ತೆಂಗಿನಕಾಯಿ ತುಟ್ಟಿ: ಒಂದು ಕಾಯಿಗೆ 20 ರು!

ಕೆಲ ತಿಂಗಳ ಹಿಂದೆ ತೆಂಗಿನಕಾಯಿ ದರ ತುಂಬಾನೇ ಕಡಿಮೆಯಿತ್ತು. ದೊಡ್ಡ ಗಾತ್ರದ ತೆಂಗಿನಕಾಯಿ 10 ರುಪಾಯಿಗೆ ಮಾರಾಟವಾದರೆ ಅದೇ ಉತ್ತಮ ಬೆಲೆಯಾಗುತ್ತಿತ್ತು. ಆದರೆ ಈಗ ತೆಂಗಿನ ಕಾಯಿಯೊಂದರ ಬೆಲೆ ಬರೋಬ್ಬರಿ 20 ರು. ತೆಂಗಿನ ಇತಿಹಾಸದಲ್ಲಿ ಇದು ದಾಖಲೆಯ ಬೆಲೆ. ಹಣ ಕೊಟ್ಟರೂ ಕಾಯಿಯ ಗಾತ್ರ ಅಷ್ಟಕ್ಕಷ್ಟೇ. 8 ರು. ಇದ್ದ ಕಾಯಿ ಈಗ 18 ರು. ಆಗಿದೆ. ಅದಕ್ಕಿಂತ ಸ್ವಲ್ಪ ಸಣ್ಣ ಕಾಯಿ 6 ರು. ಇದ್ದಿದ್ದು ಈಗ ೧೨ ರು. ಆಗಿದೆ. 4-5 ರು. ಇದ್ದ ಸಣ್ಣ ಕಾಯಿ ಈಗ 10-11 ಆಗಿದೆ.
ಹಲವು ತಿಂಗಳಿಂದ ತೆಂಗಿನ ಕಾಯಿ ಬೆಲೆ ತೀವ್ರವಾಗಿ ಕುಸಿದಿದ್ದರಿಂದ ರೈತರ ಪ್ರತಿಭಟನೆಗೆ ಮಣಿದ ಸರಕಾರ ಒಂದು ಟನ್ ತೆಂಗಿನ ಕಾಯಿಗೆ 12 ಸಾವಿರ ರು. ನಂತೆ ಬೆಂಬಲ ಬೆಲೆ ನೀಡಿ ಖರೀದಿಸಿತ್ತು. ಕೇರಳದಿಂದ ವಿಪರೀತ ಬೇಡಿಕೆಯೂ ಬರತೊಡಗಿತು. ಇದರಿಂದ ಸ್ಥಳೀಯ ಮಾರುಕಟ್ಟೆಗಳು ಕಾಯಿಗಳಿಲ್ಲದೆ ಭಣಗುಡತೊಡಗಿದವು.
ಮತ್ತೊಂದು ಕಾರಣ ತೆಂಗಿನ ಮರಗಳೂ ದಿನೇ ದಿನೆ ಮಾಯವಾಗುತ್ತಿವೆ. ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ನುಸಿರೋಗ ಹಾವಳಿ. ಇನ್ನೂ ಹಲವುರೋಗಗಳು ತೆಂಗಿಗೆ ಅಮರಿಕೊಂಡಿದ್ದು, ಅನಾರೋಗ್ಯ ಮರಗಳು ಆಯಸ್ಸು ಕಳೆದುಕೊಳ್ಳುತ್ತಿವೆ. ಕೆಲ ಮರಗಳು ಪಳೆಯುಳಿಕೆಯಂತೆ ನಿಂತಿವೆ. ಫಲ ಬಿಡುವ ಶಕ್ತಿಯನ್ನು ಕಳೆದುಕೊಂಡ ತೆಂಗಿನ ಮರಗಳಿಗೆ ರೈತ ನಿರ್ದಾಕ್ಷಿಣ್ಯವಾಗಿ ಕೊಡಲಿಪೆಟ್ಟುನೀಡುತ್ತಿದ್ದಾನೆ. ಚಾಮರಾಜನಗರ, ತಿಪಟೂರುಗಳಲ್ಲಿ ತೆಂಗಿನ ಮರಗಳು ಸಾಲುಸಾಲಾಗಿ ಧರೆಗುರುಳುತ್ತಿವೆ.
ಬೇಸಿಗೆಯ ಧಗೆ ತಣಿಸಲು ಈ ಬಾರಿ ಎಳೆನೀರಿಗೂ ಕೊರತೆಯಾಗಲಿದೆ. ಬೇಸಿಗೆ ಈ ಬಾರಿ ತೀವ್ರವಾಗುವ ಮುನ್ಸೂಚನೆಗಳಿವೆ. ಬಿಡುವ ಅಷ್ಟೋ ಇಷ್ಟೋ ಕಾಯಿಗಳು ಎಳೆನೀರಿಗೆ ಸಮರ್ಪಣೆಯಾಗಲಿದೆ. ಆದ್ದರಿಂದ ಇನ್ನು ಎರಡು ಮೂರು ತಿಂಗಳ ಕಾಲ ತೆಂಗಿನ ಕಾಯಿ ಮಾರುಕಟ್ಟೆಗೆ ಬರುವುದು ವಿರಳ. ಅಲ್ಲಿಗೆ ತೆಂಗಿನ ಕಾಯಿ ಮತ್ತಷ್ಟು ತುಟ್ಟಿಯಾಗುವುದು ಖಚಿತ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications