ಅಶೋಕ್ ಖೇಣಿಯಿಂದ ಹೊಸ ಪಕ್ಷ ಉದಯ?

Ashok Kheny
ಗಂಗಾವತಿ, ಫೆ. 10: ಭ್ರಷ್ಟಾಚಾರ, ವಂಚನೆ, ಮೋಸ, ಸುಳ್ಳು, ಹಗಲು ದರೋಡೆಯಂತಹ ಕೃತ್ಯಗಳು ಹೆಚ್ಚಾಗಿದ್ದು, ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ರಾವಣ ಆಡಳಿತ ನಡೆಸುತ್ತಿದ್ದಾನೆ. ಜನರ ಕಷ್ಟಗಳನ್ನು ನೀಗಿಸಲು ಹೊಸ ಪಕ್ಷದ ಅಗತ್ಯವಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ನೂತನ ಪಕ್ಷವೊಂದನ್ನು ರಚನೆ ಮಾಡುವುದಾಗಿ ನೈಸ್(NICE) ಕಂಪೆನಿ ಮುಖ್ಯಸ್ಥ ಅಶೋಕ್ ಖೇಣಿ ಹೇಳಿದ್ದಾರೆ. ನಗರದಲ್ಲಿ ಜರಗಿದ ಮಾಜಿ ಸಚಿವ ಅನ್ಸಾರಿ ಹಾಗೂ ಶಾಸಕ ಪರಣ್ಣನವರ ಪುತ್ರಿಯರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಎಲ್ಲ ಪಕ್ಷದವರೂ ಭೂ ಕಬಳಿಕೆಯಲ್ಲಿ ತೊಡಗಿದ್ದು, ಹಣ ಗಳಿಕೆಗಾಗಿಯೇ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು, ಜನತೆಯ ಹಿತ ಕಾಪಾಡುವುದಕ್ಕಲ್ಲ. ಬೇನಾಮಿ ಹೆಸರಲ್ಲಿ ಭೂ ಕಬಳಿಕೆ ರಾಜಕಾರಣಿಗಳ ಕೆಲಸವಾಗಿದೆ. ಭೂಸ್ವಾಧೀನ ಮಾಡಿ ಬೇನಾಮಿ ಹೆಸರಲ್ಲಿ ಭೂ ಕಬಳಿಕೆ ಮಾಡಿರುವ ಬಗ್ಗೆ ತನಿಖೆಯಾಗಬೇಕು. ರಾಜ್ಯದಲ್ಲಿ ಆಡಳಿತ ನಡೆಸಿದ ಮೂರೂ ಪಕ್ಷದವರು ಕಳ್ಳರೇ ಎಂದು ಖೇಣಿ ಅಪಹಾಸ್ಯ ಮಾಡಿದರು.

ಗ್ರಾಮೀಣ ಅಭಿವೃದ್ಧಿ ಮಂತ್ರ: ನೂತನ ಪಕ್ಷ ರಚಿಸಿದ ನಂತರ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದರೊಂದಿಗೆ, ಯುವಕರನ್ನು ಮತ್ತು ಪ್ರಾಮಾಣಿಕ ಹಿರಿಯ ನಾಯಕರನ್ನು ಆಯ್ಕೆ ಮಾಡಿ ಜನರ ಸೇವೆ ಮಾಡುವುದಾಗಿ ಖೇಣಿ ತಿಳಿಸಿದರು.

10 ಜನ ಜೈಲಿಗೆ: ನೈಸ್ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಹೊರಬಿದ್ದ ನಂತರ ಮುಖ್ಯ ಕಾರ್ಯದರ್ಶಿ, ಐಎಎಸ್, ಐಪಿಎಸ್ ಅಧಿಕಾರಿಗಳು, ಹಾಲಿ, ಮಾಜಿ ಶಾಸಕರು, ಸಚಿವರು ಸೇರಿದಂತೆ ಒಟ್ಟು ಹತ್ತು ಜನ ಜೈಲಿಗೆ ಹೋಗಲಿದ್ದಾರೆ ಎಂದು ಖೇಣಿ ಭವಿಷ್ಯ ನುಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+