ರೇಷನ್ ಕಾರ್ಡ್ ಸಲ್ಲಿಸಿದರೆ ಮಾತ್ರ ಎಲ್ ಪಿ ಜಿ ಲಭ್ಯ

ಹೀಗೆಂದು ಆಹಾರ ಮತ್ತು ನಾಗರಿಕ ಸರಬರಾಜು, ಹಾಗು ಗ್ರಾಹಕ ವ್ಯವಹಾರಗಳ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರ ಕುರಿತಂತೆ ಕನ್ನಡ ಮತ್ತು ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟಣೆಯನ್ನೂ ನೀಡಿದೆಯಂತೆ. ಈ ಸುದ್ದಿ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆದರೆ, ಗ್ರಾಹಕರು ಮಾತ್ರ ಇದರ ಬಗ್ಗೆ ಎಳ್ಳಷ್ಟೂ ತಿಳಿಯದೆ ಕಂಗಾಲಾಗಿದ್ದಾರೆ.
ಪಡಿತರ ಚೀಟಿ, ಎಲ್ ಪಿಜಿ ಗೊಂದಲ : ಸ್ಪಷ್ಟೀಕರಣ
ಸರಕಾರದ ಅಸಡ್ಡೆಯೋ, ಗ್ರಾಹಕರ ನಿರ್ಲಕ್ಷವೋ ಈ ಸುತ್ತೋಲೆಯ ವಿಷಯ ಸರಿಯಾದ ರೀತಿಯಲ್ಲಿ ಗ್ರಾಹಕರರಿಗೆ ತಲುಪದಿರುವುದು ಮಾತ್ರ ಸತ್ಯ ಸಂಗತಿ. ಪತ್ರಿಕೆಗಳಲ್ಲಿ ಓದಿ ಅಥವಾ ಅವರಿವರಿಂದ ತಿಳಿದು ಗ್ರಾಹಕರು ಮಾತ್ರ ಕೈಯಲ್ಲಿ ರೇಷನ್ ಕಾರ್ಡ್ ಮತ್ತು ವಿದ್ಯುತ್ ಪಾವತಿ ಕಾಪಿಗಳನ್ನು ಹಿಡಿದುಕೊಂಡು ಎಲ್ ಪಿ ಜಿ ಡಿಸ್ಟ್ರಿಬ್ಯೂಟರುಗಳೆದಿರು ಸಾಲುಗಟ್ಟಿ ನಿಂತಿದ್ದಾರೆ.
ಎಲ್ ಪಿ ಜಿ ಸಿಲಿಂಡರುಗಳ ಅಕ್ರಮ ಬಳಕೆಯನ್ನು ತಡೆಯುವ ಉದ್ದೇಶದಿಂದ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಈಗಿನ ನಿಯಮಗಳ ಪ್ರಕಾರ ಎಲ್ ಪಿ ಜಿ ಸಿಲಿಂಡರ್ ಹೊಂದಿದವರ ಬಳಿ ರೇಷನ್ ಕಾರ್ಡ್ ಇರುವುದು ಅಗತ್ಯ. ರೇಷನ್ ಕಾರ್ಡ್ ಇಲ್ಲದವರು ಇತ್ತೀಚಿನ ವಿದ್ಯುತ್ ಬಿಲ್ ಕಟ್ಟಿದ ಪಾವತಿ ಸಲ್ಲಿಸಿದರೂ ಆಯಿತು. ರೇಷನ್ ಕಾರ್ಡ್ ಬೇಕೇನೋ ಸರಿ, ಆದರೆ ಅದು ಇಲ್ಲದವರು ವಿದ್ಯುತ್ ಪಾವತಿ ಸಲ್ಲಿಸಿದರೆ ಸಾಕೆಂದು ಡಿಸ್ಟ್ರಿಬ್ಯೂಟರುಗಳು ಹೇಳುತ್ತಿರುವ ಔಚಿತ್ಯವೇನು? ಇದು ಕೆಲ ಗ್ರಾಹಕರ ಪ್ರಶ್ನೆ.
ಈ ಸುದ್ದಿಯನ್ನು ಸರಿಯಾದ ರೀತಿಯಲ್ಲಿ ಗ್ರಾಹಕರಿಗೆ ತಲುಪದಂತೆ ಮಾಡಿರುವುದು ಕೂಡ ಅನೇಕ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಯ ದಿನಾಂಕ ಫೆ.9. ಮೊದಲು ಜ.29 ಕೊನೆ ದಿನಾಂಕ ನೀಡಲಾಗಿತ್ತು. ಆದರೆ, ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ಇದರ ಬಗ್ಗೆ ಮಾಹಿತಿ ದೊರೆಯದಿದ್ದ ಕಾರಣ ಮತ್ತು ಗ್ರಾಹಕರ ಆಗ್ರಹದ ಮೇರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ.
ಏನೇ ಆಗಲಿ, ಕೂಡಲೆ ರೇಷನ್ ಕಾರ್ಡ್ ಮತ್ತು ವಿದ್ಯುತ್ ಪಾವತಿಯ ಜೆರಾಕ್ಸ್ ಪ್ರತಿಯನ್ನು ಗ್ಯಾಸ್ ಏಜೆನ್ಸಿಗೆ ಕೂಡಲೆ ಸಲ್ಲಿಸಿ. ರೇಷನ್ ಕಾರ್ಡ್ ನಕಲಿನ ಮೇಲೆ ಗ್ರಾಹಕ ಸಂಖ್ಯೆ, ನಿಮ್ಮ ಹೆಸರು ಮತ್ತು ವಿದ್ಯುತ್ ಬಿಲ್ ಮೇಲಿನ ಆರ್ಆರ್ ಸಂಖ್ಯೆ ನಮೂದಿಸುವುದನ್ನು ಮರೆಯಬೇಡಿ. [ಗ್ರಾಹಕ]
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications