ಗಾಂಧಿ ಪುಸ್ತಕ ನಿಷೇಧಕ್ಕೆ ಗಾಂಧಿ ವಿರೋಧ!
"ಅಭಿವ್ಯಕ್ತಿ ಸ್ವಾತಂತ್ರದ ಪರವಾಗಿದ್ದ ಮಹಾತ್ಮ ಸ್ಮರಣೆಗೆ ಪುಸ್ತಕವನ್ನು ನಿಷೇಧಿಸುವುದು ಪುಸ್ತಕ ದಲ್ಲಿ ಬರೆದ ಅಂಶಗಳಿಗಿಂತ ಹೆಚ್ಚಿನ ಅಪಚಾರ" ಎಂದು ತುಷಾರ್ ಪ್ರತಿಕ್ರಿಯಿಸಿ ಅಚ್ಚರಿ ಮೂಡಿಸಿದ್ದಾರೆ. ಪುಸ್ತಕವನ್ನು ನಿಷೇಧಿಸಲಾಗುವುದೆಂದು ಮಹಾರಾಷ್ಟ್ರದ ಕಾಂಗ್ರೆಸ್-ಎನ್ಸಿಪಿ ಸರ್ಕಾರ ಹೇಳುವ ಮೂಲಕ, ತಾನೇ ಹುಟ್ಟುಹಾಕಿದ ನಿಷೇಧ ಸಂಸ್ಕೃತಿಯ ದಾರಿಯಲ್ಲಿ ಸಾಗಿದೆ ಎಂಬ ಟೀಕೆ ಪ್ರಜ್ಞಾವಂತರ ವಲಯದಲ್ಲಿ ವ್ಯಕ್ತವಾಗಿದೆ. "ಸರಕಾರ ನಿಷೇಧ ವಿಧಿಸಿದರೆ ನಾನು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ" ಎಂದು ತುಷಾರ್ ಸಾರಿದ್ದಾರೆ.
ತಾನು ನಿಷೇಧ ಸಂಸ್ಕೃತಿಗೆ ವಿರೋಧವಾಗಿರುವುದಾಗಿ ಹೇಳಿರುವ ತುಷಾರ್, ಮಹಾತ್ಮಾ ಗಾಂಧಿ, ಸಲಿಂಗ ಕಾಮಿಯೋ ಅಥವಾ ಮತ್ತೊಂದೋ ಆಗಿದ್ದರೆನ್ನುವ ಉಲ್ಲೇಖದಿಂದ ಏನು ಆಗಬೇಕಾಗಿದೆ ? ಏನೇ ಆದರೂ, ಮಹಾತ್ಮಾ ಗಾಂಧೀ, ಮಾಚ್ 24ರಂದು ತನ್ನ ಪ್ರಥಮ ವರ್ಷಾಚರಣೆಯನ್ನು ಪೂರೈಸಿದೆ. ಭಾರತವನ್ನು ಸ್ವಾತಂತ್ರ ದೆಡೆಗೆ ಮುನ್ನೆಡೆಸಿದವರು ಎನ್ನುವುದನ್ನು ಬಚ್ಚಿಡಲಾಗುವುದಿಲ್ಲವಲ್ಲ ?" ಎಂದು ತುಷಾರ್ ಗಾಂಧೀ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.