ಪೂನಂ ಪಾಂಡೆ ಬೆತ್ತಲೆ ಸೇವೆಗೆ ದಿನಗಣನೆ!
ಭಾರತ ತಂಡ ವಿಶ್ವಕಪ್ ಕ್ರಿಕೆಟ್ ಗೆದ್ದರೆ ತಾನು ಸಂಪೂರ್ಣ ಬಟ್ಟೆ ಬಿಚ್ಚಿ ಕುಣಿದಾಡುವುದಾಗಿ ಹೇಳಿ ಕ್ರೀಡಾಭಿಮಾನಿಗಳಿಗೆ ಕಿಚ್ಚು ಹಚ್ಚಿದ್ದ ಪೂನಂ, ನಗ್ನ ಸೌಂದರ್ಯ ಪ್ರದರ್ಶನಕ್ಕೆ ದಿನಗಣನೆ ಆರಂಭವಾಗಿದೆ. ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಪೂನಮ್ ಹಾಟ್ ಟಾಪಿಕ್ ಆಗಿದ್ದಾರೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬುಧವಾರ ಮೊಹಾಲಿಯಲ್ಲಿ ಭಾರತ ಬಗ್ಗು ಬಡಿದಿರುವುದು ಪೂನಂಗೆ ಸಾಕಷ್ಟು ಖುಷಿ ಕೊಟ್ಟಿದೆಯಂತೆ."3 days to go to Complete my Promise to INDIA :)" ಎಂದು ಟ್ವೀಟ್ ಮಾಡುವ ಮೂಲಕ ಮಾತಿಗೆ ತಪ್ಪುವುದಿಲ್ಲ ಎಂದು ಪೂನಮ್ ಹೇಳಿದ್ದಾರೆ.

ಅಲ್ಲಮ್ಮಾ. ನೀನು ಬಟ್ಟೆ ಬಿಚ್ಚಿವುದರಿಂದ ಟೀಂ ಇಂಡಿಯಾಗೆ ಏನು ಲಾಭ ಎಂದರೆ? ನನ್ನ ನಗ್ನ ದೇಹವನ್ನು ನೋಡಿ ಟೀಂ ಇಂಡಿಯಾದ ಹುಡುಗರಲ್ಲಿ ಮತ್ತಷ್ಟು ಹುರುಪು ಮೂಡಲಿದೆ ಎಂದಿದ್ದಾರೆ! ಟೀಂ ಇಂಡಿಯಾವನ್ನು ಭೇಟಿ ಮಾಡಿ ಅವರ ಡ್ರೆಸ್ಸಿಂಗ್ ರೂಂನಲ್ಲಿ ಅವರ ಮುಂದೆ ಬಟ್ಟೆ ಬಿಚ್ಚಿಡುತ್ತೇನೆ! ಒಂದು ವೇಳೆ ಇದಕ್ಕೆ ಒಪ್ಪದಿದ್ದರೆ ಕ್ರೀಡಾಂಗಣದಲ್ಲೇ ಬಟ್ಟೆ ಬಿಚ್ಚಿ ಕುಣಿದಾಡಲು ನನಗೇನು ಮುಜುಗರವಿಲ್ಲ ಎಂದು ಪೂನಂ ಹೇಳಿದ್ದಾರಂತೆ.
ಫೀಫಾ ಫುಟ್ಬಾಲ್ ವಿಶ್ವಕಪ್ ಸಂದರ್ಭದಲ್ಲಿ ಪರುಗ್ವೆ ರೂಪದರ್ಶಿ ಲಾರಿಸ್ಸಾ ರಿಕೆಲ್ಮೆ ಹಾಗೂ ಅರ್ಜೆಂಟೀನಾದ ಲೂಸಿಯಾನಾ ಸಲಾಜಾರ್ ಕೂಡಾ ಇದೇ ರೀತಿ ಬೆತ್ತಲೆ ಸೇವೆ ಓಟ ಮಾಡುವುದಾಗಿ ಘೋಷಿಸಿ, ತಕ್ಕಮಟ್ಟಿನ ದರ್ಶನ ಭಾಗ್ಯ ನೀಡಿದ್ದರು. ಬಹುಶಃ ಚಿತ್ರರಂಗ ಹಾಗೂ ಮಾಡೆಲ್ ಪ್ರಪಂಚದಲ್ಲಿ ಈಗಷ್ಟೇ ಕಾಲಿರಿಸುತ್ತಿರುವ ಪೂನಂ ಕೂಡಾ ದಿಢೀರ್ ಎಂದು ಪ್ರಚಾರ ಪಡೆಯಲು ಬೆತ್ತಲೆ ತಂತ್ರ ಪ್ರಯೋಗಿಸಿದ್ದಾರೆ.
ವಾಂಖೆಡೆ ಸ್ಟೇಡಿಯಂನಲ್ಲಿ ಲಂಕನ್ನರ ವಿರುದ್ಧ ಟೀಂ ಇಂಡಿಯಾ ಅಂತಿಮ ಹಣಾಹಣಿ ಮೇಲೆ ಒಂದು ಕಣ್ಣು, ಪೂನಂ ಪಾಂಡೆ ಮೇಲೆ ಇನ್ನೊಂದು ಕಣ್ಣು ಇರಿಸುವುದಾಗಿ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ. ಪೂನಂ ಸುದ್ದಿ ಪ್ರಕಟವಾದ ತಕ್ಷಣ ನಮ್ಮ ಹಿರಿಯ ಓದುಗರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ: " ಮೊದಲು ಬಟ್ಟೆ ಹಾಕಿಕೊಳ್ಳುವುದು ಕಲಿಯಲ್ಲ, ಆಮೇಲೆ ಬಿಚ್ಚುವಂತೆ".
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications