ರಣಾಂಗಣ ತಲುಪಿದ ಯುವರಾಜ, ಮುಂದ!?
ಮೊಹಾಲಿ, ಮಾ. 26: ಭಾರತ-ಪಾಕ್ ಕದನಕ್ಕೆ ಮೊಹಾಲಿ ನವವಧುವಿನಂತೆ ಸಜ್ಜಾಗುತ್ತಿದೆ. ಯುವರಾಜ ಸಿಂಗ್ ಭಾನುವಾರ ಪುರಪ್ರವೇಶ ಮಾಡಿದ್ದು, ಬುಧವಾರದ ಮಹತ್ವದ ಪಂದ್ಯಕ್ಕಾಗಿ ಸ್ಟೇಡಿಯಂನಲ್ಲಿ ಬೆವರಿಳಿಸಿ, ಸಮರಾಭ್ಯಾಸದಲ್ಲಿ ನಿರತರಾಗಿದ್ದಾರೆ. ಅಂದ ಹಾಗೆ ಅವರು ತಾಯಿಯ ಆಶೀರ್ವಾದ ಪಡೆಯಲು ಸಮೀಪದಲ್ಲೇ ಇರುವ ಹುಟ್ಟೂರಿಗೆ ತೆರಳಿದ್ದರು.
ಅರೆ ಗಳಿಗೆ ಹಿಂದಕ್ಕೆ ಸರಿದಾಗ ಹಾಲಿ ವಿಶ್ವ ಕಪ್ ಕ್ರಿಕೆಟ್ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿತ್ತು. ತಂಡದಲ್ಲಿ ಯುವರಾಜ್ ಸಿಂಗ್-ಗೆ ಸ್ಥೈಆನ ದಯಪಾಲಿಸಿದ್ದನ್ನು ಕಂಡು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸತತ ವೈಫಲ್ಯಗಳಿಂದ ಬಳಲಿದ್ದ ಯುವ್ವಿ ತಮ್ಮ ಎಂದಿನ ಆಟದ ಲಯ ಕಂಡುಕೊಳ್ಳಲು ಪರದಾಡುತ್ತಿದ್ದರು. ಇವಯ್ಯನ್ನ ಯಾಕಪ್ಪಾ ಟೀಂಗೆ ತೆಗೆದುಕೊಂಡರು ಎಂದು ಕಿಡಿಕಾರಿದ್ದರು.
ಆದರೆ ಈಗ ಬದಲಾದ ಸನ್ನಿವೇಶದಲ್ಲಿ 'ವಿಶೇಷ ಪ್ರೇರಕ ಶಕ್ತಿ'ಯ ಆಣತಿಯಂತೆ ಆಡುತ್ತಿರುವ 29ರ ಹರಯದ ಯುವರಾಜನತ್ತಲೇ ಎಲ್ಲರ ನೋಟ. ಈಗಾಗಲೇ ನಾಲ್ಕು ಬಾರಿ ಪಂದ್ಯ ಪುರೊಷೋತ್ತಮ ಪ್ರಶಸ್ತಿಗಳೊಂದಿಗೆ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇನ್ನೊಂದೇ ಒಂದು ಬಾರಿ ಪಂದ್ಯ ಪುರೊಷೋತ್ತಮ ಎನಿಸಿದರೂ ಸಾಕು ನಮ್ಮ ಯುವರಾಜನೇ ವಿಶ್ವ ಕಪ್-2011ರ ಮಹಾರಾಜ ಅರ್ಥಾತ್ ಸರಣಿ ಪುರೋಷತ್ತಮ ಎಂದು ಸಾರಿ ಹೇಳಬಹುದು.
ಇಂತಿಪ್ಪ ಯುವರಾಜ ಈ ಬಾರಿ ಸಿಕ್ಸರ್ ಎತ್ತದೆ ಎಚ್ಚರಿಕೆ ಮಿಶ್ರಿತ ಆಕ್ರಮಣದ ಆಟವಾಡುತ್ತಿದ್ದಾರೆ. ಒಂದೇ ಓವರ್-ನಲ್ಲಿ ಆರು ಸಿಕ್ಸರ್ ಎತ್ತಿದ ಪುಣ್ಯಾತ್ಮ ಇವಯ್ಯನೇನಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಅಷ್ಟಕ್ಕೂ ಇದುವೆಗಿನ ಪಂದ್ಯಗಳಲ್ಲಿ ಯುವ್ವಿ ಮೂರು ಬಾರಿ ಮಾತ್ರ ಬೌಂಡರಿ ಆಚೆಗೆ ಬಾಲನ್ನು ಎತ್ತಿದ್ದಾನೆ. ಆದಾಗ್ಯೂ ವಿರೋಧಿ ತಂಡಗಳನ್ನು ಪಂದ್ಯದಿಂದಾಚೆಗೆ, ಕೊನೆಗೆ ಪಂದ್ಯಾವಳಿಯಿಂದಾಚೆಗೆ (ಆಸ್ಟ್ರೇಲಿಯಾ) ಒಗಾಯಿಸಿದ್ದಾನೆ.
ಪಂದ್ಯಾವಳಿ ಆರಂಭಕ್ಕೂ ಮುನ್ನ, ಯುವ್ವಿ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ತಂಡದ ದೊಡ್ಡಣ್ಣ ಧೋನಿ, ಐದನೇ ಬೌಲರ್ ತಲಾಶೆಯಲ್ಲಿದ್ದೇವೆ. ಯುವರಾಜ ಆ ಜವಾಬ್ದಾರಿ ಹೊತ್ತರೆ ಸಾಕು ಎಂದಿದ್ದರು. ಈಗ ನೋಡಿದರೆ ಯುವ್ವಿ ತಮ್ಮ ಕೈ ಚಳಕದಿಂದಲೇ ಪಂದ್ಯಗಳನ್ನು (ಇದುವರೆಗೆ 11 ವಿಕೆಟ್ ಕಬಳಿಸಿದ್ದಾರೆ) ಏಕಾಂಗಿಯಾಗಿ ಗೆದ್ದುಕೊಟ್ಟಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ ಮತ್ತು ಏಳು ಓವರೆ ಎಸೆದರೂ ವಿಕೆಟ್ ತೆಗೆದುಕೊಳ್ಳಲಿಲ್ಲ ಎಂಬುದನ್ನು ಬಿಟ್ಟರೆ ಯುವ್ವಿ ಹಿಂದುರುಗಿ ನೋಡಿದ್ದೇ ಇಲ್ಲ.
ಮುಂದ!
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications