ಬೆಲೆಯೇರಿಕೆ ವಿರೋಧಿ ಮೆರವಣಿಗೆಯಲ್ಲಿ ದೇವೇಗೌಡ

ಜೆಡಿಎಸ್ ಮತ್ತು ಎಡರಂಗ ಹಮ್ಮಿಕೊಂಡಿದ್ದ ರ್ಯಾಲಿ ನೇತೃತ್ವ ವಹಿಸಿದ್ದ ದೇವೇಗೌಡ, ಜನ ಬೆಲೆಯೇರಿಕೆಯಿಂದ ತತ್ತರಿಸಿದ್ದಾರೆ. ಜನಪರ ಹೋರಾಟಕ್ಕೆ ನಾನು ಸದಾ ಸಿದ್ಧ. ಎರಡೂ ಸರಕಾರಗಳು ತಕ್ಷಣ ಬೆಲೆಯೇರಿಕೆಗೆ ಕಡಿವಾಣ ಹಾಕಬೇಕು ಎಂದು ಗುಡುಗಿದ್ದಾರೆ.
ಬೆಳಗ್ಗೆ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಯಿಂದ ಆರಂಭವಾದ ರ್ಯಾಲಿಯಲ್ಲಿ ದೇವೇಗೌಡ ಅವರು ಕಾರ್ಯಕರ್ತರೊಂದಿಗೆ ರಾಜಭವನದವರೆಗೂ ಹೆಜ್ಜೆ ಹಾಕಿದರು. ಬೆಲೆಯೇರಿಕೆ ವಿರೋಧಿಸಿ ಬುಧವಾರ ದೆಹಲಿಯಲ್ಲೂ ಪ್ರತಿಭಟನೆ ನಡೆಸುವುದಾಗಿ ಗೌಡರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.












Click it and Unblock the Notifications