ತಿಪ್ಪೆಗುಂಡಿಯಾದ ಚಿನ್ನಸ್ವಾಮಿ ಸ್ಟೇಡಿಯಂ
ಬೆಂಗಳೂರು, ಫೆ. 28 : ನಿನ್ನೆ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಭಯಂಕರ ರೋಚಕವಾಗಿತ್ತು. ಮನೆಯಲ್ಲಿ, ಹೋಟೆಲುಗಳಲ್ಲಿ ಕುಳಿತು ಕಾಫಿನೋ, ಬೀರೋ ಹೀರುತ್ತ ಕ್ರಿಕೆಟ್ ನೋಡಿದವರಿಗಿಂತ ಕ್ರೀಡಾಂಗಣಕ್ಕೆ ಹೋಗಿ ಆಟ ನೋಡಿದವರೇ ಭಾಗ್ಯಶಾಲಿಗಳು. ಟಿಕೆಟ್ ಪಡೆಯೋಕೆ ಒಂದೆರಡು ಲಾಠಿ ಓಟು ತಿಂದು, ನೂಕುನುಗ್ಗಲುಗಳಲ್ಲಿ ಹಗ್ಗಜಗ್ಗಾಡಿ ಅಂಗಿ ಹರಿದು ಕೊಂಡರೂ ಪರವಾಗಿಲ್ಲ.
ಕೋಲ್ಕತ್ತದಿಂದ ಎತ್ತಂಗಡಿಯಾಗಿ ಅನಾಯಾಸವಾಗಿ ಬೆಂಗಳೂರಿಗೆ ಹಾರಿದ ಗ್ರೂಪ್ ಬಿ ಪಂದ್ಯದ ಚೆಂಡು ಬೆಂಗಳೂರಿಗೆ ಹಾರಿದುದು ಕರ್ನಾಟಕ ಕ್ರಿಕೆಟ್ ಅಭಿಮಾನಿಗಳಿಗೆ ನಿಜಕ್ಕೂ ಬೋನಸ್ ಮಜಾನೇ ಸರಿ. ಕ್ರಿಕೆಟ್ ಮಾರಮ್ಮನ ಜಾತ್ರೆಯಲ್ಲಿ ನೀಲಿ ಅಂಗಿ ಹಾಕಿಕೊಂಡು ಸ್ಟೇಡಿಯಂನಲ್ಲಿ ಚೀರಿಕೊಂಡವನೇ ಅರ್ಧ ಜಾಣ.
ನೀವು ನಿಜಕ್ಕೂ ಪೂರಾ ಜಾಣರಾಗಿದ್ದರೆ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೆ ಹೋಗುವುದಿಲ್ಲ. ಬರೀ ಗಲೀಜು. ಸ್ಟೇಡಿಯಂನಲ್ಲಿ ಎಲ್ಲೆಂದರಲ್ಲಿ ಬಳಸಿ ಬಿಸಾಕಿದ ಪ್ಲಾಸ್ಟಿಕ್ಕು, ಶೌಚಾಲಯಗಳಲ್ಲಿ (He and She) ಧೂಮಪಾನಿಗಳ ಕಾಟ, ಊಟದ ಪೊಟ್ಟಣಗಳ ಚಿನ್ನಾರಿ ಕಾಗದ, ಖಾಲಿ ಪೆಪ್ಸಿ ಕೋಕ್ ಬಾಟಲುಗಳ ಸ್ವರ್ಗವಾಗಿತ್ತು ನಮ್ಮ ಬೆಂಗಳೂರು. [ಗ್ಯಾಲರಿ ನೋಡಿರಿ]
ಕ್ರಿಕೆಟ್ ಆಟದ ವಿಶ್ವಾಸಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ESPN ಚಾನಲ್ಲಿನಲ್ಲಿ ಒಂದು ಉಚಿತ ಜಾಹಿರಾತು ಓಡುತ್ತಿದೆ. ಮ್ಯಾಚ್ ಫಿಕ್ಸಿಂಗ್, ಉದ್ದೀಪನ ಔಷಧಿ ಬಳಕೆ ಮತ್ತು ಬೆಟ್ಟಿಂಗ್ ಮುಂತಾದ ಹಾವಳಿಯಿಂದ ಕ್ರಿಕೆಟ್ ಪಂದ್ಯವನ್ನು ರಕ್ಷಿಸಬೇಕೆನ್ನುವುದು ಆ ಜಾಹಿರಾತಿನ (Keep Cricket Clean) ಸಂದೇಶ. ಸಾಮಾಜಿಕ ತಿಳಿವಳಿಕೆಗೆ ಮುಡಿಪಾದ ಈ ಜಾಹಿರಾತಿಗೆ ಸ್ವಾಗತ. ಇದರ ಜತೆಗೆ keep your stadiums clean ಎಂಬೋ ಜಾಹಿರಾತನ್ನು ಅಳವಡಿಸುವುದು ಅಗತ್ಯ.
ಬೆಂಗಳೂರಿನಲ್ಲಿ ಇನ್ನೂ ನಾಲಕ್ಕು ಪಂದ್ಯಗಳು ನಡೆಯುವುದು ಬಾಕಿ ಇದೆ. ಆ ಪಂದ್ಯಗಳ ಸಮಯದಲ್ಲಿ ಶುಚಿ ಕಾಪಾಡಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಈ ಮೂಲಕ ಜಾವಗಲ್ ಶ್ರೀನಾಥ್ ಮತ್ತು ಅನಿಲ್ ಕುಂಬ್ಳೆಗೆ ತಿಳಿಯಪಡಿಸಲಾಗಿದೆ. ಜತೆಗೆ, ಟಿಕೆಟ್ ವಿತರಿಸುವ ಕ್ರಮದಲ್ಲಿ ಜಾಗರೂಕತೆಯಿಂದ ವ್ಯವಸ್ಥೆ ಮಾಡದಿದ್ದರೆ ಅವರಿಬ್ಬರೂ ಹೀನಾ ಮಾನಾ ಬೈಯಿಸಿಕೊಳ್ಳುವುದು ಖಂಡಿತಾ ಎಂದು ಎಚ್ಚರಿಸಲಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications