ರೋಟರಿಗಳ ಜತೆ ಲೋಕಾಯುಕ್ತ ಮುಕ್ತಸಭೆ

Lokayukta Justice Santosh Hegde
ಬೆಂಗಳೂರು, ಮಾ. 17 : ಮಾನ್ಯ ರೋಟರಿ ಸದಸ್ಯರು ಮತ್ತು ಕರ್ನಾಟಕದ ಎಲ್ಲ ಸ್ನೇಹಿತರಿಗೆ ರೊ.ಗೌರಸ್ವಾಮಿ ಕೃಷ್ಣಮೂರ್ತಿ ಮಾಡುವ ವಿಜ್ಞಾಪನೆಗಳು. ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತವನ್ನು ಪುನರ್ ಪ್ರತಿಷ್ಠಾಪಿಸುವುದರ ಮೂಲಕ ಆಧುನಿಕ ಭಾರತ ನಿರ್ಮಾಣ ಮಾಡುವ ಕನಸನ್ನು ನಾವೆಲ್ಲ ಇಟ್ಟುಕೊಂಡಿದ್ದೇವೆ. ನಮ್ಮ ಕನಸಿಗೆ ಕನ್ನಡಿಯಾಗಿರುವ ಹೆಮ್ಮೆಯ ವ್ಯಕ್ತಿ ಲೋಕಾಯುಕ್ತ ಸಂತೋಷ್ ಹೆಗಡೆ. ಸ್ವಚ್ಛ ಮತ್ತು ರಚನಾತ್ಮಕ ರಾಷ್ಟ್ರ ರೂಪಿಸುವ ದಿಕ್ಕಿನಲ್ಲಿ ಅವರು ಹಗಲಿರುಳೂ ಶ್ರಮಸುತ್ತಿರುವುದು ನಮಗೆಲ್ಲ ತಿಳಿದೇ ಇದೆ.

ಅವರೊಂದಿಗೆ ಒಂದು ಅರ್ಥಪೂರ್ಣ ಸಂಜೆ ಕಳೆಯುವ ಉದ್ದೇಶವನ್ನು ರೋಟರಿ ಸದಸ್ಯರಾದ ನಾವು ಹೊಂದಿದ್ದೇವೆ. ರೋಟರಿ ಕ್ಲಬ್ ಆಫ್ ಬೆಂಗಳೂರಿನ ರೊ.ರಘುನಾಥ ರೆಡ್ಡಿ ಅವರ ಪುತ್ರ ರೊ.ಪೃಥ್ವಿ ರೆಡ್ಡಿ ಮತ್ತು ನನ್ನ ಮಗ ಅಮರ್ ಕೃಷ್ಮಮೂರ್ತಿ ಹಾಗೂ ಸಂಗಡಿಗರು ಕಲೆತು ಸಂತೋಷ್ ಹೆಗಡ್ ಅವರೊಂದಿಗೆ ಮುಕ್ತ ಸಂವಾದ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ತಾವೆಲ್ಲ ಆಗಮಿಸಬೇಕೆಂಬುದು ನಮ್ಮ ಹೆಬ್ಬಯಕೆ.

ಸ್ಥಳ : ರೋಟರಿ ಹೌಸ್ ಆಫ್ ಫ್ರೆಂಡ್ ಶಿಪ್, ಲ್ಯಾವೆಲೆ ರಸ್ತೆ, ಬೆಂಗಳೂರು. ದಿನಾಂಕ ಮಾರ್ಚ್ 20 ಭಾನುವಾರ. ಸಮಯ : ಸಂಜೆ 4 ಗಂಟೆ. ಮುಕ್ತ ಸಂವಾದದ ಕೇಂದ್ರ ವಿಷಯ : ಲೋಕಸಭೆಯಲ್ಲಿ ಜನಲೋಕ್ಪಾಲ್ ಮಸೂದೆ ಹಾಗೂ ಜನ್ ಲೋಕಾಯುಕ್ತ ಮಸೂದೆಯನ್ನು ರಾಜ್ಯ ವಿಧಾನಸಭೆಯನ್ನು ಅಂಗೀಕರಿಸುವುದು. ತಾವೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ಇಂತಿ, ನಿಮ್ಮ ವಿಶ್ವಾಸಿ. ರೊ. ಗೌರಸ್ವಾಮಿ ಕೃಷ್ಣಮೂರ್ತಿ. ಬೆಂಗಳೂರು. ಆರ್ ಎಸ್ ವಿಪಿ : [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+