ರೇಷನ್ ಕಾರ್ಡ್ ಸಲ್ಲಿಸಿದರೆ ಮಾತ್ರ ಎಲ್ ಪಿ ಜಿ ಲಭ್ಯ

ಹೀಗೆಂದು ಆಹಾರ ಮತ್ತು ನಾಗರಿಕ ಸರಬರಾಜು, ಹಾಗು ಗ್ರಾಹಕ ವ್ಯವಹಾರಗಳ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರ ಕುರಿತಂತೆ ಕನ್ನಡ ಮತ್ತು ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟಣೆಯನ್ನೂ ನೀಡಿದೆಯಂತೆ. ಈ ಸುದ್ದಿ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆದರೆ, ಗ್ರಾಹಕರು ಮಾತ್ರ ಇದರ ಬಗ್ಗೆ ಎಳ್ಳಷ್ಟೂ ತಿಳಿಯದೆ ಕಂಗಾಲಾಗಿದ್ದಾರೆ.
ಪಡಿತರ ಚೀಟಿ, ಎಲ್ ಪಿಜಿ ಗೊಂದಲ : ಸ್ಪಷ್ಟೀಕರಣ
ಸರಕಾರದ ಅಸಡ್ಡೆಯೋ, ಗ್ರಾಹಕರ ನಿರ್ಲಕ್ಷವೋ ಈ ಸುತ್ತೋಲೆಯ ವಿಷಯ ಸರಿಯಾದ ರೀತಿಯಲ್ಲಿ ಗ್ರಾಹಕರರಿಗೆ ತಲುಪದಿರುವುದು ಮಾತ್ರ ಸತ್ಯ ಸಂಗತಿ. ಪತ್ರಿಕೆಗಳಲ್ಲಿ ಓದಿ ಅಥವಾ ಅವರಿವರಿಂದ ತಿಳಿದು ಗ್ರಾಹಕರು ಮಾತ್ರ ಕೈಯಲ್ಲಿ ರೇಷನ್ ಕಾರ್ಡ್ ಮತ್ತು ವಿದ್ಯುತ್ ಪಾವತಿ ಕಾಪಿಗಳನ್ನು ಹಿಡಿದುಕೊಂಡು ಎಲ್ ಪಿ ಜಿ ಡಿಸ್ಟ್ರಿಬ್ಯೂಟರುಗಳೆದಿರು ಸಾಲುಗಟ್ಟಿ ನಿಂತಿದ್ದಾರೆ.
ಎಲ್ ಪಿ ಜಿ ಸಿಲಿಂಡರುಗಳ ಅಕ್ರಮ ಬಳಕೆಯನ್ನು ತಡೆಯುವ ಉದ್ದೇಶದಿಂದ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಈಗಿನ ನಿಯಮಗಳ ಪ್ರಕಾರ ಎಲ್ ಪಿ ಜಿ ಸಿಲಿಂಡರ್ ಹೊಂದಿದವರ ಬಳಿ ರೇಷನ್ ಕಾರ್ಡ್ ಇರುವುದು ಅಗತ್ಯ. ರೇಷನ್ ಕಾರ್ಡ್ ಇಲ್ಲದವರು ಇತ್ತೀಚಿನ ವಿದ್ಯುತ್ ಬಿಲ್ ಕಟ್ಟಿದ ಪಾವತಿ ಸಲ್ಲಿಸಿದರೂ ಆಯಿತು. ರೇಷನ್ ಕಾರ್ಡ್ ಬೇಕೇನೋ ಸರಿ, ಆದರೆ ಅದು ಇಲ್ಲದವರು ವಿದ್ಯುತ್ ಪಾವತಿ ಸಲ್ಲಿಸಿದರೆ ಸಾಕೆಂದು ಡಿಸ್ಟ್ರಿಬ್ಯೂಟರುಗಳು ಹೇಳುತ್ತಿರುವ ಔಚಿತ್ಯವೇನು? ಇದು ಕೆಲ ಗ್ರಾಹಕರ ಪ್ರಶ್ನೆ.
ಈ ಸುದ್ದಿಯನ್ನು ಸರಿಯಾದ ರೀತಿಯಲ್ಲಿ ಗ್ರಾಹಕರಿಗೆ ತಲುಪದಂತೆ ಮಾಡಿರುವುದು ಕೂಡ ಅನೇಕ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಯ ದಿನಾಂಕ ಫೆ.9. ಮೊದಲು ಜ.29 ಕೊನೆ ದಿನಾಂಕ ನೀಡಲಾಗಿತ್ತು. ಆದರೆ, ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ಇದರ ಬಗ್ಗೆ ಮಾಹಿತಿ ದೊರೆಯದಿದ್ದ ಕಾರಣ ಮತ್ತು ಗ್ರಾಹಕರ ಆಗ್ರಹದ ಮೇರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ.
ಏನೇ ಆಗಲಿ, ಕೂಡಲೆ ರೇಷನ್ ಕಾರ್ಡ್ ಮತ್ತು ವಿದ್ಯುತ್ ಪಾವತಿಯ ಜೆರಾಕ್ಸ್ ಪ್ರತಿಯನ್ನು ಗ್ಯಾಸ್ ಏಜೆನ್ಸಿಗೆ ಕೂಡಲೆ ಸಲ್ಲಿಸಿ. ರೇಷನ್ ಕಾರ್ಡ್ ನಕಲಿನ ಮೇಲೆ ಗ್ರಾಹಕ ಸಂಖ್ಯೆ, ನಿಮ್ಮ ಹೆಸರು ಮತ್ತು ವಿದ್ಯುತ್ ಬಿಲ್ ಮೇಲಿನ ಆರ್ಆರ್ ಸಂಖ್ಯೆ ನಮೂದಿಸುವುದನ್ನು ಮರೆಯಬೇಡಿ. [ಗ್ರಾಹಕ]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications