ಸಕಲೇಶಪುರದಲ್ಲಿ ಸಿಗರೇಟ್ ಅಭಾವ, ಜಗಳ
ಅಭಾವ ಸೃಷ್ಟಿಯಾಗಲು ಕಾರಣ : ಪಟ್ಟಣದಲ್ಲಿ ಸಿಗರೇಟ್ ಸಗಟು ವ್ಯಾಪಾರಗಾರರಿಲ್ಲದೇ ಇರುವುದರಿಂದ ಹಾಸನದ ಜೆ.ಸಿ.ಎಂ. ರೀಟೈಲ್ ವಿತರಕರು ಪಟ್ಟಣದಲ್ಲಿ ಸಿಗರೇಟ್ಗಳ ವಿತರಣೆ ಮಾಡುತ್ತಾರೆ. ವಾರಕ್ಕೊಮ್ಮೆ ಪಟ್ಟಣಕ್ಕೆ ಬರುವ ಇವರು ಮುಖ್ಯ ಅಂಗಡಿಗಳಿಗೆ ಸಿಗರೇಟ್ ನೀಡಿ ಹೋಗುತ್ತಿದ್ದಾರೆ. ಈ ಅಂಗಡಿಗಳಿಂದ ಚಿಲ್ಲರೆ ವ್ಯಾಪಾರಿಗಳು ಖರೀದಿಸಲು ಹೋಗುವಾಗ ಒಂದು ಪ್ಯಾಕ್ ಸಿಗರೇಟಿಗೆ ಮುಖ ಬೆಲೆಗಿಂತ 5 ರೂ. ಗಳನ್ನು ಹೆಚ್ಚು ಪಡೆಯುತ್ತಿದ್ದಾರೆ. ಇದು ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ.
ಸಿಗರೇಟಿಗಾಗಿ ಜಗಳ: ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸಿಗರೇಟಿನ ಬೆಲೆ ವಿಚಾರಕ್ಕಾಗಿ ಪರಸ್ಪರ ಹೊಡೆದಾಡಿದ ಘಟನೆ ಮಂಗಳವಾರ ನಡೆದಿದೆ. ಹಾಸನ ಮೂಲದ ವ್ಯಕ್ತಿಯೊಬ್ಬರು ಹಳೇ ಬಸ್ ನಿಲ್ದಾಣದ ಜೆ.ಕೆ. ಸ್ಟೋರ್ ಎಂಬ ಅಂಗಡಿಯಲ್ಲಿ ಸಿಗರೇಟ್ ಖರೀದಿಸಿದ ಸಂದರ್ಭದಲ್ಲಿ ಕಿಂಗ್ ಲೈಟ್ ಸಿಗರೇಟಿನ ಬೆಲೆ ಏಳು ರೂ. ಎಂದಿದ್ದರಿಂದ ಅಂಗಡಿ ಮಾಲೀಕ ನೊಂದಿಗೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು. ಈ ಗಲಾಟೆಯಲ್ಲಿ ಕೊನೆಗೆ ಆತ ಸಿಗರೇಟು ಸೇದಿದನೋ ಬಿಟ್ಟನೋ ತಿಳಿಯಲಿಲ್ಲ.