ತೆಂಗಿನಕಾಯಿ ತುಟ್ಟಿ: ಒಂದು ಕಾಯಿಗೆ 20 ರು!

ಕೆಲ ತಿಂಗಳ ಹಿಂದೆ ತೆಂಗಿನಕಾಯಿ ದರ ತುಂಬಾನೇ ಕಡಿಮೆಯಿತ್ತು. ದೊಡ್ಡ ಗಾತ್ರದ ತೆಂಗಿನಕಾಯಿ 10 ರುಪಾಯಿಗೆ ಮಾರಾಟವಾದರೆ ಅದೇ ಉತ್ತಮ ಬೆಲೆಯಾಗುತ್ತಿತ್ತು. ಆದರೆ ಈಗ ತೆಂಗಿನ ಕಾಯಿಯೊಂದರ ಬೆಲೆ ಬರೋಬ್ಬರಿ 20 ರು. ತೆಂಗಿನ ಇತಿಹಾಸದಲ್ಲಿ ಇದು ದಾಖಲೆಯ ಬೆಲೆ. ಹಣ ಕೊಟ್ಟರೂ ಕಾಯಿಯ ಗಾತ್ರ ಅಷ್ಟಕ್ಕಷ್ಟೇ. 8 ರು. ಇದ್ದ ಕಾಯಿ ಈಗ 18 ರು. ಆಗಿದೆ. ಅದಕ್ಕಿಂತ ಸ್ವಲ್ಪ ಸಣ್ಣ ಕಾಯಿ 6 ರು. ಇದ್ದಿದ್ದು ಈಗ ೧೨ ರು. ಆಗಿದೆ. 4-5 ರು. ಇದ್ದ ಸಣ್ಣ ಕಾಯಿ ಈಗ 10-11 ಆಗಿದೆ.
ಹಲವು ತಿಂಗಳಿಂದ ತೆಂಗಿನ ಕಾಯಿ ಬೆಲೆ ತೀವ್ರವಾಗಿ ಕುಸಿದಿದ್ದರಿಂದ ರೈತರ ಪ್ರತಿಭಟನೆಗೆ ಮಣಿದ ಸರಕಾರ ಒಂದು ಟನ್ ತೆಂಗಿನ ಕಾಯಿಗೆ 12 ಸಾವಿರ ರು. ನಂತೆ ಬೆಂಬಲ ಬೆಲೆ ನೀಡಿ ಖರೀದಿಸಿತ್ತು. ಕೇರಳದಿಂದ ವಿಪರೀತ ಬೇಡಿಕೆಯೂ ಬರತೊಡಗಿತು. ಇದರಿಂದ ಸ್ಥಳೀಯ ಮಾರುಕಟ್ಟೆಗಳು ಕಾಯಿಗಳಿಲ್ಲದೆ ಭಣಗುಡತೊಡಗಿದವು.
ಮತ್ತೊಂದು ಕಾರಣ ತೆಂಗಿನ ಮರಗಳೂ ದಿನೇ ದಿನೆ ಮಾಯವಾಗುತ್ತಿವೆ. ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ನುಸಿರೋಗ ಹಾವಳಿ. ಇನ್ನೂ ಹಲವುರೋಗಗಳು ತೆಂಗಿಗೆ ಅಮರಿಕೊಂಡಿದ್ದು, ಅನಾರೋಗ್ಯ ಮರಗಳು ಆಯಸ್ಸು ಕಳೆದುಕೊಳ್ಳುತ್ತಿವೆ. ಕೆಲ ಮರಗಳು ಪಳೆಯುಳಿಕೆಯಂತೆ ನಿಂತಿವೆ. ಫಲ ಬಿಡುವ ಶಕ್ತಿಯನ್ನು ಕಳೆದುಕೊಂಡ ತೆಂಗಿನ ಮರಗಳಿಗೆ ರೈತ ನಿರ್ದಾಕ್ಷಿಣ್ಯವಾಗಿ ಕೊಡಲಿಪೆಟ್ಟುನೀಡುತ್ತಿದ್ದಾನೆ. ಚಾಮರಾಜನಗರ, ತಿಪಟೂರುಗಳಲ್ಲಿ ತೆಂಗಿನ ಮರಗಳು ಸಾಲುಸಾಲಾಗಿ ಧರೆಗುರುಳುತ್ತಿವೆ.
ಬೇಸಿಗೆಯ ಧಗೆ ತಣಿಸಲು ಈ ಬಾರಿ ಎಳೆನೀರಿಗೂ ಕೊರತೆಯಾಗಲಿದೆ. ಬೇಸಿಗೆ ಈ ಬಾರಿ ತೀವ್ರವಾಗುವ ಮುನ್ಸೂಚನೆಗಳಿವೆ. ಬಿಡುವ ಅಷ್ಟೋ ಇಷ್ಟೋ ಕಾಯಿಗಳು ಎಳೆನೀರಿಗೆ ಸಮರ್ಪಣೆಯಾಗಲಿದೆ. ಆದ್ದರಿಂದ ಇನ್ನು ಎರಡು ಮೂರು ತಿಂಗಳ ಕಾಲ ತೆಂಗಿನ ಕಾಯಿ ಮಾರುಕಟ್ಟೆಗೆ ಬರುವುದು ವಿರಳ. ಅಲ್ಲಿಗೆ ತೆಂಗಿನ ಕಾಯಿ ಮತ್ತಷ್ಟು ತುಟ್ಟಿಯಾಗುವುದು ಖಚಿತ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications