈ ಆಟ ಅರ್ಪಿತ ಎಂದಿದ್ದರು. ಆ ವ್ಯಕ್ತಿ ಎಂಬ ರಹಸ್ಯವನ್ನು ಫೈನಲ್ ನಂತರ ಹೇಳುತ್ತೇನೆ ಎಂದಿದ್ದರು. ಯುವಿಯ ಹೇಳಿದ ಆ ವ್ಯಕ್ತಿ ಯಾರು ಎಂದು ತಿಳಿಯದೆ ಕಿಮ್ ಶರ್ಮಾ ರಿಂದ ಹಿಡಿದು ಯುವರಾಜ್ ಸಿಂಗ್ ಹಳೆ, ಹೊಸ ಗೆಳೆತಿಯರ ಹೆಸರನ್ನು ಹೊರಕ್ಕೆ ತರಲಾಯಿತು. ಆದರೆ, ಕೊನೆಗೂ ಯುವರಾಜ್ ಅವರ ವಿಶೇಷ ವ್ಯಕ್ತಿ ಯಾರೆಂದು ಜಗಜಾಹ್ಹೀರಾಗಿದೆ.
ಸಚಿನ್ ಗಾಗಿ ನಾನು ಈ ವಿಶ್ವಕಪ್ ಆಡಿದ್ದೇನೆ. ನನ್ನ ಈ ಸಾಧನೆಗೆ ಸಚಿನ್ ಕಾರಣ. ಸಚಿನ್ ಗೆ ಇದಕ್ಕಿಂತ ಹೆಚ್ಚಿನ ಕೊಡುಗೆ ಕೊಡಲು ಸಾಧ್ಯವೇ? ನನ್ನ ಜೀವಮಾನದ ಸಾಧನೆಯನ್ನು ಸಚಿನ್ ಗೆ ಅರ್ಪಿಸುತ್ತೇನೆ. 19 ವರ್ಷದೊಳಗಿನವರ ವಿಶ್ವಕಪ್, ಟಿ20 ವಿಶ್ವಕಪ್ ಗೆದ್ದ ಬಳಿಕ ವಿಶ್ವಕಪ್ 2011 ಗೆದ್ದಿರುವುದು ವಿಶೇಷ ಸಂತಸ ತಂದಿದೆ. ನನ್ನ ತಂದೆ, ತಾಯಿ, ಗುರೂಜಿ, ಬೌಲಿಂಗ್ ಸಲಹೆ ನೀಡಿದ ನರೇಂದ್ರ ಹಿರ್ವಾನಿ ಹಾಗೂ ಅಭಿಮಾನಿಗಳಿಗೆ ನಾನು ಚಿರಋಣಿ ಎಂದು ಗದ್ಗದಿತರಾದ ಯುವರಾಜ್ ಹೇಳಿದ್ದಾರೆ.
ಧೋನಿ, ಸೌರವ್ ಗೆ ಥ್ಯಾಂಕ್ಸ್: ಕಷ್ಟದ ಸಂದರ್ಭದಲ್ಲೂ ತಂಡದಲ್ಲಿ ಸ್ಥಾನ ಕಲ್ಪಿಸಿ, ಹುರಿದುಂಬಿಸಿದ ಎಂಎಸ್ ಧೋನಿ ಹಾಗೂ ಸೌರವ್ ಗಂಗೂಲಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಟೀಕಾಕಾರರಿಗೆ ಬ್ಯಾಟಿಂಗ್ ಮೂಲಕ ಉತ್ತರಿಸುವಂತೆ ನೀಡಿದ ಸಲಹೆಯನ್ನು ಸಾರ್ಥಕಗೊಳಿಸಿದ ತೃಪ್ತಿಯಿದೆ ಎಂದು ಯುವಿ ಹೇಳಿದ್ದಾರೆ. 29 ವರ್ಷದ ಚಂಡೀಗಢದ ಈ ಆಟಗಾರ ವಿಶ್ವಕಪ್ 2011ರಲ್ಲಿ 369ರನ್ ಗಳಿಸಿದ್ದಲ್ಲದೆ 15 ವಿಕೆಟ್ ಪಡೆದು ಅದ್ಭುತ ಸಾಧನೆ ಮೆರೆದಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications