ಕ್ವಾರ್ಟರ್-ಗೂ ಮುನ್ನ ಭಾರತದ ಪರಾಕ್ರಮವೇನು?
ಬೆಂಗಳೂರು, ಮಾ. 10: ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ವಿಜಯದುಂದುಭಿ ಮೊಳಗಿಸುವ ಮುನ್ನ ಧೋನಿ ಪಡೆ ಎಡವಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಮೂರು ಗೆಲುವು ಒಂದು ಟೈ ಕೊರಳಿಗೆ ಹಾಕಿಕೊಂಡು ಕ್ವಾರ್ಟರ್ ಫೈನಲ್ ಹಂತ ತಲುಪುವ ಭಾರತ ತಂಡದ ಗುರಿಯೇನೋ ಸದ್ಯಕ್ಕೆ ಈಡೇರಿದೆ...ಆದರೆ!? ಮುಂದಿದೆ ಮಾರಿಹಬ್ಬ.
ಹೌದು ತಕ್ಷಣಕ್ಕೆ ಶನಿವಾರ ನಾಗಪುರದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾದೆದುರು ಭಾರತ ತಂಡ ಎಚ್ಚೆತ್ತು ಆಡಬೇಕಿದೆ. ಫಲಿತಾಂಶವು ಭಾರತದ ತಂಡದ ಸದ್ಯದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದರೂ ಅದು ತಂಡದ ಮಾನ ಮತ್ತು ವಿಶ್ವ್ ಕಪ್-ನ ಮುಂದಿನ ಹಂತಗಳ ಮೇಲೆ ಖಂಡಿತ ಪ್ರಭಾವ ಬೀರಲಿದೆ. ಭಾರತ ಇದುವರೆಗೆ ಅಜೇಯವಾಗುಳಿದಿದೆ. ಓಕೆ ಫೈನ್! ಆದರೆ ಆ ಗೆಲುವುಗಳು ತಂಡದ ಖ್ಯಾತಿಗೆ ತಕ್ಕಂತೆ ಇರಲಿಲ್ಲ ಎಂಬುದೇ ಚಿಂತನಾರ್ಹ. ಕಪ್ ಗೆಲ್ಲುವ ಫೇವರೆಟ್ ತಂಡ ಬೇರೆ ತಂಡಗಳಲ್ಲಿ ಈಗಾಗಲೇ ದಿಗಿಲುಹುಟ್ಟಿಸುವಂತೆ ಆಡಬೇಕಿತ್ತು. ಅದಕ್ಕೇ ಹೇಳಿದ್ದು ಭಾರತ ತಂಡ ಇನ್ನೂ ಉತ್ತುಂಗ ತಲುಪಬೇಕಿದೆ.
ವಿಶ್ವಕಪ್ : ಅಭ್ಯಾಸ ಪಂದ್ಯಗಳ ಫಲಿತಾಂಶ ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್
ಬುಧವಾರ ನೆದರ್-ಲ್ಯಾಂಡ್ ವಿರುದ್ಧದ ಪಂದ್ಯವನ್ನೇ ಗಮನಿಸಿ. ಅದಕ್ಕೂ ಮುನ್ನ, ಬ್ಯಾಟ್ಸ್ ಮನ್ ಗಳು ಅದ್ಭುತ ಫಾರಂನಲ್ಲಿದ್ದಾರೆ. ಅವರೇದೇನೂ ಚಿಂತೆಯಿಲ್ಲ. ಆದರೆ ಬೌಲರ್-ಗಳದ್ದೇ ಯೋಚನೆ ಎಂದು ತಂಡದ ನಾಯಕ ಎಂ.ಎಸ್. ಧೋನಿ ಗೋಳಾಡಿದ್ದರು. ಸರಿ, ನಮ್ಮ ನಾಯಕನನ್ನು ಯಾಕೆ ನಿರಾಶೆಪಡಿಸಬೇಕು ಎಂದು ಬೌಲರ್-ಗಳು ಒಂದು ಕೈ ನೋಡಿಯೇ ಬಿಟ್ಟರು. ಅದರಲ್ಲೂ ಸ್ಪಿನ್ನರ್-ಗಳು ತಮ್ಮ ಲಯ ಕಂಡುಕೊಂಡರು. ಆದರೆ ಈ ಬಾರಿ ಬ್ಯಾಟ್ಸ್ ಮನ್-ಗಳು ತಂಡಕ್ಕೆ ಕೈಕೊಟ್ಟರು. ಫೀಲ್ಡಿಂಗ್? ಬಹುಶಃ ಭಾರತಕ್ಕೆ ಅದು ಎಂದಿಗೂ ಸಮಸ್ಯೆಯೇ. ಪರಿಣಾಮ ಆಯಾಸ ಗೆಲುವು. ಸೆಹವಾಗ್ ತಮ್ಮ ಎಂದಿನ ಆಟ ಆಡುತ್ತಿದ್ದಾರೆ. ಆದರೆ ವಿಶ್ವಕಪ್-ನಲ್ಲಿ ಅದೂ 300 ಪ್ಲಸ್ ಚೇಸ್ ಮಾಡುವಾಗ ಆತ ಸುಧಾರಿಸಿಕೊಳ್ಳಲೇಬೇಕು.
ಇದೆಲ್ಲ ಇದ್ದಿದ್ದೇ. ಅವ ಹಂಗ್ ಆಡ್ಲಿಲ್ಲ. ಇವ ಹಿಂಗೆ ಬೌಲ್ ಮಾಡ್ಲಿಲ್ಲ ಎಂಬುದೆಲ್ಲ ಸಾಮಾನ್ಯವೇ ಆದರೂ ತಂಡದ ಪ್ರದರ್ಶನ ಸುಧಾರಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದ ಹೊರಬರಲು ತಂಡಕ್ಕೆ ದೊರೆಯಲಿರುವ ಅತ್ಯುತ್ತಮ ಅವಕಾಶ ಎಂದರೆ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ. ತಂಡದ ನಿಜವಾದ ಬಂಡವಾಳ ನಾಗಪುರ ಬಯಲಿನಲ್ಲಿ ಬಟಾಬಯಲಾಗಲಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications