ಚಿರತೆ ಅಪಘಾತದಿಂದ ಸತ್ತಿಲ್ಲ; ಹೊಡೆದು ಸಾಯಿಸಲಾಗಿದೆ
ಬೆಂಗಳೂರು, ಮಾ. 8: ಹೊರವಲಯದ ನೈಸ್ ರಸ್ತೆಯಲ್ಲಿ ಚಿರತೆ ಸಾವಿಗೀಡಾಗಿರುವುದು ಅಪಘಾತದಿಂದಲ್ಲ. ಅದೊಂದು ವ್ಯವಸ್ಥಿತ ಹತ್ಯೆ ಎನ್ನಲಾಗಿದೆ. ನೈಸ್ ರಸ್ತೆ ಬಳಿ ಚಿರತೆ ಸತ್ತುಬಿದ್ದಿರುವುದು ಕಳೆದ 10 ದಿನಗಳಲ್ಲಿ ಇದು ಎರಡನೇ ಬಾರಿ. ಬನ್ನೇರುಘಟ್ಟ ಮುಖ್ಯರಸ್ತೆಯ ನೈಸ್ ರಸ್ತೆ ಬಳಿ ಭಾನುವಾರ ರಾತ್ರಿ ದೊರೆತ ಒಂದು ವರ್ಷದ ಹೆಣ್ಣು ಚಿರತೆಯ ಶವಪರೀಕ್ಷೆ ನಡೆಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯ ಡಾ. ಚಿಟ್ಟಿಯಪ್ಪ ಈ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಚಿರತೆ ಅಪಘಾತದ ಗಾಯಗಳಿಂದ ಮೃತಪಟ್ಟಿಲ್ಲ. ಬಲವಾದ ಪೆಟ್ಟುಗಳನ್ನು ಹೊಡೆದು ಅದನ್ನು ಸಾಯಿಸಲಾಗಿದೆ. ಅದಕ್ಕೆ ಹಣೆಯಲ್ಲಿ ಗಾಯವಾಗಿದೆ. ಅದಕ್ಕಿಂತ ಮಿಗಿಲಾಗಿ ಚಿರತೆಯ ಬಲ ಮುಂಗಾಲಿನ ಮೂಳೆ ಮುರಿದಿದೆ. ಅಲ್ಲದೆ ಶ್ವಾಸಕೋಶಕ್ಕೂ ಪೆಟ್ಟಾಗಿದೆ. ಯಾರೋ ಅಕ್ರಮವಾಗಿ ಸಾಕಿಕೊಂಡಿರಬೇಕು. ಚಿರತೆಯ ಪುಂಡಾಟಿಕೆ ನಿಯಂತ್ರಿಸಲು ಹೊಡೆದಾಗ ಬಲವಾದ ಪೆಟ್ಟು ಬಿದ್ದು ಅಸುನೀಗಿರಬಹುದು ಎಂದು ವೈದ್ಯ ಚಿಟ್ಟಿಯಪ್ಪ ವಿವರಿಸಿದ್ದಾರೆ. ಈ ಮಧ್ಯೆ, ಚಿರತೆಯ ಕೆಲವು ಅಂಗಾಂಗಳನ್ನು ಹೆಬ್ಬಾಳದ ಪಶುವೈದ್ಯ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು ವರದಿ ಇನ್ನೂ ಬಂದಿಲ್ಲ.

ಚಿರತೆ ಅಪಘಾತದಿಂದ ಸತ್ತಿಲ್ಲ. ಒಂದಷ್ಟು ಜನ ಸೇರಿಕೊಂಡು ಹತ್ಯೆ ಮಾಡಿಲ್ಲ. ಆದರೂ ಚಿರತೆ ಸಾವನ್ನಪ್ಪಿದೆ. ಆದ್ದರಿಂದ ಯಾರಾದರೂ ಚಿರತೆಯನ್ನು ಸಾಕುತ್ತಿದ್ದರೇ ಎಂಬ ಅನುಮಾನ ಮೂಡಿದೆ. ಒಂದು ವರ್ಷ ತುಂಬಿದ ಚಿರತೆಯ ಪುಂಡಾಟಿಕೆ ಸಹಜ. ಅದನ್ನು ನಿಯಂತ್ರಸಿಲು ಹೋದಾಗಲು ಹಣೆ ಮೇಲೆ ಹೊಡೆದ ಪೆಟ್ಟಿಗೆ ಸಾವನ್ನಪ್ಪಿರಬೇಕು ಎಂಬ ಸಂಶಯ ಮೂಡಿದೆ. ಕೆಲವೇ ದಿನಗಳಲ್ಲಿ ಎರಡನೇ ಬಾರಿಗೆ ಎರಡು ಚಿರತೆಗಳು ಈ ರೀತಿ ಮೃತಪಟ್ಟಿದ್ದರೂ ಅರಣ್ಯ ಸಂರಕ್ಷಣಾಧಿಕಾರಿಗಳು ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications