ದಾವೂದ್ ಆಸ್ತಿ: ಕೊನೆಗೂ ಹಕ್ಕು ಸ್ಥಾಪನೆ

ಈ ಬೇನಾಮಿ ಆಸ್ತಿ ವಾಣಿಜ್ಯ ಸಂಕೀರ್ಣವಾಗಿದ್ದು, ಪಾತಕಿ ದಾವೂದ್ 1980ರ ದಶಕದಲ್ಲಿ ತನ್ನ ಭೂಗತ ಚಟುವಟಿಕೆಗಳನ್ನು ಇಲ್ಲಿಂದಲೇ ನಡೆಸುತ್ತಿದ್ದ. ಪ್ರಸ್ತುತ ಈ ಆಸ್ತಿ ದಾವೂದ್-ನ ಸೋದರಿ ಹಸೀನಾ ಪಾರ್ಕರ್ ಹಿಡಿತದಲ್ಲಿದ್ದು, ಇನ್ನು ಮೂರು ತಿಂಗಳಲ್ಲಿ ಅದನ್ನು ಶ್ರೀವಾಸ್ತವ ಅವರಿಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಕಳೆದ ವಾರ ಸೂಚಿಸಿದೆ. ಒಂದು ವೇಳೆ ಹಸೀನಾ ಆಸ್ತಿಯನ್ನು ಪರಭಾರೆ ಮಾಡಲು ಒಪ್ಪದಿದ್ದಲ್ಲಿ ಶ್ರೀವಾಸ್ತವ ಅವರು ಪೊಲೀಸರ ನೆರವಿನೊಂದಿಗೆ ಬಲವಂತದಿಂದ ಅದನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದೂ ನ್ಯಾಯಾಲಯ ಹೇಳಿದೆ. ಶ್ರೀವಾಸ್ತವ ಕಾನೂನು ಪ್ರಕ್ರಿಯೆಗಾಗಿ ಖರ್ಚು ಮಾಡಿರುವ ಹಣವನ್ನೂ ಪಾವತಿಸುವಂತೆ ಹಸೀನಾಗೆ ತಿಳಿಸಲಾಗಿದೆ.
1996ರಲ್ಲಿ ದಾವೂದ್-ನಿಂದ ಇಲಾಖೆಗೆ 40.31 ಕೋಟಿ ರು. ತೆರಿಗೆ ಬರಬೇಕಿತ್ತು. ಇಲಾಖೆ ನೀಡುತ್ತಿದ್ದ ಯಾವುದೇ ನೋಟಿಸ್-ಗೆ ಪಾತಕಿ ಕ್ಯಾರೆ ಎನ್ನುತ್ತಿರಲಿಲ್ಲ. ಆಗ ಇಲಾಖೆ ಅನಿವಾರ್ಯವಾಗಿ 11 ಕಡೆಗಳಲ್ಲಿ ದಾವೂದ್-ಗೆ ಸೇರಿದ ಆಸ್ತಿಯನ್ನು ಜಫ್ತಿ ಮಾಡಿತು. 2011ರಲ್ಲಿ ಆ ಆಸ್ತಿಗಳನ್ನೆಲ್ಲ ಒಂದೊಂದಾಗಿ ಹರಾಜಿಗಿಟ್ಟಿತು. ನಾಗಪಾಡದಲ್ಲಿರುವ ವಾಣಿಜ್ಯ ಸಂಕೀರ್ಣವನ್ನು ಶ್ರೀವಾಸ್ತವ ಧೈರ್ಯವಾಗಿ ಖರೀದಿಸಿದ್ದರು. ಆದರೆ ದಾವೂದ್-ನ ಆಣತಿಯಂತೆ ಛೋಟಾ ಶಕೀಲ್ ನಿರಂತವಾಗಿ ಶ್ರೀವಾಸ್ತವಗೆ ಬೆದರಿಕೆಯೊಡ್ಡಿದ್ದ.
ಶ್ರೀವಾಸ್ತವ 2.5 ಲಕ್ಷ ಖಾತರಿ ಹಣ ನೀಡಿ ನಾಗಪಾಡ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ನಿರ್ಧರಿಸಿದರು. ಇಲಾಖೆಯೂ ಇದಕ್ಕೆ ಅಂಕಿತ ಹಾಕಿತು. ಅದಕ್ಕೂ ಮುನ್ನ, ಒಂದು ಹಂತದಲ್ಲಿ ಶ್ರೀವಾಸ್ತವ ಅವರು ದಾವೂದ್ ಮನುಷ್ಯ ಎಂದು ಇಲಾಖೆಯೂ ಸಂದೇಹ ವ್ಯಕ್ತಪಡಿಸಿತ್ತು. ಆದರೆ ಹಸೀನಾ ವಾಣಿಜ್ಯ ಸಂಕೀರ್ಣದ ಮೇಲೆ ಹಕ್ಕು ಸ್ಥಾಪಿಸಲು ಮುಂದಾಗಿದ್ದಳು. ದಾವೂದ್-ಗೂ ಈ ಆಸ್ತಿಗೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ತನಗೆ ಆಸ್ತಿ ಎಂದು ನ್ಯಾಯಾಲಯದಲ್ಲಿ 2004ರಲ್ಲಿ ದಾವೆ ಹೂಡಿದ್ದಳು. ಆಗ ಶ್ರೀವಾಸ್ತವ ದಾವೂದ್ ಕಡೆಯ ಮನುಷ್ಯ ಅಲ್ಲ ಎಂಬುದು ಖಾತ್ರಿಯಾಯಿತು. ಇದೀಗ ಶ್ರೀವಾಸ್ತವ ಅವರಿಗೆ ಆಸ್ತಿ ಪರಭಾರೆಯಾಗಲಿದೆ ಎಂದು ಇಲಾಖೆ ಹೇಳಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications