Get Updates
Get notified of breaking news, exclusive insights, and must-see stories!

ಏಪ್ರಿಲ್ 9ಕ್ಕೆ ಮೂರು ಉಪ ಚುನಾವಣೆ

Bypoll in Karnataka
ಬೆಂಗಳೂರು, ಮಾ. 12: ಆಪರೇಷನ್ ಕಮಲದ ಫಲವಾಗಿ ಕರ್ನಾಟಕ ಮತ್ತೊಮ್ಮೆ ಉಪಚುನಾವಣೆಗೆ ಸಿದ್ಧವಾಗಿದೆ. ಚನ್ನಪಟ್ಟಣ, ಜಗಳೂರು, ಬಂಗಾರಪೇಟೆ ಕ್ಷೇತ್ರಗಳಿಗೆ ಮುಂದಿನ ತಿಂಗಳು 9ರಂದು (ಶನಿವಾರ) ಚುನಾವಣೆ ನಡೆಸಲು ಚುನಾವಣೆ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಆಡಳಿತಾರೂಢ ಬಿಜೆಪಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ ವಿರೋಧ ಪಕ್ಷಗಳಿಗೆ ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚುವ ಸವಾಲಿನದ್ದಾಗಿದೆ.

ಕಳೆದ ಅಕ್ಟೋಬರ್ 14ರಂದು ವಿಧಾನಸಭೆಯಲ್ಲಿ ಯಡಿಯೂರಪ್ಪ ಸರಕಾರ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ನಡೆದ ಆಪರೇಷನ್ ಕಮಲದಿಂದಾಗಿ ಈ ಉಪಚುನಾವಣೆ ಎದುರಾಗಿದೆ. ಜೆಡಿಎಸ್-ನ ಎಂ.ಸಿ. ಅಶ್ವತ್ಥ್ ರಾಜೀನಾಮೆಯಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದ್ದರೆ, ಕಾಂಗ್ರೆಸ್-ನ ಎಸ್.ವಿ. ರಾಮಚಂದ್ರ ರಾಜೀನಾಮೆಯಿಂದಾಗಿ ಜಗಳೂರು ಹಾಗೂ ಎಂ. ನಾರಾಯಣ ಸ್ವಾಮಿ (ಕಾಂಗ್ರೆಸ್) ರಾಜೀನಾಮೆಯಿಂದಾಗಿ ಬಂಗಾರಪೇಟೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

ಉಪಚುನಾವಣೆ ವೇಳಾಪಟ್ಟಿ

ಅಧಿಸೂಚನೆ ಪ್ರಕಟ : ಮಾ. 16
ನಾಮಪತ್ರ ಸಲ್ಲಿಸಲು ಕೊನೆ ದಿನ : ಮಾ. 23
ನಾಮಪತ್ರ ಪರಿಶೀಲನೆ : ಮಾ. 24
ನಾಮಪತ್ರ ವಾಪಸಿಗೆ ಕಡೇ ದಿನ : ಮಾ. 26
ಮತದಾನ : ಏ.9
ಮತ ಎಣಿಕೆ ದಿನಾಂಕ : ಮೇ 13

ಫಲಿತಾಂಶ ವಿಳಂಬ:
ಉಪಚುನಾವಣೆಗೆ ಮತದಾನ ನಡೆಯಲಿರುವುದು ಏಪ್ರಿಲ್ 9ಕ್ಕೆ. ಆದರೆ ಫಲಿತಾಂಶ ಪ್ರಕಟವಾಗುವುದು ಮೇ 13ರಂದು. ಅಂದರೆ ಚುನಾವಣೆ ನಡೆದ 1 ತಿಂಗಳ ಬಳಿಕ ಫಲಿತಾಂಶ. ಏಕೆಂದರೆ, ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟವಾಗಿದೆ. ಅವುಗಳ ಫಲಿತಾಂಶ ಪ್ರಕಟವಾಗುವುದು ಮೇ 13ಕ್ಕೆ. ಹೀಗಾಗಿ ಕರ್ನಾಟಕದಲ್ಲಿ ಮೊದಲೇ ಚುನಾವಣೆ ನಡೆದು ಫಲಿತಾಂಶ ಪ್ರಕಟಿಸಿದರೆ ಅದು ಬೇರೆ ರಾಜ್ಯಗಳ ಮತದಾನದ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ಫಲಿತಾಂಶ ವಿಳಂಬವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+