ಶಾಶ್ವತ ನೀರಾವರಿ: ಚಿಕ್ಕಬಳ್ಳಾಪುರ ಬಂದ್ ಶಾಂತಿಯುತ

ಬರಡು ಜಿಲ್ಲೆಯ ಜನ ಒಂದು ದಶಕದಿಂದ ಈ ಹೋರಾಟ ನಡೆಸುತ್ತಿದ್ದಾರೆ. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಡಾ. ಪರಮಶಿವಯ್ಯ ವರದಿಯನ್ವಯ ಮಳೆಗಾಲದಲ್ಲಿ ಸಮುದ್ರ ಸೇರುವ ನೇತ್ರಾವತಿ ನದಿ ನೀರನ್ನುಬಯಲು ಸೀಮೆ ಜಿಲ್ಲೆಗೆ ಹರಿಸುವ ಯೋಜನೆಯ ಸಮೀಕ್ಷೆಗೆ 2.5 ಕೋಟಿ ರು. ನೀಡಿದ್ದರು. ನಂತರ ಅಧಿಕಾರಕ್ಕೆ ಬಂದ ಸರಕಾರಗಳು ಯೋಜನೆಯ ಅನುಷ್ಠಾನಕ್ಕೆ ಆಸಕ್ತಿ ತೋರಲಿಲ್ಲ.
ತಣ್ಣಗಾಗಿದ್ದ ಹೋರಾಟ ಈ ಮತ್ತೊಮ್ಮೆ ಶಕ್ತಿ ಪಡೆದುಕೊಂಡಿದೆ. ಸಾರ್ವಜನಿಕರೂ ಭಾರಿ ಪ್ರಮಾಣದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೇಸಿಗೆ ಸಮೀಪಿಸುತ್ತಿದ್ದಂತೆ ಇತ್ತೀಚೆಗೆ ವಿವಿಧ ತಾಲೂಕುಗಳಲ್ಲಿ ನಾನಾ ಸಂಘಟನೆಗಳು ಹೋರಾಟ ನಡೆಸಿದ್ದವು. ಈಗ ಬಂದ್ ಮಾಡಿ ಮತ್ತೊಮ್ಮೆ ಒತ್ತಡ ಹೇರಲು ಮುಂದಾಗಿದೆ.












Click it and Unblock the Notifications