ಚಿರು ಪುತ್ರಿ ಶ್ರೀಜಾಗೆ ಶುರುವಾಯ್ತು ಗಂಡನ ಕಾಟ

ಸೋಮವಾರ ಬೆಳಗ್ ಬೆಳಗ್ಗೆಯೇ ಪೊಲೀಸ್ ಠಾಣೆ ಮೆಟ್ಟಿಲು ತುಳಿದ ಶ್ರೀಜಾ, ತವರಿನಿಂದ ವರದಕ್ಷಿಣೆ ತಗೊಂಡು ಬಾ ಎಂದು ಪತಿರಾಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಕೆಲವು ತಿಂಗಳುಗಳಿಂದ ನನ್ನನ್ನು ಹಿಂಸಿಸುತ್ತಿದ್ದಾನೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಮೊರೆಯಿಟ್ಟಿದ್ದಾಳೆ. ಕುಟುಂಬದ ಮೂಲಗಳ ಪ್ರಕಾರ ಪುತ್ರಿಯ ಪ್ರೇಮಕ್ಕಾಗಿ ಅಳಿಮಯ್ಯ ಸಿರೀಶ್-ಗೆ ಚಿರು ಈಗಾಗಲೇ ಅನೇಕ ಕೋಟಿ ಕೋಟಿ ರುಪಾಯಿ ನೀಡಿದ್ದಾರೆ ಎನ್ನಲಾಗಿದೆ.
'ಆದರೆ ಇದಕ್ಕೆ ಕೊನೆ ಎಂಬುದೇ ಇಲ್ಲವೆಂಬಂತೆ ಸಿರೀಶನ ದುರಾಸೆ, ದುರ್ವತನೆಗಳು ವಿಪರೀತವಾಗಿವೆ. ದಿನಾ ಕುಡಿದು ಬಂದು ಪತ್ನಿಯನ್ನು ಪೀಡಿಸುತ್ತಿದ್ದಾನೆ. ಇತ್ತೀಚೆಗೆ ನಿಮ್ಮಪ್ಪನಿಂದ 1.5 ಕೋಟಿ ರುಪಾಯಿ ಇಸ್ಕೊಂಡು ಬಾ. ಇಲ್ಲಾಂದ್ರೆ ಹುಷಾರ್ ಎಂದು ಬೆದರಿಕೆಯೊಡ್ಡಿದ್ದಾನಂತೆ. ಪಾಪ ಆಯಮ್ಮ ಗಂಡನ ಕಾಟ ತಡೆಯಲಾರದೆ ಸೀದಾ ನಮ್ಮ ಸ್ಟೇಷನ್-ಗೆ ಬಂದು ದೂರು ನೀಡಿದ್ದಾಳೆ' ಎಂದು ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೂರು ಬಂದ ತಕ್ಷಣವೇ ಸಿಸಿಎಸ್-ನ ಮಹಿಳಾ ಪೊಲೀಸರು ಭಾರತೀಯ ದಂಡಸಂಹಿತೆಯ 498- ಎ ಸೆಕ್ಷನ್ ಅನುಸಾರ (ವಿವಾಹಿತ ಮಹಿಳೆಗೆ ಕಿರುಕುಳ ನೀಡುವುದರ ವಿರುದ್ಧ) ಸಿರೀಶನ ವಿರುದ್ಧ ಕೇಸು ಜಡಿದಿದ್ದಾರೆ. ಅವನನ್ನು ಸೋಮವಾರವೇ ವಶಕ್ಕೆ ತೆಗೆದುಕೊಂಡಿದ್ದಾರಾದರೂ ಅಧಿಕೃತವಾಗಿ ಮಂಗಳವಾರ ಬಂಧಿಸುವ ಸಾಧ್ಯತೆ ಇದೆ. ಸಿರೀಶನ ಅಪ್ಪ ಅಮ್ಮನನ್ನೂ ಬಂಧಿಸುವ ಸೂಚನೆಗಳಿವೆ. ಇನ್ನು, ನಟ ಚಿರು ಮಗಳ ದುಃಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಮಾಧ್ಯಮಗಳಿಗೆ ದೊರಕಿಲ್ಲ.
ಚಿರು ಚಿಕ್ಕ ಮಗಳು ಶ್ರೀಜಾ ಅಪ್ಪನ ಮಾತನ್ನು ಗೌರವಿಸದೆ 2007ರ ಅಕ್ಟೋಬರ್-ನಲ್ಲಿ ಪ್ರೇಮ ಕಾವಾಲಿ ಎನ್ನುತ್ತಾ ಪಕ್ಕಾ ಸಿನಿಮಾ ಶೈಲಿಯಲ್ಲಿ ಸಿರೀಶನೊಂದಿಗೆ ಓಡಿಹೋಗಿ ಮದುವೆಯಾಗಿದ್ದಳು. ಅಪ್ಪ ನನ್ನ ಮದುವೆ ಮುರಿಯಲು ಯತ್ನಿಸುತ್ತಿದ್ದಾನೆ. ಆತನದಿಂದ ನಮ್ಮನ್ನು ರಕ್ಷಿಸಿ ಎಂದು ದಿಲ್ಲಿ ಹೈಕೋರ್ಟ್-ಗೆ ಅಲವತ್ತುಕೊಂಡಿದ್ದಳು. ನ್ಯಾಯಾಲಯ ಚಿರುಗೆ ಚುಪ್ ಹೊ ಎಂದು ಗದರಿಸಿತ್ತು. ಶ್ರೀಜಾ ದಂಪತಿಗೆ ಎರಡೂವರೆ ವರ್ಷದ ಮಗಳಿದ್ದಾಳೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications