ಸಿಖ್ಖರಿಗೆ ಅವಮಾನ; ಇಟಲಿ ಕ್ಷಮಾಯಾಚನೆ
ನವದೆಹಲಿ,
ಮಾ.24: ಸಿಖ್ ಸಮುದಾಯಕ್ಕೆ ಸೇರಿದ ಗಾಲ್ಫ್ ಪಟು ಜೀವ್ ಮಿಲ್ಕಾ ಸಿಂಗ್ ಅವರ ತರಬೇತುದಾರ ಪೇಟ ತೆಗೆಸಿದ ಪ್ರಕರಣ, ರಾಷ್ಟ್ರಕ್ಕೆ ಮಾಡಿದ ಅಪಮಾನ ಎಂದು ಪರಿಗಣಿಸಲಾಗಿದೆ. ಈ ಸಂಬಂಧ ಭಾರತ ಸರ್ಕಾರ, ಇಟಲಿ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ ಹೇಳಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿರುವ ಇಟಲಿ ಸರ್ಕಾರ ಜೀವ್ ಅವರ ಕೋಚ್ ಕ್ಷಮೆಯಾಚನೆ ಮಾಡಿದೆ. id="toptextpromo">ಫೈಯಿಂಗ್
ಸಿಖ್ ಮಿಲ್ಕಾ ಸಿಂಗ್ ಪುತ್ರ ಜೀವ್ ಅವರ ಕೋಚ್ ಅಮೃತಿಂದರ್ ಸಿಂಗ್ ಅವರ ಪಗಡಿಯನ್ನು ಕಳಸುವಂತೆ ಮಿಲನ್ ವಿಮಾನ ನಿಲ್ದಾಣದ ಸಿಬ್ಬಂದಿ ಒತ್ತಾಯಿಸಿದರು.ಈ ರೀತಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭದಲ್ಲಿ ಅವರು ಧರಿಸಿದ್ದ ಪೇಟವನ್ನು ಕಳಚುವಂತೆ ಒತ್ತಾಯಿಸಿದ ಘಟನೆ ನಡೆದಿರುವುದು ಎರಡನೇ ಬಾರಿ. ಅಮೃತಿಂದರ್ ಸಿಂಗ್ ಅವರನ್ನು ಮೊದಲ ಬಾರಿ ತಪಾಸಣೆ ಮಾಡಿದ್ದ ಅಧಿಕಾರಿಯೆ ಮತ್ತೊಮ್ಮೆ ಪೇಟ ಕಳಚುವಂತೆ ಕೇಳಿದ್ದು ವಿವಾದಕ್ಕೆ ಕಾರಣವಾಗಿದೆ. id='are-slot-1' class='oiad oi-axt oiadv'> id='top-searched-articles'>ಸಿಖ್
ಸಮುದಾಯಕ್ಕೆ ಇದರಿಂದ ಅಪಮಾನವಾಗಿದೆ ಎಂದು ಆಕ್ಷೇಪಿಸಿದ ಭಾರತ ಸರ್ಕಾರ, ವಿದೇಶಾಂಗ ಸಚಿವಾಲಯ, ಭಾರತದಲ್ಲಿರುವ ಇಟಲಿ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಮಿಲನ್ ವಿಮಾನ ನಿಲ್ದಾಣದ ಘಟನೆಯನ್ನು ಸಂಸತ್ತಿನಲ್ಲಿ ತೀವ್ರ ಖಂಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ಎಷ್ಟು ಮುಖ್ಯವೋ, ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡುವುದು ಅಷ್ಟೆ ಮುಖ್ಯ ಎಂದಿದ್ದಾರೆ.











Click it and Unblock the Notifications