ಬಿಜೆಪಿ ಕರ್ನಾಟಕ ಸರ್ಕಾರಕ್ಕೆ ಸಾವಿರದ ಶರಣು

BS Yeddyurappa govt completes 1000 days
ಬೆಂಗಳೂರು, ಫೆ.19: ಭಾನುವಾರದಂದು ಕರ್ನಾಟಕದಲ್ಲಿ ಏಕಕಾಲಕ್ಕೆ ಸಂಭ್ರಮ ಹಾಗೂ ಬಂಡಾಯದ ಬೃಹತ್ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಹಗರಣದಲ್ಲಿ ಮುಳುಗಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ರಣಕಹಳೆ ಮೊಳಗಿಸುತ್ತಿದೆ. ಅರಮನೆ ಮೈದಾನದಲ್ಲಿ ದಕ್ಷಿಣ ಭಾರತದ ಏಕೈಕ ಕೇಸರಿ ಸರ್ಕಾರ ಸಾವಿರ ದಿನಗಳ ಅಧಿಕಾರವಧಿ ಪೂರೈಸಿದ ಶುಭ ಸಂದರ್ಭವನ್ನು ಆಚರಿಸಲು ಐತಿಹಾಸಿಕ ಸಮಾವೇಶಕ್ಕೆ ಸಿದ್ಧತೆ ನಡೆಸಿದೆ.

ನಗರದ ಅರಮನೆ ಮೈದಾನದಲ್ಲಿ ನಡೆಯುವ ಈ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಬಿಜೆಪಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಸಹಕಾರಿ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಸುಮಾರು 2 ಲಕ್ಷಕ್ಕೂ ಅಧಿಕ ಜನ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಊಟ ತಿಂಡಿಗೆ 180 ಕೌಂಟರ್ : ಸಮಾವೇಶದಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಊಟ ಮತ್ತು ತಿಂಡಿ ನೀಡಲು 180 ಕೌಂಟರ್ ಗಳನ್ನು ತೆರೆಯಲಾಗಿದೆ. ಬೆಳಗ್ಗೆ 7 ರಿಂದ ಸುಮಾರು 600 ಕಾರ್ಯಕರ್ತರು ಊಟ, ತಿಂಡಿ ವಿತರಣೆಯಲ್ಲಿ ತೊಡಗಿರುತ್ತಾರೆ.

ಭವ್ಯ ಸ್ವಾಗತ, ಮೆರವಣಿಗೆ: ಜಿಲ್ಲಾವಾರು ದ್ವಾರ ನಿರ್ಮಿಸಲಾಗಿದ್ದು, ಆಯಾ ಜಿಲ್ಲೆಯ ಕಾರ್ಯಕರ್ತರು ಅದೇ ದ್ವಾರಗಳ ಮೂಲಕ ಪ್ರವೇಶಿಸಬೇಕು. ಸಮಾವೇಶಕ್ಕೂ ಮುನ್ನ ರಾಷ್ಟ್ರೀಯ ಅಧ್ಯಕ್ಷರನ್ನು ತೆರೆದ ವಾಹನದಲ್ಲಿ ಕಾರ್ಯಕರ್ತರು ವೇದಿಕೆಗೆ ಕರೆತರಲಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ವಾಹನಗಳಿಗೂ ಹೆಚ್ಚು ವಾಹನಗಳಿಂದ ಬರುವ ಜನರ ವಾಹನಗಳಿಗೆ ಮೈದಾನದಿಂದ 1.5 ಕಿ.ಮೀ ದೂರದಲ್ಲಿ 5 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+