ಮೈಸೂರು ಚಾಮುಂಡಿಗೆ ಶರಣೆಂದ ಜಯಲಲಿತಾ

ಬೆಳಗ್ಗೆ 11:45ಕ್ಕೆ ವಿಶೇಷ ಹೆಲಿಕಾಪ್ಟರ್ನಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜಯಲಲಿತಾ ನೇರ ಚಾಮುಂಡಿ ಬೆಟ್ಟಕ್ಕೆ ತೆರಳಿ ಸುಮಾರು 20 ನಿಮಿಷಗಳ ಕಾಲ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಝಡ್ ಗ್ರೂಪ್ ಭದ್ರತೆಯೊಂದಿಗೆ ಆಗಮಿಸಿದ ಜಯಲಲಿತಾ ನಂತರ ಬುಲೆಟ್ ಪ್ರೂಫ್ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಪಯಣ ಬೆಳೆಸಿದರು.
ಈ ನಡುವೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೆಚ್ಚು ಮಾತನಾಡಲು ನಿರಾಕರಿಸಿದ ಜಯಲಲಿತಾ, ತಮಿಳುನಾಡು, ಕರ್ನಾಟಕ ನೆರೆ ರಾಜ್ಯಗಳಾಗಿದ್ದು ಇಲ್ಲಿನ ಜನರು ಶಾಂತಿ, ಸ್ನೇಹದಿಂದ ಬಾಳ್ವೆ ನಡೆಸುತ್ತಿದ್ದಾರೆ ಎಂದಷ್ಟೇ ಹೇಳಿ ನಿರ್ಗಮಿಸಿದರು. ಚಾಮುಂಡಿ ಬೆಟ್ಟದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಕೋಮಲವಳ್ಳಿಯಲ್ಲಿ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜೆ ಜಯಲಲಿತಾ ಜನನ. ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ವಿದ್ಯಾಭ್ಯಾಸ. ನಂತರ ತಾಯಿ ಸಂಧ್ಯಾ ಜೊತೆ ತಮಿಳು ನಾಡಿಗೆ ವಲಸೆ. ಬಹು ಭಾಷಾ ನಟಿ, ರಾಜಕಾರಣಿ, ಜೆ ಜಯಲಲಿತಾ 1991-96ರಲ್ಲಿ ಎಐಎಡಿಎಂಕೆ ಪಕ್ಷದ ಸಾರಥ್ಯದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಕಾರ್ಯ ನಿರ್ವಹಿಸಿದ್ದಾರೆ.












Click it and Unblock the Notifications