ನಮ್ಮ ಹೇಮಾಮಾಲಿನಿ ದೆಹಲಿ ವಿಮಾನಯಾನ ಸುಗಮ

ಸುಪ್ರೀಂಕೋರ್ಟ್ನ 'ತಡೆ'ಯಾಜ್ಞೆಯಿಂದ ಆಡಳಿತಾರೂಢ ಬಿಜೆಪಿಗೆ ಆನೆ ಬಲ ಬಂದಿದೆ. ಅನರ್ಹ ಶಾಸಕರ ಪೋಷಕರಾದ ಜೆಡಿಎಸ್ ಮತ್ತು ಕಾಂಗ್ರೆಸ್ ತೀರ್ಪಿನಿಂದ ಮುಖಭಂಗಕ್ಕೊಳಗಾಗಿವೆ. ಇದರ ಜತೆಗೆ ಬಿಜೆಪಿಯು ಆಪರೇಶನ್ ಕಮಲಕ್ಕೆ ಕೈಹಾಕಿರುವುದು ಪ್ರತಿಪಕ್ಷಗಳ ನಿದ್ದೆಗೆಡಿಸಿವೆ. ಆದ್ದರಿಂದ ಗುರುವಾರ ನಡೆಯಲಿರುವ ಮತದಾನ ತೀವ್ರ ಕುತೂಹಲ ಕೆರಳಿಸಿದೆ.
ಸರಕಾರದ ವಿರುದ್ಧ ಬಂಡೆದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಅಕ್ಟೋಬರ್ನಲ್ಲಿ ಸ್ಪೀಕರ್ ಬೋಪಯ್ಯ ಅವರು ಐವರು ಪಕ್ಷೇತರ ಶಾಸಕರು ಮತ್ತು 11 ಮಂದಿ ಆಡಳಿತಾರೂಢ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ, ಪಕ್ಷೇತರರು ಹೈಕೋರ್ಟ್ ಮೊರೆಹೋಗಿದ್ದರು. ಫೆ. 14ರಂದು ತೀರ್ಪು ಪ್ರಕಟಿಸಿದ ಹೈಕೋರ್ಟ್, ಸ್ಪೀಕರ್ ಆದೇಶವನ್ನು ಎತ್ತಿಹಿಡಿದಿತ್ತು. ಇದನ್ನು ಪಕ್ಷೇತರರು ಈಗ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಇನ್ನು, 11 ಬಿಜೆಪಿ ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪಿನ ವಿರುದ್ಧದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಈಗಾಗಲೇ ಮುಗಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.












Click it and Unblock the Notifications